ಚಳ್ಳಕೆರೆ ಜನಧ್ವನಿ ವಾರ್ತೆ ನ.26 ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕನೊಬ್ಬ ಆತಪ್ಪಿ ಬಿದ್ದಗಾಯಗೊಂಡು ದಾವಣೆಗೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಳೆಕಿಗೆ ಬಂದಿದೆ.
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಐದು ಮಹಡಿ ಕಟ್ಟಡ ನಿರ್ಮಾಣದ ವೇಳೆ ಕಟಪ್ಪನಹಟ್ಟಿಯ ಕುಮಾರಸ್ವಾಮಿ ಯಾನೆ ಸಮತೋಷ್ (40) ಡಿ.24 ರಂದು ಕಟ್ಟಡ ಕಾಮಗಾರಿ ನಿರ್ಮಾಣದ ವೇಳೆ ಸೀಮೆಂಟ್ ಚೀಲವನ್ನು ಹೊತ್ತುಕೊಂಡು ಮೊದಲ ಮಹಡಿಗೆ ಹೋಗುವಾಗ ಆಯಾ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ,
ಮೃತನ ತಾಯಿ ಪಾಲಮ್ಮ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಟ್ಟಡ ಮಾಲಿಕನಾದ ಅಬ್ಬಾಸ್ ಐದು ಹಂತಸ್ಥಿನಕಟ್ಟಡ ಕಾಮಗಾರಿ ನಿರ್ಮಾಣ ಮಾಡುತ್ತಿದ್ದು ಇದರ ಗುತ್ತಿಗೆ ಕೆಲಸವನ್ನು ಜೆ.ಪಿ ಪಾಲಯ್ಯ ಮಾಡಿಕೊಂಡಿದ್ದು ಕಟ್ಟಡ ಕಾಮಗಾರಿ ಮಾಡುವ ಕೂಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ಸಾಮಾಗ್ರಿಗಳಾದ ತಲೆಗೆ ಹೆಲ್ಮೆಟ್,ಕೈ ಹಾಗೂ ಕಾಲಿಗೆ ಗ್ಲೌಸ್ ,ಶೂ ನೀಡದೆ ನಿಲ್ಷಕ್ಷ ತೋರಿರುವುದರಿಂದ ನಮ್ಮ ಮಗೆ ಸೀಮೆಂಟ್ ಹೊತ್ತು ಎರಡನೇ ಮಹಡಿಗೆ ಹೋಗುವಾಗ ಬಿದ್ದು ಮೃತ ಪಟ್ಟಿರುತ್ತಾನ್ನೆ ಆದ್ದರಿಂದ ಬಿಲ್ಡಿಂಗ್ ಮಾಲಿಕ ಅಬ್ಬಾಸ್ ಪವಾರ್ ಹಾಗೂ ಗುತ್ತಿಗೆದಾರ ಪಾಲಯ್ಯನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ ದೂರು ಸ್ವೀಕರಿ ಪಿಎಸ್ ಐ ಸತೀಶ್ ನಾಯ್ಕ ಸ್ಥಳ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಳಿಸಿಕೊಂಡಿದ್ದಾರೆ.
ಸಾರ್ವಜನಿಕರ ಆರೋಪ,
![](https://janadhwani.in/wp-content/uploads/2023/12/IMG-20231226-WA0180.jpg)
ನಗರದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪಕ್ಕದಲ್ಲೇ ಐದು ಮಹಡಿಕಟ್ಟಡ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಪರವಾನಿಗೆ ಎಷ್ಟು ಕಟ್ಟಡ ನಿರ್ಮಾನಕ್ಕೆ ನಗರಸಭೆ ಪರವಾನಿಗೆ ನೀಡಿದೆ ಹಾಗೂ ರಸ್ತೆ ಪಕ್ಕದಲ್ಲೇ ವಾಣೀಜ್ಯ ಮಳಿಗೆ ಹಾಗೂ ಐದು ಮಹಡಿ ಕಟ್ಟಡ ನಿರ್ಮಾ ಣದಿಂದ ವಾಹನ ನಿಲುಗಡೆಗೆ ಜಾಗ ಮೀಸಲಿಟ್ಟಿದ್ದಾರೆಯೇ ಎಂಬುದು ಪರಿಶೀಲನೆ ಮಾಡು ಮೂಲಕ ಐದು ಮಹಡಿಕಟ್ಟಡ ನಿರ್ಮಾ ಣ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆನಡೆಸಿ ಕಟ್ಟಡ ನಿರ್ಮಾಣದ ಮಾಲಿಕರ ವಿರುದ್ದ ಕ್ರಮ ಕೈಗೊಲ್ಳುವಂತೆ ಒತ್ತಾಯಿಸಿದ್ದಾರೆ.
0 Comments