ಚಳ್ಳಕೆರೆ ಸೆ.26.ಜಾನುವಾರುಗಳಿಗೆ ಗಂಭೀರ ಕಾಯಿಲೆಯಾಗಿ ಕಾಡುತ್ತಿರುವ ಕಾಲುಬಾಯಿ ಜ್ವರ ರೋಗ ಸಂಪೂರ್ಣ ತಡೆಗಟ್ಟಲು ಪಲ್ಸ್ ಪೋಲಿಯೊ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಲಸಿಕೆ ಹಾಕಲಾಗುತ್ತಿದೆ. ರೈತರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪಶು ಇಲಾಖೆಯ ,ಸಹಾಕ ನಿರ್ದೇಶಕ ಡಾ. ರೇವಣ್ಣ ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಶುಸಂಗೋಪನೆ ಇಲಾಖೆಯಿಂದ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಲಸಿಕೆ ಹಾಕುವ ಮೂಲಕ ರೈತರಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ 2019 ರಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲ ಹಮ್ಮಿಕೊಳ್ಳಲಾಗುತ್ತಿದ್ದು, ನಾಲ್ಕನೇ ಸುತ್ತಿನ ಕಾಲುಬಾಯಿರೋಗ ಲಸಿಕಾ ಕಾರ್ಯಕ್ರಮವನ್ನು 2023ರಹಮ್ಮಿಕೊಳ್ಳಲಾಗುವುದು.”ಕಾಲುಬಾಯಿರೋಗವನ್ನು ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯ ಮತ್ತು ಪರಿಹಾರ”, “ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಮತ್ತು ರಕ್ಷಸಿ”
ರೋಗ ತಡೆಗಟ್ಟಬೇಕಾದರೆ ಎಲ್ಲ ರಾಸುಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಕಾಲುಬಾಯಿರೋಗಕ್ಕೆ ತುತ್ತಾಗುವ ಪ್ರಾಣಿಗಳು: ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳು
ಲಕ್ಷಣಗಳು: ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು,
ಕಾಲುಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು.
ಕಾಲುಬಾಯಿ ರೋಗ ಹರಡುವಿಕೆ:
ರೋಗಗ್ರಸ್ಥ ಪ್ರಾಣಿಗಳಿಂದ ನೇರ ಸಂಪರ್ಕ.
ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು.
ಗಳ ಮುಖಾಂತರ ಪ್ರಸರಣ.
ದನಗಳ ಸಂತೆ ಮತ್ತು ಜಾತ್ರೆಗಳು.
ಜೊಲ್ಲು ಸುರಿಸುವುದು.
ರಾಸುಗಳ ಆರೈಕೆ:
ಕಾಲು ಮತ್ತು ಬಾಯಿಯಲ್ಲಿನ ಹುಣ್ಣನ್ನು ಶೇಕಡಾ 0.5 ರಷ್ಟು ಅಡುಗೆ ಸೋಡ
ದ್ರಾವಣದಿಂದ ಶುದ್ಧಗೊಳಿಸುವುದು.
ಮೃದು ಆಹಾರವಾದ ಗಂಜಿ, ಬಾಳೆ ಹಣ್ಣು, ರಾಗಿ ಅಂಬಲಿ ತಿನಿಸುವುದು.
ಆಂಟಿಬಯೋಟಿಕ್ಸ್ ಮತ್ತು ವಿಟಮಿನ್ ಇಂಜೆಕ್ಷನ್ ಕೊಡಿಸುವುದು.
ರೋಗ ತಡೆಗಟ್ಟುವಿಕೆ:
ರೋಗಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ
ಉಪಚರಿಸುವುದು.
ಶುಚಿತ್ವಕ್ಕೆ ಮಹತ್ವ ನೀಡಿ, ಕ್ರಿಮಿನಾಶಕ ದ್ರಾವಣವನ್ನು ಬಳಸಿ ದಿನಕ್ಕೆ 3-4 ಬಾರಿ
ಕೊಟ್ಟಿಗೆ ಮತ್ತು ಆವರಣ ಶುಚಿಗೊಳಿಸುವುದು.
ರೋಗಪೀಡಿತ ಜಾನುವಾರುಗಳನ್ನು ಉಪಚರಿಸುವವರು ಸಹ ಇತರ ಜಾನುವಾರುಮಾಲೀಕರ ಸಂಪರ್ಕದಿಂದ ದೂರ ಇರುವುದು.ರೋಗೋದ್ರೇಕದ ಸಂದರ್ಭದಲ್ಲಿ ಹೊಸದಾಗಿ ಜಾನುವಾರುಗಳನ್ನು ಕೊಳ್ಳುವುದು,
ಜಾತ್ರೆ ಅಥವಾ ಸಂತೆಗಳಲ್ಲಿ ಮಾಲೀಕರು ಮತ್ತು ಜಾನುವಾರುಗಳು ಭಾಗವಹಿಸುವುದು
ಅಸುರಕ್ಷಿತ.
ಜಾತ್ರೆ ಅಥವಾ ಸಂತೆಗಳಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಕನಿಷ್ಟ 21 ದಿನಗಳ
ಹಿಂದೆ ಲಸಿಕೆ ಮಾಡಿದ ಪ್ರಮಾಣಪತ್ರ ಕಡ್ಡಾಯ.
“ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಮಾರ್ಗವಾಗಿದ್ದು,
ರೋಗದಿಂದ ಪೂರ್ಣ ಸುರಕ್ಷತೆಗಾಗಿ ಸತತವಾಗಿ ಕನಿಷ್ಟ ಎರಡು ಬಾರಿ ಲಸಿಕ
ಹಾಕುವುದು ಅತ್ಯಗತ್ಯ. ಅದುದರಿಂದ, ಹಿಂದೆ ಎಷ್ಟೇ ಬಾರಿ ಲಸಿಕ ಹಾಕಿಸಿದ್ದರೂ ಸಹ,
ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ
ಲಸಿಕಾಕಾರ್ಯಕ್ರಮದಲ್ಲಿ, ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ರೈತರಿಗೆ ಮಾಹಿತಿ ನೀಡಿದರು.
ನಿಮ್ಮ ಗ್ರಾಮಗಳಿಗೆ ಪಶುವೈದ್ಯಾಧಿಕಾರಿಗಳು ಲಸಿಕೆ ಹಾಕಲು ಬಂದಾಗ ಕೆಲಸಗಳನ್ನು ಬದಿಗೊತ್ತಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿರುವ ಬಗ್ಗೆ ತಂಡಕ್ಕೆ ಸರಿಯಾದ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments