ಚಳ್ಳಕೆರೆ ಮೇ29 ಕರ್ನಾಟಕ ಸರ್ಕಾರ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ,ದಾವಣಗೆರೆ ವಿಶ್ವವಿದ್ಯಾ ನಿಲಯ ಹೆಚ್ .ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ರೋವರ್ಸ್ ಮತ್ತು ರೇಂಜಸ್ ಪದಕ ತರಬೇತಿ ಮತ್ತು ನಿಪುಣ ಪರೀಕ್ಷೆಯ ಶಿಬಿರದ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿದ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗ ಗಳಿಗೆ ಶಿಬಿರದ ನಾಯಕರಾದ ರಾಜೇಶ್ ವಿ ಅವಲಕ್ಕಿ ಇವರುಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಹಾಗೂ ಶಿಬಿರದಲ್ಲಿ ನಿಮಗೆ ನೀಡಿದ ಮಾಹಿತಿಗಳನ್ನ ಹಾಗೂ ನಿಯಮಗಳನ್ನ ಪಾಲಿಸಿ ಲಾಕ್ ಬುಕ್ ಗಳನ್ನು ಪರಿಪೂರ್ಣಗೊಳಿಸಲು ತಿಳಿಸಿದರು.
ಜಿಲ್ಲಾ ನೋಡಲು ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಹೆಚ್ ತಿಪ್ಪೇಸ್ವಾಮಿಯವರು ಮಾತನಾಡುತ್ತಾ ನಿಪುನ್ ಪರೀಕ್ಷಾ ಶಿಬಿರವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ ದಿನಮಾನಗಳಲ್ಲಿ ರಾಜ್ಯಪಾಲರ ಪ್ರಮಾಣ ಪತ್ರವನ್ನು ಪಡೆಯಲು ನೀವುಗಳು ಅರ್ಹರಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ರೇಂಜರ್ಸ್ ವಿಭಾಗದ ನಾಯಕಿಯಾದ ಡಾಕ್ಟರ್ ಲೀಲಾವತಿ ಸಹಪ್ರಾಧ್ಯಾಪಕರು ಡಾಕ್ಟರ್ ಗಂಗಾಧರ್ ಆರ್ ಸಹ ಪ್ರಧ್ಯಾಪಕರು ಪ್ರೊಫೆಸರ್ ಗಿರೀಶ್ ಪ್ರೊಫೆಸರ್ ಜಗನ್ನಾಥ್ ಸಹಾಯಕ ಪ್ರಾಧ್ಯಾಪಕರು ಹಾಗೂ ಜಿಲ್ಲಾ ಸಂಘಟಕರಾದ ಪಾಟೀಲ್ ಜಿಬಿ ಸಿ ಚಿತ್ರದುರ್ಗ ಜಗನ್ನಾಥ್ ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿ ಒಂದು ತರಬೇತಿಯ ಸದುಪ ಯೋಗವನ್ನು ಪಡೆದು ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನ ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು
0 Comments