ಚಳ್ಳಕೆರೆ ಜನಧ್ವನಿ ವಾರ್ತೆ ಮ.29 ಅತಿಥಿ ಉಪನ್ಯಾಸಕರು ಉದ್ಯೋಗ ಭದ್ರತೆಗಾಗಿ ಕರ್ತವ್ಯಕ್ಕೆ ಗೈರು ಹಾಜರಿಯಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು..
ನಗರದ ಹೆಚ್ ಪಿ ಪಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪ್ರಾಚರ್ಯರ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಿಮೆ ವೇತನಕ್ಕೆ ನಿಗಧಿತ ಸಮಯಕ್ಕೆ ಪಠ್ಯಗಳ ಬೋದನೆ ಮಾಡುತ್ತೇವೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಹಕಾರಿಯಾಗುವಂತೆ ವಿಶೇಷ ತರಗತಿಗಳನ್ನು ಮಾಡುತ್ತೇವೆ ಆದರೆ ಪ್ರಾಚಾರ್ಯರು ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತಾರೆ, ರಾಜ್ಯಾದ್ಯಂತ ಎಲ್ಲಾ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದಾರೆ ಅದರಂತೆ ನಾವೂ ಸಹ ಪ್ರತಿ ಭಟನೆ ಮಾಡಲು ಮುಂದಾಗಿದ್ದೇವೆ,
ಪ್ರತಿಭನಟೆ ಮಾಡಲು ವೈಯುಕ್ತವಾಗಿ ಪ್ರತಿಭಟನೆ ಮಾಡುವ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಅನುಮತಿ ಪಡೆಯಬೇಕು ಇಲ್ಲವಾದರೆ ಹೊರ ನಡೆಯಿರಿ ಎಂದು ಏಕವಚನದಲ್ಲಿ ಹೇಳುತ್ತಾರೆ. ಇದರಿಂದ ಕೆಲ ಕಾಲ ಪ್ರಾಚರ್ಯ ಹಾಗೂ ಅತಿಥಿ ಉಪನ್ಯಾಸಕರನ ನಡುವೆ ಮಾತಿನ ಚಕಮಕಿ ನಡೆಯುತ್ತದೆ, ನಾವೇನು ಇವರ ಮನೆಗೆ ಬಂದಿದ್ದೇವೆಯೇ ಹೊರಗೆ ಹೋಗಿ ಎಂದು ಹೇಳಲು ಎಂದು ಅತಿಥಿ ಉಪನ್ಯಾಸಕಿ ಪ್ರಾಚಾರ್ಯರ ವಿರುದ್ದ ಕಿಡಿ ಕಾರಿದ್ದಾರೆ.
ನಮಗೆ ಬರಬೇಕಾಗಿರುವ ಬಾಕಿ ವೇತನ, ಉದ್ಯೋಗ ಭದ್ರತೆ ಇವೆಲ್ಲವೂಸಿಗುವುದು ಯಾವಾಗ. ಎಂಭ ಆತಂಕದಲ್ಲಿದ್ದೇವೆಪ್ರತಿಭಟನೆ ಮಾಡಿದರೂ ಸರಕಾರ ನಮ್ಮ ಸೇವಾ ಭದ್ರತೆ ಹಾಗೂ ವೇತನ ನೀಡುವಲ್ಲಿ ವಿಳಂಭ ದೋರಣೆ ಮಾಡುತ್ತಿದೆ.
ನಮ್ಮೆಲ್ಲ ನೋವುಗಳನ್ನು ನುಂಗಿಕೊಂಡು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಎಲ್ಲ ಸತ್ಯ ಗೊತ್ತಿರುವ ಸರ್ಕಾರ ಮತ್ತು ಇಲಾಖೆ ನಮ್ಮತ್ತ ಗಮನ ನೀಡುತ್ತಿಲ್ಲ ಎಂದು ಪ್ರತಿಭಟನೆ ನಿರತ ಬಸವರಾಜ್ , ಯರ್ರಿಸ್ವಾಮಿ, ಅನಿಲ್, ಶ್ರೀನಿವಾಸ್,ಶೋಭ,ಶಿಲ್ಪ, ಇತರರಿದ್ದರು..
0 Comments