ಚಳ್ಳಕೆರೆ, 11 : ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಗಿಡ್ಡಾಪುರ ಗ್ರಾಮದ ನಿವಾಸಿ
ತಿಪ್ಪೇಸ್ವಾಮಿ (38) ಮೃತ ವ್ಯಕ್ತಿ. ಚಳ್ಳಕೆರೆ ತಾಲ್ಲೂಕಿನ ಗಿಡ್ಡಾಪುರ ಗ್ರಾಮದ ನಿವಾಸಿ ಟಿ.
ತಿರುಮಲೇಶ್ ಆಟೋದಲ್ಲಿ ಪ್ರಯಾಣಿಕರನ್ಮು ಕರೆದೊಯ್ಯುವಾಗ
ತಿಪ್ಪೇಸ್ವಾಮಿ ನಾಯಕನಹಟ್ಟಿಗೆ ಸಿಲಿಂಡರ್ ತುಂಬಿಸಿಕೊಂಡು ಬರಲು ಆಟೋದಲ್ಲಿ
ಹೋಗುತ್ತಿದ್ದಾಗ ನಾಯಕನಹಟ್ಟಿ ಯ ಕೆಇಬಿ ಕಚೇರಿಯ ಮುಂದೆ ಹಾದುಹೋಗುವ ನಾಯಕನಹಟ್ಟಿ
ತಳಕು ರಸ್ತೆಯಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ
ಚಾಲನೆ ಮಾಡಿಕೊಂಡು ಬರುತ್ತಿರುವಾಗ ನಾಯಿ ಅಡ್ಡ ಬಂದಿದ್ದು, ನಾಯಿಯನ್ನು ತಪ್ಪಿಸಲು ಹೋಗಿ
ರಸ್ತೆಯ ಎಡಬದಿಗೆ ಬಲುಮಗ್ಗುಲಾಗಿ, ಆಟೋವನ್ನು ಪಲ್ಟಿ ಹೊಡಿಸಿದ ಪರಿಣಾಮ ಆಟೋ
ಜಖಂಗೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ ರವರಿಗೆ ಹೊಟ್ಟೆಗೆ, ಎದೆಗೆ, ಮತ್ತು
ಕೈ ಕಾಲುಗಳಿಗೆ ಒಳಪೆಟ್ಟು ಬಿದ್ದಿದ್ದು, ಆಟೋ ಚಾಲಕ ತಿರುಮಲೇಶನಿಗೆ ಸಹ ಬಲಕಾಲು, ಮುಖಕ್ಕೆ,
ಕೈ ಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ. ಯಾವುದೋ ಒಂದು ವಾಹನದಲ್ಲಿ
ನಾಯಕನಹಟ್ಟಿ, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ
ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ನೋಡಲಾಗಿ
ತಿಪ್ಪೇಸ್ವಾಮಿ ಯು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ನಾಯಕನಹಟ್ಟಿ, ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments