![](https://janadhwani.in/wp-content/uploads/2024/04/IMG-20240401-WA0151.jpg)
ನಾಯಕನಹಟ್ಟಿ::ಏ.1. ಹಟ್ಟಿ ತಿಪ್ಪೇಶನ ಮರಿ ಪರಿಸಿಗೆ ಹರಿದು ಬಂದ ಭಕ್ತ ಸಾಗರ.
ಪಟ್ಟಣದ ಐತಿಹಾಸಿಕ ಮಧ್ಯೆ ಕರ್ನಾಟಕದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಜಾತ್ರಾ ಮಹೋತ್ಸವ ಮಾರ್ಚ್ 26ರಂದು ದೊಡ್ಡ ರಥೋತ್ಸವ ಜರಗಿತು.
ಮಾಡಿದಷ್ಟು ನೀಡು ಭಿಕ್ಷೆ ಎಂಬ ವಾಣಿಯನ್ನು ಜಗತ್ತಿಗೆ ಸಾರಿದ ಮಹಾ ತಪಸ್ವಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ.
ಪ್ರತಿವರ್ಷದಂತೆ ಮಾರ್ಚ್ ತಿಂಗಳಲ್ಲಿ ಚಿತ್ತ-ನಕ್ಷತ್ರದಂದು ಶ್ರೀ ಗುರು ತಿರುದ್ರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೊಡ್ಡ ರಥೋತ್ಸವ ಆದ ಆರನೇ ದಿನ ಮರುಪರಿಸೆ ನಡೆಸಲಾಗುತ್ತದೆ.
ಇಂದು ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮರಿ ಪರಿಸೆಯ ಪ್ರಯುಕ್ತ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತ ಸಾಗರ ತಮ್ಮ ನೆಚ್ಚಿನ ದೇವನಿಗೆ ಉರೀ ಬಿಸಿಲಿನಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಯವರ ಒಳಮಠ ಮತ್ತು ಹೊರಮಠ ದೇವಾಲಯಗಳಲ್ಲಿ ಹೂ. ಹಣ್ಣು. ಕಾಯಿ. ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಲ್ಲಿ ಕೊಬ್ಬರಿ ಸುಟ್ಟು ಭಕ್ತಿಯನ್ನ ಸಮರ್ಪಿಸಿದರು.
0 Comments