ಚಳ್ಳಕೆರೆ ಜನಧ್ವನಿ ವಾರ್ತೆ ಅ.30
ಗ್ರಾಮೀಣ ಕೂಲಿ ಕಾರ್ಮಿಕರ ಕಾಮಧೇನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ದುಡಿದ ಕೈಗಳಿಗೆ ಮೂರು ತಿಂಗಳು ಕಳೆದರೂ ಕೂಲಿ ಹಣ ಸುಮಾರು 6.87 ಕೋಟಿ ರೂ ಕಾರ್ಮಿಕರ ಕೂಲಿ ಹಣ ಪಾವತಿಗಾಗಿ ಕಾರ್ಮಿಕರು ಎದುರು ನೋಡುತ್ತಿದ್ದಾರೆ.
ಈಗಾಗಲೆ ಸಕರಾರ ಚಳ್ಳಕೆರೆ ತಾಲೂಕು ಈ ಬಾರಿಯೂ ಬರಪೀಡಿತ ಪ್ರದೇಶ ಎಂಬ ಹಣೆ ಪಟ್ಟಿಕೊಂಡಿದ್ದು ಪದೆ ಪದೇ ಬರಗಾಲಕ್ಕೆ ತುತ್ತಾಗುತ್ತಿದ್ದು ಒಂದು ವರ್ಷ ಮಳೆಯಾದರೆ ಮತ್ತೊಂದು ವರ್ಷ ವರುಣ ಕಣ್ಮರೆಯಾಗಿ ರೈತರ ಹಾಗೂ ಕೂಲಿ ಕಾರ್ಮಿರೊಂದಿಗೆ ಚೆಲ್ಲಾಟ ವಾಡುವ ಮಳೆರಾಯನಿಂದ ಬೇಸತ್ತು ಕೂಲಿ ಕಾರ್ಮಿಕರು ದೂರದ ನಗರಗಳಿಗೆ ದುಡಿಮೆ ಮಾಡಲು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಜಾರಿಗೆ ತಂದಿದೆ.
ಮಹತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ರೈತರ ಹಾಗೂ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗ ಬೇಕಿತ್ತು ಆಗಸ್ಟ್ 25 ರಂದು ಬಿಡಗಡೆಯಾಗಿದ್ದು ಬಿಟ್ಟರೆ ಮೂರು ತಿಂಗಳು ಕಳೆಯಲು ಬಂದರೂ ಇನ್ನು ಕೂಲಿ ಹಣ ಬಿಡುಗಡೆ ಮಾಡಿಲ್ಲ ಎಂದು ಕೂಲಿ ಕಾರ್ಮಿಕ ಸರಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಕಾಲಕ್ಕೆ ಮಳೆಯಿಲ್ಲದೆ ಬೆಳೆ ಸಂಪೂರ್ಣ ಕೈಕೊಟ್ಟಿದ್ದು ರೈತರು ಬೆಳೆ ವಿಮೆ. ಬೆಳೆಪರಿಹಾರಕ್ಕಾಗಿ ಎದುರು ನೋಡಿದ್ದಾರೆ.
ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಿದ್ದರೂ, ಚಳ್ಳಕೆರೆ ತಾಲೂಕಿನಲ್ಲಿ ನರೇಗಾ ಕಾಮಗಾಗಿ ಪ್ರಗತಿಯಲ್ಲಿದ್ದರೂ ಸಹ ದುಡಿದ ಕೂಲಿ ಕಾರ್ಮಿಕರಿಗೆ ಸುಮಾರು 6.87 ಕೋಟಿ ರೂ ಕೂಲಿ ಹಣ ಬಿಡುಗಡೆಯಾಗದಿರುವುದು ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕೂಲಿ ವಿಳಂಭವಾದರೆ ದಂಢ
ಮಹಾತ್ಮ ಗಾಂಧಿ ರಾಷ್ಟ್ರೀಯಾ ಉದ್ದೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿಕಾರರಿಗೆ ನೇರವಾಗಿ ಕೂಲಿ ಕಾರ್ಮಿಕರ ಖಾತೆಗೆ ವಿತರಣೆ ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳು, ನೌಕರರು, ಕೂಲಿ ಮೊತ್ತಕ್ಕೆ ಶೇ 0.50 ರಷ್ಟು ದಂಡ ಹಾಕಿ ಕೊಡ ಬೇಕೆಂಬ ನಿಯವಿದೆ. ಆದರೆ ಸರಕಾರವೇ ಕೂಲಿ ಹಣ ವಿಳಂಬ ಮಾಡಿದರೆ ದಂಡ ಕಟ್ಟುವವರುಯಾರು ? ಎಂಬ ಪ್ರಶ್ನೆ ತಲೆದೋರಿದ್ದು ಕೂಲಿ ಕೆಲಸ ಮಾಡಿ ಎರಡು ತಿಂಗಳು ಕಳೆದರೂ ಕೂಲಿ ಹಣ ಬಿಡುಗಡೆ ಮಾಡದೆ ಇರುವುದರಿಂದ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ನರೇಗಾ ಯೋಜನೆಯಡಿ ನಿರ್ಮಿಸಿದ ಕಾಮಗಾರಿಗಳು.
ನರೇಗಾ ಯೋಜನೆಯಡಿ ಬದುನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು , ಬಚ್ಚಲು ಇಂಗು ಗುಂಡಿ, ಕೆರೆ ಕಾಲುವೆ , ಅಮೃತ ಸರೋವರ ಮಳೆ ನೀರು ಇಂಗಿಸುವುದು, ಕಲ್ಯಾಣಿ,ರಸ್ತೆ,ಚರಂಡಿ, ಹಾಗೂ ಕೆರೆ ಹೂಳೆತ್ತುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಾಣ ಮಾಡಿದ ಕೂಲಿ ಕಾರ್ಮಿಕರ ಖಾತೆಗೆ ಎರಡು ತಿಂಗಳು ಕಳೆದರೂ ಕೂಲಿ ಹಣ ಪಾವತಿ ಮಾಡಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಬರಗಾಲದಿಂದ ರೈತರು ಜನಸಾಮನ್ಯರು ತತ್ತರಿಸಿ ಹೋಗಿದ್ದು ಇನ್ನು ಎರಡು ತಿಂಗಳು ಇದೇ ರೀತಿ ಮುಂದುವರೆದರೆ ಜನ ಜಾನುವಾರುಗಳಿಗೆ ಕುಡಿಯುವ ನೀರು ,ಮೇವಿಗಾಗಿ ಪರದಾಡ ಬೇಕಾಗುತ್ತದೆ ಕುರಿಗಳಿಗೆ ಮೇವಿಲ್ಲದೆ ಮಲೆನಾಡಿತ್ತ ಕುರಿಗಳನ್ನು ಹೊಡೆದು ಕೊಂಡು ಹೊರಟ್ಟಿದ್ದಾರೆ.
ಇತ್ತ ಗ್ಯಾರೆಂಟ್ ಯೋಜನೆಗಳಿಂದ ಅಭಿವೃದ್ಧಿಗೆ ಅನುದಾನ ಕೊರತೆಯಿಂದ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಆಪರೇಷನ್ ಕಮಲ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಶಾಸಕ ಬಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಸರಕಾರವನ್ನು ಉಳಿಸಿಕೊಳ್ಳಲು ಮುಂದಾಗಿದ್ದು ಸರಕಾರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ .
ಈಗಲಾದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನರೇಗಾ ಬಾಕಿ ಅನುದಾನ ಬಿಡುಗಡೆ ಸೇರಿದಂತೆ ಅಭಿವೃದ್ಧಿಯತ್ತ ಚಿತ್ತ ಹರಿಸುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments