ಚಳ್ಳಕೆರೆ ಜನಧ್ವನಿ ವಾರ್ತೆ ಮೇ 4 ಬರಗಾಲ ಎಂದು ಭಯ ಬೇಡ ನಿಮ್ಮೂರಿನಲ್ಲಿ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿ, ನರೇಗಾ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರದಾನ. ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿಲು ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ ಆದರೆ ಈ ಗ್ರಾಮದಲ್ಲಿ ಉಲ್ಟ ಆಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮನ್ನೆಕೋಟೆ ಗ್ರಾಮದಲ್ಲಿ ಎಂದಿನಂತೆ ಸುಡು ಬಿಸಿಲು ಲೆಕ್ಕಿಸದೆ ಶನಿವಾರ ಕೂಲಿ ಕಾರ್ಮಿಕರು ಕಾಲುವೆ ಹೂಳೆತ್ತುವೆ ಕಾಮಗಾರಿ ಕೆಲಸಕ್ಕೆ ಹೋಗಿ ಕೆಸಲ ಮಾಡುವ ಸ್ಥಳಕ್ಕೆ ಹಾಲಿ ಹಾಗೂ ಮಾಜಿ ಇಬ್ಬರು ಗ್ರಾಪಂ ಸದಸ್ಯರು ಎಂಟ್ರಿಕೊಂಟ್ಟಿದ್ದಾರೆ ಇಲ್ಲಿ ನೀವ್ಯಾರು ಕೆಲಸ ಮಾಡಲು ನಾವು ಮಾಡಿಸ ಬೇಕು ಎಂದು ಗಲಾಟೆ ಮಾಡಿ ಸ್ಥಳದಲ್ಲಿದ್ದ ಕಾಮಗಾರಿ ನಾಫಲಕ ಹೊಡೆದು ಹಾಳು ಮಾಡಿ ನರೇಗಾಕೂಲಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ಇಂತಹ ಬರದ ಪರಿಸ್ಥಿತಿಯಲ್ಲಿ ಮಳೆ ಇಲ್ಲೆ ಬೆಳಲೆ ಇಲ್ಲ ಕೂಲಿಯೂ ಇಲ್ಲ ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಕೆಲಸಕ್ಕೆ ಬಂದರೆ ಅದಕ್ಕೂ ಅಡ್ಡಿ ಪಡಿಸುತ್ತಾರೆ ಎಂದು ಗ್ರಾಪಂ ಕಚೇರಿ ಮುಂದೆ ಕೂಲಿ ಕಾರ್ಮಿಕಕು ಕೆಲಸಕ್ಕೆ ಅಡ್ಡಿ ಪಡಿಸಿದವರ ವಿರುದ್ದ ಪ್ರತಿಭಟನೆ ಮಾಡಿ ಅಕ್ರೋಶ ಹೊರಹಾಕಿದ್ದಾರೆ.
ಕೂಲಿ ಕೆಲಸಕ್ಕಾಗಿ ಗುಳೆ ಹೋಗದೆ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಗಂಡು ಹೆಣ್ಣು ಎಂಬ ಬೇದವಿಲ್ಲದೆ ಇಬ್ಬರಿಗೂ ಸರಿಸಾನ ಕೂಲಿ ನೀಡಲಾಗುವುದು ನರೇಗಾ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಹೊಂದಿದ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕರಿಗ ದುಡಿಯಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಗ್ರಾಮದಲ್ಲಿ ಸದಸ್ಯರ ವೈಯುಕ್ತಿಕ ಕಾರಣಗಳನ್ನಿಟ್ಟುಕೊಂಡು ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಡ್ಡಿ ಪಡಿಸುತ್ತಿರುವುದು ಎಷ್ಟು ಸರಿ..? ಎಂಬ ಪ್ರಶ್ನೆ ಉಂಟಾಗುತ್ತಿದ್ದು ಮತ್ತೆ ಇಂತಹ ಪ್ರಕರಗಳು ಮರುಕಳಿಸದಂತೆ ಸಂಬಂದಪಟ್ಟ ಅಧಿಕಾರಿಗಳು ನರೇಗಾ ಕೆಲಸಕ್ಕೆ ಅಡ್ಡಿಪಡಿಸುವವರಿಗೆ ತಿಳಿ ಹೇಳ ಬೇಕಿದೆ.
0 Comments