ಚಳ್ಳಕೆರೆ ಜನಧ್ವನಿ ವಾರ್ತೆ ಏ 24
ಮೇ 10 ರಂದು ನಡೆಯಲಿರುವ ಚಳ್ಳಕೆರೆ ವಿಧಾನಸಭೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲಿರುವ ‘ಶತಾಯುಷಿ’ ಮಬಬೂಬಿಗೆ ತಾಲೂಕು ಸ್ವೀಪ್ ಸಮಿತಿವತಿಯಿಂದ ಮತದಾನಕ್ಕಾಗಿ ಆಮಂತ್ರಣ ನೀಡಿ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಚಳ್ಳಕೆರೆ ನಗರದ ಕುಪುಂಪು ರಸ್ತೆಯಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮತಗಟ್ಟೆವ್ಯಾಪ್ತಿಯ ನಿವೃತ್ತ ಬೆಸ್ಕಾಂ ಅಧಿಕಾರಿ ಸರ್ವರ್ ಇವರ ಮನೆಯಲ್ಲಿರುವ ಮಹಬೂಬಿ(101) ಮನೆಗೆ ಸ್ವೀಪ್ ಸಮಿತಿ ಅಧ್ಯಕ್ಷ ಹೊನ್ನಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಶತಾಯುಷಿಯೊಂದಿಗೆ ಮಾತನಾಡಿದರು.
ಶತಾಯುಷಿ ಮಹಬೂಬಿ ಮಾತನಾಡಿ ನಮ್ಮ ಕಾಲದಲ್ಲಿ ಅಬ್ಬರ ಪ್ರಚಾರ ಇರಲಿಲ್ಲ ಯಾವುದೇ ಹಣ ಇರುತ್ತಿರಲಿಲ್ಲ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದರೆ 9 ಗಂಟೆ ಒಳಗೆ ಮತಚಲಾಯಿಸುತ್ತಿದೆವೆ ಅದೇ ರೀತಿ ಈಗಿನ ಜನರು ಸಹ ಯಾವುದೇ ಆಮೀಷಕ್ಕೆ ಬಲಿಯಾಗದೆ ಮತಗಟ್ಟೆಗೆ ಹೋಗಿ ಮತಚಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾಳೆ,
![](https://janadhwani.in/wp-content/uploads/2023/04/IMG_20230424_171433-1024x461.jpg)
ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಹೊನ್ನಯ ಮಾತನಾಡಿ ಶತಾಯುಷಿ ಅಜ್ಜಿ ಮತಗಟ್ಟೆಗೆ ಹೋಗಿ ಮತದಾನ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಅದೇ ರೀತಿ ಪ್ರತಿಯೊಬ್ಬರು ಯಾವುದೇ ಆಮೀಷಗಳಿಗೆ ಬಲಿಯಾಗದೆ ಮತಗಟ್ಟೆಗೆ ಹೋಗಿ ಮತದಾನವನ್ನು ಮಾಡುವ ಮೂಲಕ ಶೇ ೧೦೦ ರಷ್ಟು ಮತದಾನ ಮಾಡುವಂತೆ ತಿಳಿಸಿದರು.
ಅಜ್ಜಿ ಮಹಬೂಬಿ ಯಾರು ಸಾರ್ ನೀವು ಎಂದು ಪ್ರಶ್ನೆಕೇಳಿದಾಗ,
ತಾಪಂ ಇಒ ನಾನು ಹೊನ್ನಯ್ಯ ಅಂತ ತಾಲೂಕು ಪಂಚಾಯತ್ ಇಒ ಎಂದು ಹಳಿದಾಗ .
ಅಜ್ಜಿ ಪುಲ್ ಖುಷಿಯಾಗಿ ನನ್ನ ಪತಿ ಆಲೀಸಾಬ್ ಬಿಡಿಒ ಆಫೀನಲ್ಲಿ ಕೆಲಸ ಮಾಡಿದ್ದರು ನೀವು ನನ್ನ ಮಗನಿದ್ದಂಗೆ ಎಂದು ಇಒ ಕೆನ್ನೆಯಿಡಿದು ಮುದ್ದಾಡಿ ಆರ್ಶೀವಾದ ಮಾಡಿದರೂ.
ನಿಮ್ಮಂತ ಹಿರಿಯರ ಆರ್ಶೀಧ ಪಡೆದಿರುವುದು ಪುಣ್ಯ ಎಂದು ತಾಪಂಇಒ ಹೊನ್ನಯ್ಯ ಅಜ್ಜಿಯ ಕಾಲಿಗೆಬಿದ್ದು ನಮಸ್ಕರಿಸಿದರು.
ಈ ಸಂದರ್ಭದಲ್ಲಿ ತಾಪಂ ಯೋಜನಾ ನಿರ್ದೇಶಕ ದಿವಾಕರ್ ಹಾಗೂ ಸಿಬ್ಬಂದಿಗಳು ಉಪಸ್ಥಿತಿತರಿದ್ದರು.
0 Comments