ಚಳ್ಳಕೆರೆ: ನನ್ನ ಸಾಕಿ ಬೆಳೆಸಿದ ನನ್ನ ತಂದೆ-ತಾಯಿಯ ಶಿಸ್ತಿನ ಜೀವನದಿದ್ದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಕನ್ನಡ ರಾಜ್ಯೋತ್ಸವ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಹಾಗು ಹಿರಿಯ ರಂಗಭೂಮಿ ಕಲಾವಿದ ಪಿ. ತಿಪ್ಪೇಸ್ವಾಮಿ ನುಡಿದರು.
ನಗರದ ಕರ್ನಾಟ ರಾಜ್ಯ ನಿವೃತ್ತ ನೌಕರರ ಸಂಘದಿAದ ತಾಲ್ಲೂಕು ಶಾಖಾ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಹಿಂದೆ ಎಷ್ಟೋಂದು ಗೌರವಿರುತ್ತದೆ ಎನ್ನುವುದು ಪ್ರಶಸ್ತಿ ಲಭಿಸಿದ ಮೇಲೆ ನನಗೆ ತಿಳಿಯಿತು. ನಾನು ಪ್ರಶಸ್ತಿ ಹಿಂದೆ ಹೋದವನಲ್ಲ, ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯ, ಕಲೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಬಂದ ನನಗೆ ಈಗಿನ ಸರ್ಕಾರ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜಕ್ಕೆ ಹೊರೆಯಾಗದೆ, ಅಪವಾದ ಮಾಡದೇ ಜೀವನ ನಡೆಸುವುದೇ ಈಗಿನ ವೃತ್ತಿ ಜೀವನವಾಗಿದೆ ಎಂದು ಹೇಳಿದ ಅವರು ಇಂದು ನಿವೃತ್ತ ನೌಕರರು ಮಾಡಿರುವ ಸನ್ಮಾನ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಮಾಡಿದ ಸನ್ಮಾನಕ್ಕಿಂತ ಹೆಚ್ಚು ಸಂತಸ ತಂದಿದೆ ಎಂದು ಹೇಳಿದರು.
ಈ ವೇಳೆ ಕರ್ನಾಟ ರಾಜ್ಯ ನಿವೃತ್ತ ನೌಕರರ ಸಂಘದಿAದ ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷ ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಮುಡಕಗಿರಿಯಪ್ಪ, ಸದಸ್ಯರಾದ ರಾಮಣ್ಣ, ಅಜ್ಜಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments