ಚಳ್ಳಕೆರೆ ಜನಧ್ವನಿ ವಾರ್ತೆ ಡಿ.24 ಪವನ ಪುತ್ರ ಹನುಮ ಜಯಂತಿಯನ್ನು ಈ ಬಾರಿ ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ತಾಲೂಕಿನ ಪ್ರಸಿದ್ದ ಐತಿಹಾಸಿಕ ಮತ್ಸಮುದ್ರ ಗ್ರಾಮದಲ್ಲಿನ ಶ್ರೀಆಂಜನೇಯ ದೇವಾಸ್ಥಾನ ಸೇರಿದಂತೆ ನಗರದ ಪೇಟೆ ಆಂಜನೇಯ. ಕರೆಕಲ್ಲುಆಂಜನೇಯ. ಸೋಮಗುದ್ದು ರಸ್ತೆಯ ವೀರಮಜನೇಯ ಸೇರಿದಂತೆ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಪೂಜೆಯೊಂದಿ ಹನುಮನ ನಾಮ ಜಪ ಮಾಡಲಾಯಿತು.
ಹನುಮ ಜಯಂತಿ ನಿಮಿತ್ತ ನಗರ ಸೇರಿದಂತೆ ತಾಲುಯಕಿನಾದ್ಯಂತ ಶ್ರೀ ಆಂಜನೇಯ ದೇವಸ್ಥಾನಗಳಲ್ಲಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ಪೂಜೆ, ಪುನಸ್ಕಾರ ನೆರವೇರಿಸಲಾಯಿತು
![](https://janadhwani.in/wp-content/uploads/2023/12/IMG-20231224-WA0148.jpg)
![](https://janadhwani.in/wp-content/uploads/2023/12/IMG-20231224-WA0140.jpg)
ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಬಣ್ಣ ಬಣ್ಣದ ರಂಗೋಲಿ, ತಳಿರು-ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಧಾರ್ಮಿಕ ವಿವಿಧಾನಗಳೊಂದಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ಭಕ್ತರು ಶ್ರೀ ಹನುಮನ ದರ್ಶನ ಪಡೆಯಲು ದೇವಸ್ಥಾನಗಳತ್ತ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಆಂಜನೇಯ ದೇವಸ್ಥಾನಗಳ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಅನ್ಮದಾಸೋಹವನ್ನು ಆಯೋಜಿಸಲಾಗಿತ್ತು.
0 Comments