ಚಳ್ಳಕೆರೆ ಜನಶ್ವನಿ ವಾರ್ತೆ ಮಾ.27
ಯಾವುದೇ ದಾಖಲೆಗಳಲ್ಲೆ ವಾಸ ಮಾಡುತ್ತಿರುವ ಜನ ವಸತಿ ಪ್ರದೇಶಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಈಗ ಸರಕಾರ ಅಂತಹ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಶಾಸಕ ಟಿ.ರಘುಮುರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಹೊಸದಾಗಿ ಆಯ್ಕೆಯಾದ ಕಂದಾಯ ಗ್ರಾಮಗಳ1675 ನಿವಾಸಿಗಳಿಗೆ ಕಂದಯಾ ಇಲಾಖೆ ಆಯೋಜಿಸಿದ್ದ ಹಕ್ಕು ಪತ್ರವಿತರಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಸುಮಾರು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸಮಾಡುವ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಸಾವಿರಾರು ಕುಟುಂಬಗಳು ಹಕ್ಕು ಪತ್ರ ಹಾಗೂ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವಿಷಾಧಿಸಿದರು.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 19 ಗ್ರಾಮಗಳಲ್ಲಿ ಲಂಬಾಣಿ, ಬೋವಿ, ಯಾದವ, ಸೇರಿದಂತೆ ವಿವಿಧ ಸಮುದಾಯಗಳು ಸರಕಾರಿ ಹಾಗೂ ಖಾಸಗಿ ಭೂಮಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಂಟುAಬಗಳು ವಾಸ ಮಾಡುವ ಮಜರೆ ಗ್ರಾಮಗಳಲ್ಲಿ ಒಟ್ಟು 19 ಹಳ್ಳಿಗಳಲ್ಲಿ ವಾಸಿಸುವ 1575 ಜನರಿಗೆ ಹಕ್ಕುಪತ್ರ ವಿತರಿಸಿದರು.
ಈ ಗ್ರಾಮಗಳ ನಿವಾಸಿಗಳಿಗೆ ತಮ್ಮ ಮನೆಯಿರುವ ಜಾಗದ ಹಕ್ಕುಪತ್ರ ದೊರೆಯದೆ ಅಭದ್ರತೆಯ ಭಾವ ಕಾಡುತ್ತಿತ್ತು. ಈಗ ಅವರಿಗೆ ಹಕ್ಕು ಪತ್ರ ವಿತರಣೆಯಾಗಿರುವುದು ನೆಮ್ಮದಿ ಮೂಡಿಸಿದೆ. ಉಳಿದ ಗ್ರಾಮಗಳಲ್ಲಿಯೂ ಶೀಘ್ರ ಹಕ್ಕುಪತ್ರ ವಿತರಣೆಯಾಗಲಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬಡಕುಟುಂಬ ಹಾಗೂ ತಳ ಸಮುದಾಯದಕ್ಕೆ ಸರಕಾರದ ಸೌಲಭ್ಯಗಳನ್ನು ತಲುಪಿಸಲು ಮುಂದಾಗುವಮತೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸರಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ವಾಸ ಮಾಡುತ್ತಿದ್ದು 69 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಸಿದಿರು ವಿಕಲಚೇತನರಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡಿದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಮಕ್ಕ , ಉಪಾಧ್ಯಕ್ಷೆ ಮಂಜಳ , ಗ್ರಾಪಂ ಅಧ್ಯಕ್ಷರಾದ ಕಾಟಮಲಿಂಗಯ್ಯ, ಜಯಬಾಯಿ ಕಂದಾಯ ನಿರೀಕ್ಷಕ ಲಿಂಗೇಗೌಡ, ಶಿರಸ್ತೆದಾರ್ ಸದಾಶಿವಪ್ಪ, ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
0 Comments