ಚಳ್ಳಕೆರೆ: ನಗರದ ನಗರಸಭೆ ಕಚೇರಿಯಲ್ಲಿ ಎಸ್.ಎಫ್. ಸಿ 2021-22 ರ ಸಾಲಿನ ಅನುದಾನದ 3.5 ಲಕ್ಷಗಳ ವೆಚ್ಚದಲ್ಲಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಉಪಹಾರ ಡಬ್ಬಿಯ ಕಿಟ್ ವಿತರಿಸಲು ಪೌರಾಯುಕ್ತ ಚಂದ್ರಪ್ಪರವರಿಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಬಿಸಿಲು ಮಳೆ ಗಾಳಿ ಎನ್ನದೆ ಮುಂಜಾನೆಯಿಂದಲೇ ತಮ್ಮ ದಿನನಿತ್ಯದ ಕಾರ್ಯವನ್ನು ಮಾಡುತ್ತಾರೆ ಹೀಗಾಗಿ ನಗರಸಭೆಯ ಅನುದಾನದ ಅಡಿಯಲ್ಲಿ ಉಪಹಾರ ಡಬ್ಬಿಯ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಲ್ಲ ಪೌರಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಆಹಾರ ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ನಗರದ ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಮನವಿ ಮಾಡಿದರು.
ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಪೌರಕಾರ್ಮಿಕರಿಗೆ ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರು ಎಂ.ಚಂದ್ರಪ್ಪ, ಪರಿಸರ ಅಭಿಯಂತರ ನರೇಂದ್ರಬಾಬು, ಹಾಗೂ ಸದಸ್ಯರಾದ ರಾಘವೇಂದ್ರ, ವಿ.ವೈ.ಪ್ರಮೋದ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
0 Comments