ನಗರಸಭೆ ಆಸ್ತಿ ತೆರಿಗೆ ಅವಾಂತರ ಸರಿಪಡಿಸಿ -ಕಸವನಹಳ್ಳಿರಮೇಶ್,ಸಾಮಾಜಿಕ ಕಾರ್ಯಕರ್ತರು..

by | 05/01/24 | ಸುದ್ದಿ


ಹಿರಿಯೂರು ನಗರಸಭೆ ತೆರಿಗೆದಾರರಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಮಾಡುವ ಕಳಕಳಿಯ ಮನವಿ ಏನೆಂದರೆ ನಗರದ ನಾಗರೀಕರಾದ
ನೀವು ನಗರಸಭೆಗೆ ಪಾವತಿಸುವ ಆಸ್ತಿ ತೆರಿಗೆ,ನೀರಿನ ಕಂದಾಯ, ಮಳಿಗೆ ಬಾಡಿಗೆ ಇನ್ನಿತರೆ ಯಾವುದೇ ತೆರಿಗೆ ಆಗಲಿ ಅಥವಾ ಶುಲ್ಕ ಇರಲಿ ರಸೀದಿಗಳನ್ನು ದಯಮಾಡಿ ಭದ್ರವಾಗಿ ಇಟ್ಟುಕೊಳ್ಳಿ. ಬಹುತೇಕ ತೆರಿಗೆದಾರರಿಂದ ನಿತ್ಯ ಬರುತ್ತಿರುವ ದೂರುಗಳೇನೆಂದರೆ ನಗರಸಭೆಯಲ್ಲಿ ನಾಗರೀಕರು ಪಾವತಿಸಲಾದ
ಹಣವನ್ನು ಸಂಬಂಧಪಟ್ಟ ಖಾತೆಗಳಿಗೆ ಕಾಲ ಕಾಲಕ್ಕೆ ಆಯಾ ಹಣಕಾಸು ವರ್ಷದಲ್ಲಿ ಅಪ್ಡೆಟ್
ಮಾಡದೇ ಇರುವುದರಿಂದ,ನಾಗರೀಕರು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಾಗ್ಯೂ ನಗರಸಭೆ ಲೆಡ್ಜರ್ ಗಳಲ್ಲಿ ಕಂದಾಯ ಬಾಕಿ ಇರುತ್ತದೆ. ನೀವೇನಾದರೂ ರಸೀದಿ ಕಳೆದುಕೊಂಡರೆ,ನಿಮ್ಮ ಮಕ್ಕಳು,ಮೊಮ್ಮಕ್ಕಳು ಮತ್ತೊಮ್ಮೆ ದಂಡ ಸಹಿತ ತೆರಿಗೆ ಕಟ್ಟಬೇಕಾಗುತ್ತದೆ. ವಾಸ್ತವ ಸತ್ಯ ಏನೆಂದರೆ,
ತೆರಿಗೆದಾರ ಕಟ್ಟಿದ ತೆರಿಗೆ ಹಣದ ಒಂದು ಚಲನ್ ಕಾಪಿ ಬ್ಯಾಂಕಿನಿಂದ ನಗರಸಭೆಗೆ ಬರುತ್ತದೆ,
ಮತ್ತೊಂದು ಕಾಪಿಯನ್ನು ಜೆರಾಕ್ಷ್ ಮಾಡಿಸಿ ತೆರಿಗೆದಾರರು ಟಪಾಲು ಶಾಖೆಗೆ ಕೊಟ್ಟು ಸ್ವೀಕೃತಿ ಪಡೆದರೂ ಕೂಡ ಸಂಬಂಧಿಸಿದ ಕಂದಾಯ ಶಾಖೆ ನೌಕರರು ಮಾಡುವ ಕರ್ತವ್ಯ ನಿರ್ಲಕ್ಷ್ಯ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಮತ್ತೊಮ್ಮೆ ದಂಡ ಸಹಿತ ನೀವು ಬಾಕಿ ಕಂದಾಯ ಕಟ್ಟಲು ಬಾಧ್ಯಸ್ಥರಾಗುತ್ತೀರಿ.
ಹೀಗಿದ್ದರೂ ಸಹ ಅಲ್ಲಿನ ಸಂಬಂಧಿಸಿದ ವಿಷಯನಿರ್ವಾಹಕರು
ಕಾಲ ಕಾಲಕ್ಕೆ ಆಯಾ ಲೆಕ್ಕ ಶೀರ್ಷಿಕೆಗೆ ಹಣ ಸಂದಾಯ ಆಗಿರುವ ಬಗ್ಗೆ ಪೋಸ್ಟಿಂಗ್ ಮಾಡುವುದಿಲ್ಲ.
ಇದನ್ನ ಮೇಲ್ವಿಚಾರಕರು ಕೂಡ ನೋಡುವುದಿಲ್ಲ. ಸಾರ್ವಜನಿಕರು
ಪ್ರಶ್ನೆ ಮಾಡುವ ತನಕ
ಅಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳುವುದಿಲ್ಲ.ಅಂದ್ರೆ ಆಯಾ ಹಣಕಾಸು ವರ್ಷದ ಆಡಿಟ್ ಯಾವ ರೀತಿ ನಡೆಯುತ್ತಿದೆ ಎಂದು ಅನುಮಾನ ಬರುತ್ತದೆ,ಯಾರೋ ಕಟ್ಟಿದ ತೆರಿಗೆ,ಇನ್ಯಾರದೋ ಖಾತೆಗೆ ಜಮೆಯಾದರೆ ಯಾರು ಹೊಣೆ? ಇದಕ್ಕೆ ಪುಷ್ಟಿ ನೀಡುವಂತೆ ಮನೆ ಕಟ್ಟಿ 10 ರಿಂದ 15 ವರ್ಷ ಕಳೆದರು ಕೆಲವರ ಕಂದಾಯ ಬಾಕಿ ವಸೂಲಿ ಮಾಡಲು ಕ್ರಮ ಜರುಗಿಸಿಲ್ಲ,ಇನ್ನೂ ಕೆಲವು ಕಡೆ ಲಕ್ಷಾನುಗಟ್ಟಲೆ ಕಂದಾಯ ಬಾಕಿ ಇದ್ದವರಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುವ ಮಾತು ಕೂಡ ಕೇಳಿ ಬರುತ್ತಿದೆ.
ಪ್ರಯುಕ್ತ ದಕ್ಷ ಪ್ರಾಮಾಣಿಕ ಅಧಿಕಾರಿ ಪೌರಾಯುಕ್ತರಾದ ಹೆಚ್.ಮಹಾಂತೇಶ್ ರವರು ತಮ್ಮ ಕಚೇರಿ ಬಿಲ್ ಕಲೆಕ್ಟರ್ ಮತ್ತು ಕಂದಾಯ ಶಾಖೆ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡುವ ಮೂಲಕ ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page