ಹಿರಿಯೂರು ನಗರಸಭೆ ತೆರಿಗೆದಾರರಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಮಾಡುವ ಕಳಕಳಿಯ ಮನವಿ ಏನೆಂದರೆ ನಗರದ ನಾಗರೀಕರಾದ
ನೀವು ನಗರಸಭೆಗೆ ಪಾವತಿಸುವ ಆಸ್ತಿ ತೆರಿಗೆ,ನೀರಿನ ಕಂದಾಯ, ಮಳಿಗೆ ಬಾಡಿಗೆ ಇನ್ನಿತರೆ ಯಾವುದೇ ತೆರಿಗೆ ಆಗಲಿ ಅಥವಾ ಶುಲ್ಕ ಇರಲಿ ರಸೀದಿಗಳನ್ನು ದಯಮಾಡಿ ಭದ್ರವಾಗಿ ಇಟ್ಟುಕೊಳ್ಳಿ. ಬಹುತೇಕ ತೆರಿಗೆದಾರರಿಂದ ನಿತ್ಯ ಬರುತ್ತಿರುವ ದೂರುಗಳೇನೆಂದರೆ ನಗರಸಭೆಯಲ್ಲಿ ನಾಗರೀಕರು ಪಾವತಿಸಲಾದ
ಹಣವನ್ನು ಸಂಬಂಧಪಟ್ಟ ಖಾತೆಗಳಿಗೆ ಕಾಲ ಕಾಲಕ್ಕೆ ಆಯಾ ಹಣಕಾಸು ವರ್ಷದಲ್ಲಿ ಅಪ್ಡೆಟ್
ಮಾಡದೇ ಇರುವುದರಿಂದ,ನಾಗರೀಕರು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಾಗ್ಯೂ ನಗರಸಭೆ ಲೆಡ್ಜರ್ ಗಳಲ್ಲಿ ಕಂದಾಯ ಬಾಕಿ ಇರುತ್ತದೆ. ನೀವೇನಾದರೂ ರಸೀದಿ ಕಳೆದುಕೊಂಡರೆ,ನಿಮ್ಮ ಮಕ್ಕಳು,ಮೊಮ್ಮಕ್ಕಳು ಮತ್ತೊಮ್ಮೆ ದಂಡ ಸಹಿತ ತೆರಿಗೆ ಕಟ್ಟಬೇಕಾಗುತ್ತದೆ. ವಾಸ್ತವ ಸತ್ಯ ಏನೆಂದರೆ,
ತೆರಿಗೆದಾರ ಕಟ್ಟಿದ ತೆರಿಗೆ ಹಣದ ಒಂದು ಚಲನ್ ಕಾಪಿ ಬ್ಯಾಂಕಿನಿಂದ ನಗರಸಭೆಗೆ ಬರುತ್ತದೆ,
ಮತ್ತೊಂದು ಕಾಪಿಯನ್ನು ಜೆರಾಕ್ಷ್ ಮಾಡಿಸಿ ತೆರಿಗೆದಾರರು ಟಪಾಲು ಶಾಖೆಗೆ ಕೊಟ್ಟು ಸ್ವೀಕೃತಿ ಪಡೆದರೂ ಕೂಡ ಸಂಬಂಧಿಸಿದ ಕಂದಾಯ ಶಾಖೆ ನೌಕರರು ಮಾಡುವ ಕರ್ತವ್ಯ ನಿರ್ಲಕ್ಷ್ಯ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಮತ್ತೊಮ್ಮೆ ದಂಡ ಸಹಿತ ನೀವು ಬಾಕಿ ಕಂದಾಯ ಕಟ್ಟಲು ಬಾಧ್ಯಸ್ಥರಾಗುತ್ತೀರಿ.
ಹೀಗಿದ್ದರೂ ಸಹ ಅಲ್ಲಿನ ಸಂಬಂಧಿಸಿದ ವಿಷಯನಿರ್ವಾಹಕರು
ಕಾಲ ಕಾಲಕ್ಕೆ ಆಯಾ ಲೆಕ್ಕ ಶೀರ್ಷಿಕೆಗೆ ಹಣ ಸಂದಾಯ ಆಗಿರುವ ಬಗ್ಗೆ ಪೋಸ್ಟಿಂಗ್ ಮಾಡುವುದಿಲ್ಲ.
ಇದನ್ನ ಮೇಲ್ವಿಚಾರಕರು ಕೂಡ ನೋಡುವುದಿಲ್ಲ. ಸಾರ್ವಜನಿಕರು
ಪ್ರಶ್ನೆ ಮಾಡುವ ತನಕ
ಅಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳುವುದಿಲ್ಲ.ಅಂದ್ರೆ ಆಯಾ ಹಣಕಾಸು ವರ್ಷದ ಆಡಿಟ್ ಯಾವ ರೀತಿ ನಡೆಯುತ್ತಿದೆ ಎಂದು ಅನುಮಾನ ಬರುತ್ತದೆ,ಯಾರೋ ಕಟ್ಟಿದ ತೆರಿಗೆ,ಇನ್ಯಾರದೋ ಖಾತೆಗೆ ಜಮೆಯಾದರೆ ಯಾರು ಹೊಣೆ? ಇದಕ್ಕೆ ಪುಷ್ಟಿ ನೀಡುವಂತೆ ಮನೆ ಕಟ್ಟಿ 10 ರಿಂದ 15 ವರ್ಷ ಕಳೆದರು ಕೆಲವರ ಕಂದಾಯ ಬಾಕಿ ವಸೂಲಿ ಮಾಡಲು ಕ್ರಮ ಜರುಗಿಸಿಲ್ಲ,ಇನ್ನೂ ಕೆಲವು ಕಡೆ ಲಕ್ಷಾನುಗಟ್ಟಲೆ ಕಂದಾಯ ಬಾಕಿ ಇದ್ದವರಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುವ ಮಾತು ಕೂಡ ಕೇಳಿ ಬರುತ್ತಿದೆ.
ಪ್ರಯುಕ್ತ ದಕ್ಷ ಪ್ರಾಮಾಣಿಕ ಅಧಿಕಾರಿ ಪೌರಾಯುಕ್ತರಾದ ಹೆಚ್.ಮಹಾಂತೇಶ್ ರವರು ತಮ್ಮ ಕಚೇರಿ ಬಿಲ್ ಕಲೆಕ್ಟರ್ ಮತ್ತು ಕಂದಾಯ ಶಾಖೆ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡುವ ಮೂಲಕ ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments