ಚಳ್ಳಕೆರೆ ಜನಧ್ವನಿ ವಾರ್ತೆ ಸೆ.28. ನಗರದ ಖಾಲಿ ಸೈಟುಗಳಲ್ಲಿ ಕಸ-ಕಡ್ಡಿ, ಗಿಡ- ಗಂಟಿ ಬೆಳೆದಿದ್ದರೆ ಅಂತಹ ಸೈಟಿನ ಮಾಲೀಕರಿಗೆ ದಂಡ ಹಾಕಿ ಸ್ವಚ್ಛಗೊಳಿಸಬೇಕಾದ ಜವಾಬ್ದಾರಿ ಹೊತ್ತಿರುವ ನಗರಸಭೆ ಮಾತ್ರ ಮಾಲಿಕತ್ವದಲ್ಲಿರುವ ಖಾಲಿ ನಿವೇಶನಗಳಲ್ಲಿ ಜನ ಕಸ ತಂದು ಸುರಿಯುತ್ತಿದ್ದರೂ ಕಣ್ಮುಚ್ಚಿಕೊಂಡಿದೆ.
ಹೌದು ಇದು ಚಳ್ಳಕೆರೆ ನಗರ ಒಂದು ಕಾಲದಲ್ಲಿ ಎಕೆಂಡ್ ಬಾಂಬೆ ಎಂಬ ಕೀರ್ತಿಗೆ ಪಡೆದ ಚಳ್ಳಕೆರೆ ಈಗ ಎಣ್ಣೆ ಗಿರಣಿಗಳು ಮುಚ್ಚಿರುವುದರಿಂದ ಸೆಕೆಂಡ್ ಬಾಂಬೆ ಹೋಗಿ ವಿದ್ಯಾನಗರಿ, ವಿಜ್ಞಾನ ನಗರಿ ಎಂಬ ಖ್ಯಾತಿ ಪಡೆದು ಡಿಆರ್ ಡಿ ಒ, ಸೇರಿಂದ ವಿವಿಧ ಸಂಶೋದನಾ ಕೇಂದ್ರಗಳು ತಲೆ ಎತ್ತಿ ದೇಶದ ಭೂಪಟದಲ್ಲಿ ಸೇರಿರುವ ಚಳ್ಳಕೆರೆ ನಗರದ ಗಂಗಾಭವಾನಿ ಲಾಡ್ಜ್, ಶಾಂತಿನಗರ, ಸೋಮಗುದ್ದು ರಸ್ತೆಯ ಪ್ರವಾಸಿ ಮಂದಿರದ ಪಕ್ಕದ ಖಾಲಿ ನಿವೇಶನ ಸೇರಿಂದತೆ ಬಹುತೇಕ ವಾರ್ಡ್ ಗಳಲ್ಲಿ ಜನ ವಸತಿ ಪ್ರದೇಶಗಳ ಖಾಲಿ ನಿವೇಶನಗಳ ಸ್ವಚ್ಚತೆ ಇಲ್ಲದೆ ಹಾಗೂ ನಿರ್ವಹಣೆ ಇಲ್ಲದೆ ಗಿಡಗೆಂಟೆಗಳು ಬೆಳೆದು ಜನ ವಸತಿ ಪ್ರದೇಶಗಳ ಖಾಲಿ ನಿವೇಶನಗಳು ಕಸದ ಡಂಪಿಂಗ್ ಕೇಂದ್ರಗಳಾಗಿ ರೋಗಗಳ ಉತ್ಪತ್ತಿ ಕೇಂದ್ರಗಳಾಗಿ ಸೊಳ್ಳೆ ಹಂದಿಗಳ ವಾಸಸ್ಥಳಗಳಾಗಿವೆ.
ಖಾಲಿ ನಿವೇಶನದಲ್ಲಿ ಹಲವು ಜನ ನಿತ್ಯವೂ ಕಸ, ಮುಸುರಿ, ಹಳೆಯ ಬಟ್ಟೆ, ಮೃತಪಟ್ಟವರ ಮೇಲೆ ಧರಿಸಿದ್ದ ಬಟ್ಟೆಗಳನ್ನು ತಂದು ಎಸೆಯುತ್ತಾರೆ. ಇದರಿಂದಾಗಿ ಈ ಸ್ಥಳ ಅಕ್ಷರಶಃ ತಿಪ್ಪೆಯಾಗಿ ಮಾರ್ಪಟ್ಟಿದೆ.
ರಸ್ತೆಬದಿ, ಚರಂಡಿಯಲ್ಲಿ ಕಸ ಎಸೆಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಚಿಕುನ್ ಗುನ್ಯಾ, ಡೆಂಘಿ, ಕಾಲರಾ, ಮಲೇರಿಯಾದಂಥ ಭಯಾನಕ ರೋಗಗಳು ಅಕ್ಕಪಕ್ಕದ ಜನರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹಲ್ಲು ಕಿತ್ತ ಹಾವಿನಂತಾದ ಕಾನೂನು.
ಕಾಯಿದೆ ಪ್ರಕಾರ ಖಾಲಿ ನಿವೇಶನಗಳನ್ನು ಮಾಲೀಕರು ನಿರ್ವಹಣೆ ಮಾಡದಿದ್ದರೆ, ಕ್ರಮ ಕೈಗೊಳ್ಳಬಹುದು. ಮೊದಲು ಖಾಲಿ ನಿವೇಶನದ ಸ್ವಚ್ಛತೆ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಬಹುದು. ಪಾಲಿಸದಿದ್ದರೆ ಪಾಲಿಕೆಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲು ಸಹ ಅವಕಾಶಗಳಿವೆ. ಇದ್ಯಾವುದಕ್ಕೂ ಬಗ್ಗದಿದ್ದರೆ, ಕಾಯಿದೆ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಹ ನಗರಸಭೆಗೆ ಇದೆ ಆದರೆ ಇದು ಯಾವುದೂ ನಮಗೆ ಸಂಬಂಧವಿಲ್ಲ ಎಂಬಂತೆ ಖಾಲಿ ನಿವೇಶನ ಮಾಲಿಕರು ಹಾಗೂ ನಗರಸಭೆ ಮೌನವಹಿಸಿದ್ದು.
ನಗರಸಭೆ ಅಧಿಕಾರಿಗಳು ಮಾತ್ರ ಖಾಲಿ ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಖಾಲಿ ನಿವೇಶನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.
ಜನರೂ ಕೂಡ ಈ ಬಗ್ಗೆ ಜಾಗೃತರಾಗಬೇಕು. ಈಗಾಗಲೇ ನಗರಸಭೆಯಿಂದ ವಿತರಿಸಿರುವ ಎರಡು ಕಸದ ಡಬ್ಬಿಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸದ ವಾಹನ ಮನೆಯ ಬಳಿ ಬಂದಾಗ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂಬುದು ಜನಧ್ವನಿಯ ಡಿಜಿಟಲ್ ಮೀಡಿಯಾದ ಕಳಕಳಿ ಮನವಿ.
0 Comments