ಹಿರಿಯೂರು :
ಆರ್ಯವೈಶ್ಯ ಸಮಾಜದವರು ಈ ವಿಶೇಷ ತಿಂಡಿಮೇಳವನ್ನು ಬಾಯಿರುಚಿಗಾಗಿ ವಿಶೇಷ ತಿಂಡಿಪದಾರ್ಥಗಳನ್ನು ಸ್ಥಳದಲ್ಲೇ ತಯಾರಿಸಿ ನೀಡುತ್ತಿರುವುದಲ್ಲದೆ, ಬಗೆಬಗೆಯ ಪಾನೀಯಗಳನ್ನು ಸಹಅತಿ ಕಡಿಮೆ ದರದಲ್ಲಿ ನೀಡಲು ಮುಂದಾಗಿರುವ 10 ತಂಡದವರಿಗೂ ಅಭಿನಂದನೆಗಳು ಎಂಬುದಾಗಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ನಾಗರಾಜಗುಪ್ತಾ ಹೇಳಿದರು.
ನಗರದ ವಾಸವಿ ಮಹಲ್ ನಲ್ಲಿ ವಾಸವಿ ಜಯಂತಿ ಪ್ರಯುಕ್ತ ಆರ್ಯವೈಶ್ಯ ಮಂಡಳಿ ಸಹಯೋಗದಲ್ಲಿ ವಾಸವಿ ದೀಕ್ಷಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ತಿಂಡಿ ಮೇಳವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ವಿಶೇಷ ವೇಷಾಧಾರಿಗಳಾಗಿ ವಾಸವಿದೇವಿ, ಅನ್ನಪೂರ್ಣೇಶ್ವರಿದೇವಿ, ನಳಮಹಾರಾಜ, ಘಟೋತ್ಕಚರಾಗಿ ಅಡುಗೆಭಟ್ಟ ಮಾಸ್ಟರ್ ಷೆಫ್ ವೇಷ ಧರಿಸಿ ಬಂದು ಉದ್ಘಾಟಿಸಿರುವುದು ಕಾರ್ಯಕ್ರಮಕ್ಕೆ ಮೆರಗು ತಂದಿದೆ ಎಂಬುದಾಗಿ ಅವರು ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಭಾಗವಹಿಸಿದ್ದು, ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂಜೆಯ ತಿಂಡಿಮೇಳ ಕಾರ್ಯಕ್ರಮದಲ್ಲಿ ಸಾಕಷ್ಟು ಆರ್ಯವೈಶ್ಯ ಸಮಾಜದವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಬಗೆಬಗೆಯ ತಿಂಡಿತಿನಿಸುಗಳನ್ನು ಸವಿದು ಆನಂದಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments