ಚಳ್ಳಕೆರೆ ಜನಧ್ವನಿ ವಾರ್ತೆ ಜೂನ್್ 1 ಶ್ರೀರಂಗಪಟ್ಟಣ- ಬೀದರ್ ರಾಜ್ಯ ಹೆದ್ದಾರಿ ಪಟ್ಟಣದಲ್ಲಿ ಹೃದಯ ಭಾಗದಲ್ಲಿ ಹಾದು ಹೋಗುವುದರಿಂದ ವಾಹನಗಳ ಸಂಚಾರಕ್ಕೆ ಪ್ರತಿನಿತ್ಯ ನಗರದ ನೆಹರು ವೃತದ ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರು ತೀವ್ರ ಸಂಕಟವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಬೆಂಗಳೂರು ಮತ್ತು ಮೈಸೂರು, ಬಳ್ಳಾರಿ, ರಾಯಚೂರು, ಬೀದರ್, ಗುಲ್ಬರ್ಗ ಸೇರಿದಂತೆ ವಿವಿಧ ನಗರ ಹಾಗೂ ಪಟ್ಟಣಗಳಿಗೆ ನಗರದ ಮಧ್ಯೆ ಹಾದು ಹೋಗ ಬೇಕಾಗಿದೆ.
ರಸ್ತೆಗೆ ಹೊಂದಿಕೊಂಡು ಅಂಗಡಿ ಮುಗ್ಗಟ್ಟುಗಳು ದ್ವಿಚಕ್ರವಾಹನ ,ಆಟೋ ಸೇರಿದಂತೆ ಇತರೆ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುವುದರಿಂದ ಕೆಲ ಕಾಲ ನೂರಾರು ವಾಹನಗಳು ಸಾಲುಗಟ್ಟಿ ನಿಂತು ರಸ್ತೆ ಸಂಚಾರಕ್ಕೆ ಸಂಚಕಾರವಾಗಿ ಟ್ರಾಫಿಕ್ ಜಾಮ್ ಆಗುತ್ತದೆ. ಇದರಿಂದ ವೃದ್ದರು, ಮಕ್ಕಳು ಸೇರಿದಂತೆ ರಸ್ತೆ ದಾಟಲು ಪ್ರಯಾಸ ಪಡುವಂತಾಗಿದೆ.
ಶಾಸಕ ಟಿ.ರಘುಮೂರ್ತಿ ನಗರದ ಕಾರ್ಯಮಗಳಿಗೆ ಬರುವಾಗ ಅಂಗ ರಕ್ಷಕ ಟ್ರಾಫಿ ನಿಯಂತ್ರಣಕ್ಕೆ ಮುಂದಾದ ಪ್ರಸಂಗ ಜರುತಿತು.
ವಿದ್ಯಾವಂತ ಪ್ರಜ್ಞಾವಂತರು ತಮ್ಮ ವಾಹನಗಳನ್ನು ಹೇಗೆ ಪಾರ್ಕಿಂಗ್ ಮಾಡುತ್ತಾರೆ ಎಂದು ಒಮ್ಮೆ ನಗರದ ರಸ್ತೆ ಪಕ್ಕದಲ್ಲಿನಿಲ್ಲಿಸಿರುವ ವಾಹನಗಳನ್ನು ನೋಢೀಧರೆ ಸಾಕು ಗೊತ್ತಾಗುತ್ತದೆ. ಪೊಲೀಸರು ಸಹ ನಮ್ಮಂತೆ ಮನುಷ್ಟರಲ್ಲವೆ ಅವರು ಸಹ ಎಷ್ಟು ಎಂದು ಹೇಳಲು ಸಾಧ್ಯಕ್ಷ ಲಕ್ಷ ಲಕ್ಷ ರೂ ಹಣ ನೀಡಿ ವಾಹನ ಖರೀದಿ ಮಾಡಿದಂತಹ ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವದು ಎಷ್ಟು ಸರಿ?
ಪ್ರಜ್ಞಾವಂತರ ಪಾರ್ಕಿಂಗ್ ವೈಖರಿ ತಿಳಿದುಕೊಳ್ಳಬಹುದು.ನೆಹರು ವೃತ್ತ, ಬೆಂಗಳೂರು ರಸ್ತೆ, ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಚಿತ್ರದುರ್ಗ ರಸ್ತೆ ಇವುಳು ಸಾರ್ವಜನಿಕ ಪಾರ್ಕಿಂಕ್ ಸ್ಥಳಗಳಾಗಿ ಮಾರ್ಪಟ್ಟಿವೆ ಅನೇಕ ಆಸ್ಪತ್ರೆಗಳಿವೆ.ದಿನ ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಬೈಕುಗಳು, ಕಾರುಗಳು, ಆಟೋಗಳು ಸಂಚರಿಸುತ್ತವೆ.
ಆದರೆ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕಿದೆ. ಜತೆಗೆ ವಾಹನ ಸವಾರರು ಅತಿದುಕೊಳ್ಳಬೇಕ ಬೇಕಿದೆ.
0 Comments