ಹಿರಿಯೂರು :
ಗಣೇಶ ಚತುರ್ಥಿಯ ನಂತರದ ದಿನವಾದ ಭಾದ್ರಪದ ಮಾಸದ ಪಂಚಮಿಯ ದಿನದಂದು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ, ಜೋಕುಮಾರಸ್ವಾಮಿಯನ್ನು ಪೂಜಿಸುವ ಪ್ರತೀತಿಯಿದ್ದು, ನಗರದ ಮನೆಮನೆಗಳಿಗೆ ಬಂದ ಪಾರ್ವತಿ ಪುತ್ರ ಜೋಕುಮಾರಸ್ವಾಮಿ ದೇವರನ್ನು ಮನೆಯ ಗೃಹಿಣಿಯರು ವಿವಿಧ ಹೂಗಳಿಂದ ಸಿಂಗರಿಸಿ, ಗಂಗಾಮತಸ್ತರು ಬುಟ್ಟಿಯಲ್ಲಿ ಹೊತ್ತು ತರುವ ಸ್ವಾಮಿಯನ್ನು ಜನರು ಪೂಜಿಸಿ ಆಶೀರ್ವಾದ ಪಡೆದರು.
ಪಾರ್ವತಿ ಪುತ್ರ ಜೋಕುಮಾರಸ್ವಾಮಿಯನ್ನು ಆರಾಧಿಸಿದರೆ ಊರಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿ, ಜನರು ಸುಭಿಕ್ಷವಾಗಿರುವರೆಂಬ ನಂಬಿಕೆ ಹಿಂದಿನಿಂದಲೂ ಜನರಲ್ಲಿ ಇದ್ದು, ಅದಕ್ಕಾಗಿ ಊರಿನಲ್ಲಿ ಈ ಜೋಕುಮಾರಸ್ವಾಮಿಯನ್ನು ಪ್ರತಿವರ್ಷವೂ ಗಣೇಶ ಹಬ್ಬದ ಮರುದಿನ ಆರಾಧಿಸುತ್ತಾರೆ.
ಮಹಿಳೆಯರು ಪುಟ್ಟಿಗಳಲ್ಲಿ ಜೋಕುಮಾರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ತಲೆಯ ಮೇಲೆ ಬುಟ್ಟಿಯನ್ನು ಹೊತ್ತು ಮನೆಮನೆಗೆ ಹೋಗಿ ಜೋಕುಮಾರಸ್ಮಾಮಿಯ ಪದಗಳನ್ನು ಹಾಡುವ ಮೂಲಕ ಭಕ್ತರ ಮನಸಂತೋಷಗೊಳಿಸಿ, ಭಕ್ತರ ಮನೆಗಳಲ್ಲಿ ನೀಡುವ ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ, ಕಾಣಿಕೆಗಳನ್ನು ಪಡೆಯುವರು. ಬುಟ್ಟಿಯಲ್ಲಿ ಹೊತ್ತು ತಂದ ಜೋಕುಮಾರಸ್ವಾಮಿಗೆ ಭಕ್ತಾಧಿಗಳು ಭಕ್ತಿಭಾವದಿಂದ ದವಸಧಾನ್ಯಗಳನ್ನು ಅರ್ಪಿಸುವ ಮೂಲಕ ಪೂಜೆ ಸಲ್ಲಿಸುವರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments