ಚಳ್ಳಕೆರೆ ಜನಧ್ವನಿ ವಾರ್ತೆ ಜ.24
ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳನ್ನು ಪ್ರತ್ಯೇಕಿಸಿ ಪಂಚಾಯಿತಿ ವ್ಯಾಪ್ತಿಗಳ ಹಳ್ಳಿಗಳ ಅಭಿವೃದ್ಧಿಗೆ ಹೊಸ ಲೇಔಟ್ಗಳಿಂದ ಬರುವ ಆದಾಯದಿಂದ ಅಭಿವೃದ್ಧಿ ಮಾಡಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ನಗರಂಗೆರೆ ಗ್ರಾಪಂನಲ್ಲಿ ಬುಧವಾರ ನಡೆದ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಗ್ರಾಪಂನಲ್ಲಿ ಎಷ್ಟು ಲೇಔಟ್ ಆಗಿವೆ ಮತ್ತು ಎಷ್ಟು ಕಂದಾಯ ವಸೂಲಿಯಾಗುತ್ತಿದೆ ಮಾಹಿತಿ ಕೊಡಿ ಎಂದರು.
ಪಿಡಿಒ ಎಂ.ರಾಮಚAದ್ರ ಮಾಹಿತಿ ನೀಡಿ,ನಗರಂಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 79 ಲೇಔಟ್ಗಳಾಗಿದ್ದು,ವರ್ಷಕ್ಕೆ55 ಲಕ್ಷ ರೂ.ಕಂದಾಯ ವಸೂಲಿಯಾಗುತ್ತಿದ್ದು,ಇನ್ನೂ 40ಲಕ್ಷ ರೂ.ಬಾಕಿಯಿದೆ ಎಂದಾಗ ಶಾಸಕರು ಕಂದಾಯ ಬಾಕಿ ಉಳಿಸಿಕೊಂಡಿರುವರಿಗೆ ನೋಟಿಸ್ ಜಾರಿಗೊಳಿಸಿ ಎಂದು ಸೂಚಿಸಿದರು.
ಸದಸ್ಯ ಮಂಜುನಾಥ್ ಮಾತನಾಡಿ,ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲೇಔಟ್ಗಳಲ್ಲಿ ವಾಣಿಜ್ಯ ಕಟ್ಟಡಗಳು ನಿರ್ಮಾಣ ಮಾಡಿರುವುದರಿಂದ ಯಾವುದಕ್ಕೆ ಎಷ್ಟು ಕಂದಾಯ ನಿಗಧಿಯಾಗಿದೆ ಎಂಬ ಮಾಹಿತಿ ಕೊಡಿ ಹೆಚ್ಚಿನ ಆದಾಯ ಬಂದರೆ ಹಳ್ಳಿಗಳ ಅಭಿವೃದ್ಧಿಗೆ ಅನುಕೂಲವಾಗುವುದು ಎಂದಾಗ ತಾಪಂ ಇಒ ಶಶಿಧರ್ ಪ್ರತಿಕ್ರಿಯಿಸಿ ಮನೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ಕಂದಾಯಯಿದ್ದು,ಈ ಬಗ್ಗೆ ಎಲ್ಲ ಪಂಚಾಯಿತಿಗಳಿಗೆ ಮಾಹಿತಿ ಕಳಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಹಿರಿಯ ನಿರ್ದೇಶಕ ಆರ್.ವಿರುಪಾಕ್ಷಪ್ಪ ಮಾಹಿತಿ ನೀಡಿ,ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕಡೆ ನರ್ಸರಿ ಮಾಡುವ ಉದ್ದೇಶವಿದ್ದು,ಮುಂದಿನ ದಿನಗಳಲ್ಲಿ ಸಸಿ ಬೆಳೆಸಿ ರೈತರಿಗೆ ವಿತರಣೆ ಮಾಡಲಾಗುವುದು ಎಂದಾಗ ಗ್ರಾಪಂ ಸಮಸ್ಯ ಕುಮಾರಸ್ವಾಮಿ ಪ್ರತಿಕ್ರಿಯಿಸಿ ತೋಟಗಾರಿಕೆ ಇಲಾಖೆಗೆ 9 ಎಕೆರೆ ಜಾಗ ಬೇರೆ ಕಡೆ ನೀಡಿರುವುದರಿಂದ ಗ್ರಾಮ ಠಾಣಾದ ಜಾಗ ಬಿಟ್ಟು ಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯ ರಮೇಶ್ ಮಾತನಾಡಿ,ಗ್ರಾಮದ ಸರಕಾರಿ ಶಾಲೆ ಮಳೆಗೆ ಸೋರುತ್ತಿದೆ ಮತ್ತು ಶೌಚಾಲಯ ಬಳಕೆಯಾಗುತ್ತಿಲ್ಲ ಎಂದಾಗ ಶಾಸಕರು ಅತಿ ಅವಶ್ಯಕವಿರುವ ಕಡೆ ಶಾಲೆ ಕಟ್ಟಡಕ್ಕೆ ಅನುದಾನ ನೀಡಲಾಗುತ್ತಿದೆ ಎಂದ ಅವರು, ಕೊಠಡಿಗಳ ದುರಸ್ತಿ ಮತ್ತು ಡೆಸ್ಕ್ಗಳ ಬೇಡಿಕೆ ಪಟ್ಟಿ ಕೊಡಿ ಎಂದು ಬಿಇಒ ಸುರೇಶ್ಗೆ ಸೂಚಿಸಿದರು.
ಸದಸ್ಯರಾದ ಪಾತಲಿಂಗಪ್ಪ,ಕುಮಾರಸ್ವಾಮಿ,ಸತೀಶ್ಕುಮಾರ್,ಗದ್ದಿಗೆಪ್ರಭು,ಲಕ್ಷಿö್ಮದೇವಿ ಇತರರು ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಸರಿಯಾಗಿ ನಡೆಸಿಲ್ಲ.ಕುಡಿವ ನೀರಿನ ಸಮಸ್ಯೆಯಾಗುತ್ತಿದೆ ಎಂಬ ಮಾಹಿತಿಗೆ ಎಇಇ ದಯಾನಂದಸ್ವಾಮಿ ಮಾಹಿತಿ ನೀಡಿ, ಕಾಮಗಾರಿ ನಡೆಯುತ್ತಿದ್ದು,ಸರಿಪಡಿಸುವಂತೆ ತಿಳಿಸಲಾಗುವುದು ಮತ್ತು 3 ಪಂಚಾಯಿತಿಗಳಲ್ಲಿ ಟೆಂಡರ್ ಕರೆಯಬೇಕಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಓಬಯ್ಯ,ಜಿಪಂ ಎಇಇ ಕಾವ್ಯ,ಎಸ್ಟಿ ಇಲಾಖೆ ಕಲ್ಯಾಣಾಧಿಕಾರಿ ಶಿವರಾಜ್,ಪಶು ಇಲಾಖೆ ಎಡಿ ಡಾ.ರೇವಣ್ಣ,ಬಿಇಒ ಕೆ.ಎಸ್.ಸುರೇಶ್,ಕೃಷಿ ತಂತ್ರಾಧಿಕಾರಿ ಮೇಘಾ,ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಾಜಣ್ಣ,ಕುಡಿವ ನೀರಿನ ಇಲಾಖೆ ಎಂಜಿನಿಯರ್ ತಿಪ್ಪೇಸ್ವಾಮಿ,ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ಇತರರಿದ್ದರು.
0 Comments