ಹಿರಿಯೂರು :
ಈ ದೇಶದ ಜನರ ಬಹುಸಂಖ್ಯಾತ ಹಿಂದುಗಳ ಹಲವಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಇದೀಗ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಎಂದೇ ಪ್ರಸಿದ್ಧನಾದ ಶ್ರೀರಾಮಚಂದ್ರನ ವಿಗ್ರಹ ಪ್ರತಿಷ್ಠಾಪನೆಗೆ ಸಮಯ ಕೂಡಿಬಂದಿರುವುದು ನಾಡಿನ ಪ್ರತಿಯೊಬ್ಬರಿಗೂ ಅತ್ಯಂತ ಸಂತಸ ಪಡುವಂತಹ ವಿಷಯವಾಗಿದೆ ಎಂಬುದಾಗಿ ಶಾರದಾಶ್ರಮದ ಮಾತಾಶ್ರೀ ಚೈತನ್ಯಮಯಿಯವರು ಹೇಳಿದರು.
ನಗರದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ಮರ್ಯಾದೆ ಪುರುಷ ನಮ್ಮ ನಿಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮಚಂದ್ರನ ದ್ವಿಗ್ರಹ ಪ್ರತಿಷ್ಠಾಪನೆ ನಡೆಯುತ್ತಿರುವ ಪ್ರಯುಕ್ತ ತಾಲ್ಲೂಕಿಗೆ ಆಗಮಿಸಿದ ಮರ್ಯಾದೆ ಪುರುಷ ಅಯೋಧ್ಯ ಶ್ರೀರಾಮ ಮತ್ತು ಅಯೋಧ್ಯೆಯಲ್ಲಿ ಪೂಜೆ ಮಾಡಲ್ಪಟ್ಟ ಅಕ್ಷತೆಯ ಭವ್ಯ ಮೆರವಣಿಗೆಯನ್ನು ಸ್ವಾಗತಿಸಿ, ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಶ್ರೀರಾಮನ ಅಕ್ಷತೆ ಹಾಗೂ ಫೋಟೋ ಮತ್ತು ಕರಪತ್ರಗಳನ್ನು ನಮ್ಮ ಕಾರ್ಯಕರ್ತರ ಮೂಲಕ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮುಖ್ಯ ಕೇಂದ್ರಗಳ ಮೂಲಕ ಪ್ರತಿ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಪ್ರತಿ ರಾಮಭಕ್ತರ ಮನೆಮನೆಗಳಿಗೆ ತಲುಪಿಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಶ್ರೀ ರಾಮನ ಭವ್ಯ ಚಿತ್ರವನ್ನು, ಹಾಗೂ ಅಯೋಧ್ಯೆಯಿಂದ ತಂದಂತಹ ಶ್ರೀರಾಮನ ಪೂಜಾಅಕ್ಷತೆಯನ್ನು ಅಲಂಕಾರಗೊಂಡ ರಥದ ಮೂಲಕ ನಗರದ ರಂಜಿತ ಹೋಟೆಲ್ ನಿಂದ ನಗರದ ಮುಖ್ಯರಸ್ತೆಯ ಮೂಲಕ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ವಾದ್ಯಮೇಳಗಳ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಭಕ್ತಜನಕೋಟಿ ಶ್ರೀರಾಮನಿಗೆ ಭಕ್ತಿಸಮರ್ಪಿಸಿದರು.
ಈ ಸಂದರ್ಭದಲ್ಲಿ ಹಿರಿಯೂರಿನ ಶ್ರೀರಾಮನ ಅಪಾರ ಭಕ್ತರು, ನಗರದ ಪ್ರಮುಖ ಭಜನಾ ಮಂಡಳಿಗಳ ಮಹಿಳಾ ಸದಸ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪುರುಷರು ಹಾಗೂ ಮಹಿಳೆಯರು ಸಮವಸ್ತ್ರ ಧರಿಸಿಕೊಂಡು, ಭಜನೆ ಮಾಡುವ ಮೂಲಕ ಪ್ರತಿಯೊಬ್ಬರು ಶ್ರೀರಾಮಚಂದ್ರ ಪ್ರಭುವಿಗೆ ಜೈ ಎಂಬ ಘೋಷಣೆ ಮಾಡುತ್ತ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಈ ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀರಾಮ ಕರವೇ ಸೇವಕರು, ವಿಶ್ವ ಹಿಂದೂ ಪರಿಷತ್, ನಗರದ ಎಲ್ಲಾ ಜನಾಂಗೀಯ ಸಂಘ ಸಂಸ್ಥೆಗಳ ಮುಖ್ಯಮಂತ್ರಿ, ಭಜನಾ ಮಂಡಳಿಗಳ ಮಹಿಳಾ ಸದಸ್ಯರುಗಳು ಸೇರಿದಂತೆ ಶ್ರೀನಿವಾಸ್, ವೆಂಕಟೇಶ್, ವಿಶ್ವನಾಥ್, ಚರಣ್, ಸತೀಶ್, ಪ್ರಶಾಂತ್ ಅಭಿಲಾಶ್, ಪ್ರಭಾಕರ್, ಬಿಜೆಪಿ ಮುಖಂಡರಾದ ಲಕ್ಷ್ಮೀಕಾಂತ್, ಗೋವರ್ಧನ್, ಗೋವಿಂದಣ್ಣ, ಎಚ್.ಎಸ್.ಅಮರನಾಥ್, ಅರುಣ್, ಪುರುಷೋತ್ತಮ್, ವಿಶ್ವೇಶ್ವರಯ್ಯ, ರವಿಶಂಕರ್ , ಎಂ.ಎಸ್.ರಾಘವೇಂದ್ರ, ಎಚ್.ವೆಂಕಟೇಶ್, ಎ.ರಾಘವೇಂದ್ರ, ನಗರದ ಪ್ರಮುಖರಾದ ಹೆಚ್.ಎಸ್. ನಾಗರಾಜ್ ಗುಪ್ತಾ, ಮಂಜುನಾಥ್ ಗೂಗಲ್ ವಾಲೆ, ಎಲ್.ಆನಂದಶೆಟ್ಟಿ, ಬಿ.ಕೆ.ನಾಗಣ್ಣ, ಎಸ್.ಜೋಗಪ್ಪ, ಟಿ.ಮಲ್ಲೇಶಪ್ಪ, ರಂಗನಾಥಪ್ಪ, ಮಹಾಬಲೇಶ್ವರ ಶೆಟ್ಟಿ, ಪಿ.ಆರ್.ಸತೀಶ್ ಬಾಬು ನಗರದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments