![](https://janadhwani.in/wp-content/uploads/2023/12/IMG-20231229-WA0082.jpg)
ಚಳ್ಳಕೆರೆ ಡಿ.29
ಈ ದೇಶದ ಜನರ ಬಹುಸಂಖ್ಯಾತ ಹಿಂದುಗಳ ಹಲವಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಇದೀಗ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಎಂದೇ ಪ್ರಸಿದ್ಧನಾದ ಶ್ರೀರಾಮಚಂದ್ರನ ವಿಗ್ರಹ ಪ್ರತಿಷ್ಠಾಪನೆಗೆ ಸಮಯ ಕೂಡಿಬಂದಿರುವುದು ನಾಡಿನ ಪ್ರತಿಯೊಬ್ಬರಿಗೂ ಅತ್ಯಂತ ಸಂತಸ ಪಡುವಂತಹ ವಿಷಯವಾಗಿದೆ ಎಂಬುದಾಗಿದೆ.
ನಗರದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ಮರ್ಯಾದೆ ಪುರುಷ ನಮ್ಮ ನಿಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮಚಂದ್ರನ ದ್ವಿಗ್ರಹ ಪ್ರತಿಷ್ಠಾಪನೆ ನಡೆಯುತ್ತಿರುವ ಪ್ರಯುಕ್ತ ತಾಲ್ಲೂಕಿಗೆ ಆಗಮಿಸಿದ ಮರ್ಯಾದೆ ಪುರುಷ ಅಯೋಧ್ಯ ಶ್ರೀರಾಮ ಮತ್ತು ಅಯೋಧ್ಯೆಯಲ್ಲಿ ಪೂಜೆ ಮಾಡಲ್ಪಟ್ಟ ಅಕ್ಷತೆಯ ಭವ್ಯ ಮೆರವಣಿಗೆಯನ್ನು ಬಿಜೆಪಿ ಮುಖಂಡರು ಹಾಗೂ ಹಿಮಕದುಪರ ಸಂಘಟನೆಗಳು ಸ್ವಾಗತಿಸಿದರ,
ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಶ್ರೀರಾಮನ ಅಕ್ಷತೆ ಹಾಗೂ ಫೋಟೋ ಮತ್ತು ಕರಪತ್ರಗಳನ್ನು ನಮ್ಮ ಕಾರ್ಯಕರ್ತರ ಮೂಲಕ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮುಖ್ಯ ಕೇಂದ್ರಗಳ ಮೂಲಕ ಪ್ರತಿ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಪ್ರತಿ ರಾಮಭಕ್ತರ ಮನೆಮನೆಗಳಿಗೆ ತಲುಪಿಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಶ್ರೀ ರಾಮನ ಭವ್ಯ ಚಿತ್ರವನ್ನು, ಹಾಗೂ ಅಯೋಧ್ಯೆಯಿಂದ ತಂದಂತಹ ಶ್ರೀರಾಮನ ಪೂಜಾಅಕ್ಷತೆಯನ್ನು ಅಲಂಕಾರಗೊಂಡ ರಥದ ಮೂಲಕ ನಗರದ ಗಾಯಿತ್ರಿ ಕಲ್ಯಾಣ ಮಂಟಪದಿಂದ ಹೊರಟು ನಗರದ ಮುಖ್ಯರಸ್ತೆಯ ಮೂಲಕ ಶ್ರೀ ವಾದ್ಯಮೇಳಗಳ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಭಕ್ತಜನಕೋಟಿ ಶ್ರೀರಾಮನಿಗೆ ಭಕ್ತಿಸಮರ್ಪಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ನಗರದಲ್ಲಿ ಕುಂಬಮೇಳ.ಕಳಸದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶ್ರೀರಾಮನ ಅಪಾರ ಭಕ್ತರು, ನಗರದ ಪ್ರಮುಖ ಭಜನಾ ಮಂಡಳಿಗಳ ಮಹಿಳಾ ಸದಸ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪುರುಷರು ಹಾಗೂ ಮಹಿಳೆಯರು ಸಮವಸ್ತ್ರ ಧರಿಸಿಕೊಂಡು, ಭಜನೆ ಮಾಡುವ ಮೂಲಕ ಪ್ರತಿಯೊಬ್ಬರು ಶ್ರೀರಾಮಚಂದ್ರ ಪ್ರಭುವಿಗೆ ಜೈ ಎಂಬ ಘೋಷಣೆ ಮಾಡುತ್ತ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಈ ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀರಾಮ ಕರವೇ ಸೇವಕರು, ವಿಶ್ವ ಹಿಂದೂ ಪರಿಷತ್, ನಗರದ ಎಲ್ಲಾ ಜನಾಂಗೀಯ ಸಂಘ ಸಂಸ್ಥೆಗಳ ಭಜನಾ ಮಂಡಳಿಗಳ ಮಹಿಳಾ ಸದಸ್ಯರುಗಳು ಸೇರಿದಂತೆ ಬಾಳೆಕಾಯಿ ರಾಮದಾಸ್.ಜಗದೀಶ್.ಡಾ.ಮಂಜುನಾಥ್. ಹರಿಶ್.ಮಂಜುನಾಥ .ಸೇರಿದಂತೆ ಹಲವಾರು ಮುಖಂಡರು. ಕಾರ್ಯಕರ್ತರು ಪಾಲ್ಗೊಂಡಿದ್ದರು.
0 Comments