ನಾಯಕನಹಟ್ಟಿ : ಬಿಜೆಪಿಯವರು ಸದರಿ ಚುನಾವಣೆಯಲ್ಲಿ ದೇವರು ಧರ್ಮದ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದರಿಂದ ಅವರ ಅಭಿವೃದ್ಧಿ ಶೂನ್ಯ ಎಂದು ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಯೋಗೀಶ್ಬಾಬು ಹೇಳಿದರು.
ಪಟ್ಟಣದ ಒಳಮಠದಿಂದ ವಾಲ್ಮೀಕಿ ವೃತ್ತದವರೆಗೂ ರೋಡ್ಷೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಕೇಂದ್ರಸರ್ಕಾರ ಕಳೆದ 10ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿ ಕಾರ್ಯಗಳ ಬದಲಿಗೆ ದೇವರು, ಧರ್ಮ, ಹಾಗೂ ಪ್ರಧಾನಿ ನರೇಂದ್ರಮೋದಿಯವರ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದನ್ನು ನೋಡಿದರೆ ಅಭಿವೃದ್ಧಿ ಶೂನ್ಯ ಎಂದು ತಿಳಿದುಬರುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಹಲವು ಯೋಜನೆಗಳಾದ ನರೇಗಾ, ಆಧಾರ್ಕಾರ್ಡ್ ಯೋಜನೆಯನ್ನು ಜರಿದಿದ್ದ ಬಿಜೆಪಿ ಇಂದು ಆಧಾರ್ ಮೂಲಕವೇ ದೇಶದ ಜನರಿಗೆ ನೇರಪಾವತಿ ಯೋಜನೆ ಜಾರಿಗೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳೇ ಹೊಗಳಿದ್ದಾರೆ. ಹಾಗೇ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಸಂಸದರಾಗಿದ್ದ ಅವಧಿಯಲ್ಲಿ ಶಾಲಾಕಾಲೇಜುಗಳಿಗೆ ಶುದ್ಧ ಕುಡಿಯುವ ನೀರಿದ ಘಟಕಗಳು, ನೂರಾರು ಗ್ರಾಮಗಳಿಗೆ ಹೈಮಾಸ್ಟ್ ದೀಪಗಳು, ರಸ್ತೆಗಳ ಅಭಿವೃದ್ಧಿ, ಭದ್ರಾಮೇಲ್ದಂಡೆ ಯೋಜನೆ, ತುಮಕೂರು-ಚಿತ್ರದುರ್ಗ ನೇರರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಿಸಿದಂತೆ ಸಧನದಲ್ಲಿ 587ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಹಾಲಿ ಸಂಸದರಾದ ಎ.ನಾರಾಯಣಸ್ವಾಮಿಯವರು ಸೇರಿದಂತೆ ರಾಜ್ಯದಿಂದ ಗೆದ್ದಿದ್ದ 25ಜನ ಬಿಜೆಪಿ ಸಂಸದರು ರಾಜ್ಯದ ಅಭಿವೃದ್ಧಿಯ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಹೀಗೆ ಅಭಿವೃದ್ಧಿ ಸಾಧಿಸುವಲ್ಲಿ ವಿಫಲರಾಗಿ ಈಗ ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜರಿದರು.
ಇದೇವೇಳೆ ಪ.ಪಂ.ಸದಸ್ಯರಾದ ತಿಪ್ಪೇಶ್, ಪಿ.ಓಬಯ್ಯ, ಜಿಲ್ಲಾ ಕೆರೆಬಳಕೆದಾರರ ಸಂಘದ ಎನ್.ಐ.ಎಂ.ಡಿ.ಮನ್ಸೂರ್, ಮುಖಂಡರಾದ ಎಸ್.ಬಸವರಾಜ್, ಶ್ರೀಕಾಂತ್, ಪಿ.ಕಾಟಂಲಿಂಗಯ್ಯ, ಬಿ.ಕಾಟಯ್ಯ, ಎನ್.ತಿಪ್ಪೇಸ್ವಾಮಿ, ಟಿ.ರುದ್ರಮುನಿ, ಕಾಳಪ್ಪ ಅವರೂ ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments