ಚಳ್ಳಕೆರೆ ಡಿ.6 ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಕನಕ ಯುವಕ ಸಂಘ ಹಾಗೂ ಕುರುಬ ಸಮಾಜದವತಿಯಿಂದ ಕನಕದಾಸರ ಜಯಂತಿಯನ್ನು ವಿಜೃಂಭನೆಯಿಂದ ಅಚರಣೆ ಮಾಡಲಾಯಿತು.
ಕನಕ ಯುವಕ ಸಂಘದ ಅಧ್ಯಕ್ಷ ನ್.ಆರ್.ಲಿಂಗರಾಜ್. ಉಪಾಧ್ಯಕ್ಷ ನಾಗರಾಜ್.ಖಜಾಂಚಿ ವೆಂಕಟೇಶ್ ಹಾಗೂ ಸದಸ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಗ್ರಾಮದ ಮುಖಂಡ ಕರಿಯಣ್ಣ ಮಾತನಾಡಿ ಕನಕದಾಸರು ನಮ್ಮೆಲ್ಲರಿಗೂ ಸ್ಪೂರ್ತಿ, ತಮ್ಮ ಕೀರ್ತನೆಗಳ ಮೂಲಕ ಜಾತಿ ಪದ್ದತಿ, ಮೌಡ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು. ಅವರ ಕೀರ್ತನೆಗಳು ಇಂದಿಗೂ ಸಹ ಹೆಚ್ಚು ಪ್ರಸ್ತುತವಾಗಿದೆ. ಕನಕದಾಸರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
![](https://janadhwani.in/wp-content/uploads/2023/12/IMG-20231206-WA0201.jpg)
ಕಾರ್ಯಕ್ರಮದಲ್ಲಿಜೋಗೇಶ್.ಪ್ರವೀಣ್.ಸತೀಶ್.ವೀರೇಶ್.ವೇಮಣ್ಣ.ಶಿವಕುಮಾರ್.ಗುರುಸ್ವಾಮಿ.ನಿಂಗಣ್ಣ.ತಿಪ್ಪೇಸ್ವಾಮಿ.ರವಿಕಿರಣ್.ಕರಿಯಣ್ಣ.ಎಂ.ಉಮೇಶ್.ಹನುಮಂತರಾಜ್.ಹರೀಶ್.ಓಂಕಾರಪ್ಪ.ಶಿವಲಿಂಗಪ್ಪ.ಗಿರೀಶ್.ನಿಂಗಣ್ಣ ಇತರರಿದ್ದರು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾರೋಟದಲ್ಲಿ ಕನಕದಾಸರ ಭಾವಚಿತ್ರ ದೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಯಲ್ಲಿ ಕುಣಿದು ಕುಪ್ಪಳಿಸಿದರು.
0 Comments