ನಾಯಕನಹಟ್ಟಿ:: ಸರ್ಕಾರ ಒದಗಿಸುವ ಆರೋಗ್ಯ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಿಕಿ ಕೆ ಬಿ ಸುಧಾ ಹೇಳಿದ್ದಾರೆ.
ಅವರು ಸೋಮವಾರ ಸಮೀಪದ
ಜೋಗಿಹಟ್ಟಿಯಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿ. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು. ICTC ಸಮುದಾಯ ಅರೋಗ್ಯ ಕೇಂದ್ರ ನಾಯಕನಹಟ್ಟಿ ಇವರುಗಳ ಸಹಯೋಗದಲ್ಲಿ 2030 ರೊಳಗೆ ಹೆಚ್ಐವಿ ಹೆಪಟೈಟಿಸ್ ಬಿ .ಸೊಂಕು ಮುಕ್ತ ದೇಶವನ್ನಾಗಿಸುವ ಉದ್ದೇಶ ದಿಂದ ಜೋಗಿಹಟ್ಟಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ 141 ಜನರಿಗೆ ಹೆಚ್ಐವಿ ಸಿಪಿಲಿಸ್ ಬಿಪಿ ಹಾಗೂ ಟಿ ಬಿ ಪರೀಕ್ಷೆ ಗಳನ್ನ ಉಚಿತವಾಗಿ ಮಾಡಯಿತು.
ಈ ಶಿಬಿರದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಸ್. ವೆಂಕಟೇಶ್( ದಳಪತಿ) ,ಯುವ ಮುಖಂಡ ಎಚ್ ಬಿ ತಿಪ್ಪೇಸ್ವಾಮಿ, ಆಪ್ತಸಮಾಲೋಚಕರು.ಕೆಂಚಮ್ಮ. ಜಯಪ್ರಕಾಶ್ ಸಂಸ್ಥೆಯ ಸಿಬ್ಬಂದಿಗಳು, ಶೇಷಾದ್ರಿ ನಾಯಕ್, ಅಪೂರ್ವ. ಆಶಾ ಕಾರ್ಯಕರ್ತೆ ಆಶಾಮ್ಮ, ಸೇರಿದಂತೆ ಇನ್ನೂ ಇತರರು ಇದ್ದರು
0 Comments