ದೇವರ ಮರ ಕಡಿಯುವ ಮೂಲಕ ಕ್ಯಾತೇ ದೇವರ ಜಾತ್ರೆಗೆ ಚಾಲನೆ.

by | 18/01/24 | ಸುದ್ದಿ


ಚಳ್ಳಕೆರೆ ಜನಧ್ವನಿವಾರ್ತೆ ಜ.18 ಚನ್ನಮ್ಮನಾಗತಿಹಳ್ಳಿಯ ಕಾಡುಗೊಲ್ಲರ ಕ್ಯಾತಪ್ಪ ಜಾತ್ರೆ ಆರಂಭವಾಗಿದ್ದು, ಗುರುವಾರ ಬೊಮ್ಮನಕುಂಟೆ ಗ್ರಾಮದಲ್ಲಿ ಮರ ಕಡಿಯುವ ಮೂಲಕ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ.

ಜ.21ಭಾನುವಾರ ಕಳ್ಳೆ ಗುಡಿಕಟ್ಟಲು ಬಾರೆ ಕಳ್ಳೆಕಡೆಯಲು ಚಾಲನೆ ಜ.29 ರವರೆಗೆ ವಿವಿಧ ಪೂಜೆ ವಿಧಿವಧಾನಗೊಂದಿಗೆ ಜಾತ್ರೆಗೆ ಬಂದಾ ಸಾವಿರಾರರು ಭಕ್ತಸಾಗರದಲ್ಲಿ ಜಾತ್ರೆ ನಡೆಯುವ ವಸಲು ದಿನ್ನೆನ್ನೆಯಲ್ಲಿ ಮಧ್ಯಾಹ್ನನ 4.30ಕ್ಕೆಸರಿಯಾಗಿ ಎರೆದ ಕಳ್ಳೆಯ ಗುಡಿ ಹತ್ತಿ ಕಳಸ ಇಳಿಸುವುದು.


ಪ್ರೆ.1 ಹುರಳಿ ಧಾನ್ಯ ನೈವೇದ್ಯ ಮಾಡಿ ಕಂಕಣ ವಿಸರ್ಜನೆ ಮಾಡುವುದು.ಫೆ.2 ರಂದು ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥವನ್ನು ಸ್ವೀಕರಿಸಿ ತಮ್ಮ ಊರುಗಳಿಗೆ ತೆರಳುವರು.
ಜ.11 ರಿಂದ ಫೆ. 2 ರವರೆಗೆ ಕೇತೆ ದೇವರ ಜಾತ್ರೆ ವಿಶೇಷ ಬುಡಕಟ್ಟು ಸಂಸ್ಕೃತಿಯ ಪೂಜೆ ಕೈಕರ್ಯಗಳು ನಡೆಯುತ್ತವೆ.
ಜಾತ್ರೆಯ ಹಿನ್ನೆಲೆ: ಕ್ಯಾತಪ್ಪನ ದೇವರು ಮೊದಲು ರೆಡ್ಡಿ ಜನಾಂಗಕ್ಕೆ ಸೇರಿದ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಎಂಬುವವರಿಗೆ ಒಲಿದಿದ್ದರು. ಇದರಿಂದ ಅವರು ಶ್ರೀಮಂತರಾದರು. ಶ್ರೀಮಂತರಾದ ಮೇಲೆ ದೇವರನ್ನು ನಿರ್ಲಕ್ಷಿಸಿ ನವಣೆ ಮತ್ತು ಹುರುಳಿ ಕಣಜದಲ್ಲಿ ಮುಚ್ಚಿಟ್ಟರು. ಇದರಿಂದ ಬೇಸತ್ತ ದೇವರು ಅವರ ಮನೆಯಲ್ಲಿ ದನ ಕಾಯುತ್ತಿದ್ದ ಬೊಮ್ಮಲಿಂಗ ಎಂಬುವವರಿಗೆ ಒಲಿದ ಎಂಬ ಪ್ರತೀತಿ ಇದೆ.

ಜಾತ್ರೆ ವೇಳೆಯಲ್ಲಿ ಮೊದಲು ಹುರುಳಿ ಕೈ ತೊಳೆಯುವ ಮೂಲಕ ಅವರ ಮನೆಯಲ್ಲಿನ ಹುರುಳಿ ಮತ್ತು ನವಣೆಯನ್ನು ಜಾತ್ರೆ ಮುಗಿಯುವ ವರೆಗೆ ಮನೆಯಿಂದ ಹೊರ ಹಾಕುತ್ತಾರೆ. ಈ ಗುಡಿಕಟ್ಟಿಗೆ ಸೇರಿದ ಅಣ್ಣ ತಮ್ಮಂದಿರು ಹುರುಳಿ ಮತ್ತು ನವಣೆಯನ್ನು ಬಳಸುವುದಿಲ್ಲ ಮತ್ತು ಕೈಯಿಂದ ಮುಟ್ಟದೆ ವೃತ ಆಚರಿಸುತ್ತಾರೆ.
ದೇವರ ಮರ ಕಡಿದು ಅಲ್ಲಿಂದ ವಸಲು ದಿಣ್ಣೆ ಮೂಲಕ ತರಲಾಯಿತು. ಇಲ್ಲಿಂದ ಪ್ರತಿನಿತ್ಯ ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ.
ಎರದ ಕಳ್ಳೆ (ಬಾರೆ ಕಳ್ಳೆ)ಯಿಂದ ಜಾತ್ರೆ ನಡೆಯುವ ವಸಲು ದಿನ್ನೆಯಲ್ಲಿ ಕಳ್ಳೆ, ತುಗ್ಗಲಿ ಮೊರು ಮುಂತಾದ ಮುಳ್ಳುಗಳ ಮರಗಳನ್ನು ಕಡಿದು ಗುಡಿ ನಿರ್ಮಿಸಿ ಅದರ ಮೇಲೆ ಕಳಸ ಪ್ರತಿಷ್ಠಾಪಿಸುವರು.

ಜಾತ್ರೆಯ ಪ್ರಧಾನ ಘಟ್ಟ ಕಳಸ ಕೀಳುವುದು. ಅಂದು ವಸಲು ದಿನ್ನೆಯಲ್ಲಿ ಗುಡಿಕಟ್ಟಿಗೆ ಸೇರಿದ 5 ಜನ ಈರಗಾರರು ಬಾರೆ ಕಳ್ಳೆಯ ಗುಡಿ ಹತ್ತಿ ಕಳಸ ಕೀಳುತ್ತಾರೆ. ಇದನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಮೊದಲು ಕಳಸ ಕಿತ್ತ ಈರಗಾರ ವರ್ಷದ ಈರಗಾರ ಎಂಬ ಪ್ರಶಸ್ತಿಗೆ ಭಾಜನರಾಗುತ್ತಾರೆ.
ಚನ್ನಮ್ಮನಾಗತಿಹಳ್ಳಿ ಗ್ರಾಮಪಂಚಾಯತಿ ವತಿಯಿಂದ ಜಾತ್ರೆ ನಡೆಯುವ ಸ್ಥಳದಲ್ಲಿ ಸ್ವಚ್ಚತೆ , ಕುಡಿಯುವ ನೀರು, ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್ ಹಾಗೂ ಸದಸ್ಯರು ಅಗತ್ಯ ಕ್ರಮಗಳನ್ನ ಕೈಗೊಂಡಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page