ದೇವರ ಮರ ಕಡಿಯುವ ಮೂಲಕ ಕ್ಯಾತೇ ದೇವರ ಜಾತ್ರೆಗೆ ಚಾಲನೆ.

by | 18/01/24 | ಸುದ್ದಿ


ಚಳ್ಳಕೆರೆ ಜನಧ್ವನಿವಾರ್ತೆ ಜ.18 ಚನ್ನಮ್ಮನಾಗತಿಹಳ್ಳಿಯ ಕಾಡುಗೊಲ್ಲರ ಕ್ಯಾತಪ್ಪ ಜಾತ್ರೆ ಆರಂಭವಾಗಿದ್ದು, ಗುರುವಾರ ಬೊಮ್ಮನಕುಂಟೆ ಗ್ರಾಮದಲ್ಲಿ ಮರ ಕಡಿಯುವ ಮೂಲಕ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ.

ಜ.21ಭಾನುವಾರ ಕಳ್ಳೆ ಗುಡಿಕಟ್ಟಲು ಬಾರೆ ಕಳ್ಳೆಕಡೆಯಲು ಚಾಲನೆ ಜ.29 ರವರೆಗೆ ವಿವಿಧ ಪೂಜೆ ವಿಧಿವಧಾನಗೊಂದಿಗೆ ಜಾತ್ರೆಗೆ ಬಂದಾ ಸಾವಿರಾರರು ಭಕ್ತಸಾಗರದಲ್ಲಿ ಜಾತ್ರೆ ನಡೆಯುವ ವಸಲು ದಿನ್ನೆನ್ನೆಯಲ್ಲಿ ಮಧ್ಯಾಹ್ನನ 4.30ಕ್ಕೆಸರಿಯಾಗಿ ಎರೆದ ಕಳ್ಳೆಯ ಗುಡಿ ಹತ್ತಿ ಕಳಸ ಇಳಿಸುವುದು.


ಪ್ರೆ.1 ಹುರಳಿ ಧಾನ್ಯ ನೈವೇದ್ಯ ಮಾಡಿ ಕಂಕಣ ವಿಸರ್ಜನೆ ಮಾಡುವುದು.ಫೆ.2 ರಂದು ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥವನ್ನು ಸ್ವೀಕರಿಸಿ ತಮ್ಮ ಊರುಗಳಿಗೆ ತೆರಳುವರು.
ಜ.11 ರಿಂದ ಫೆ. 2 ರವರೆಗೆ ಕೇತೆ ದೇವರ ಜಾತ್ರೆ ವಿಶೇಷ ಬುಡಕಟ್ಟು ಸಂಸ್ಕೃತಿಯ ಪೂಜೆ ಕೈಕರ್ಯಗಳು ನಡೆಯುತ್ತವೆ.
ಜಾತ್ರೆಯ ಹಿನ್ನೆಲೆ: ಕ್ಯಾತಪ್ಪನ ದೇವರು ಮೊದಲು ರೆಡ್ಡಿ ಜನಾಂಗಕ್ಕೆ ಸೇರಿದ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಎಂಬುವವರಿಗೆ ಒಲಿದಿದ್ದರು. ಇದರಿಂದ ಅವರು ಶ್ರೀಮಂತರಾದರು. ಶ್ರೀಮಂತರಾದ ಮೇಲೆ ದೇವರನ್ನು ನಿರ್ಲಕ್ಷಿಸಿ ನವಣೆ ಮತ್ತು ಹುರುಳಿ ಕಣಜದಲ್ಲಿ ಮುಚ್ಚಿಟ್ಟರು. ಇದರಿಂದ ಬೇಸತ್ತ ದೇವರು ಅವರ ಮನೆಯಲ್ಲಿ ದನ ಕಾಯುತ್ತಿದ್ದ ಬೊಮ್ಮಲಿಂಗ ಎಂಬುವವರಿಗೆ ಒಲಿದ ಎಂಬ ಪ್ರತೀತಿ ಇದೆ.

ಜಾತ್ರೆ ವೇಳೆಯಲ್ಲಿ ಮೊದಲು ಹುರುಳಿ ಕೈ ತೊಳೆಯುವ ಮೂಲಕ ಅವರ ಮನೆಯಲ್ಲಿನ ಹುರುಳಿ ಮತ್ತು ನವಣೆಯನ್ನು ಜಾತ್ರೆ ಮುಗಿಯುವ ವರೆಗೆ ಮನೆಯಿಂದ ಹೊರ ಹಾಕುತ್ತಾರೆ. ಈ ಗುಡಿಕಟ್ಟಿಗೆ ಸೇರಿದ ಅಣ್ಣ ತಮ್ಮಂದಿರು ಹುರುಳಿ ಮತ್ತು ನವಣೆಯನ್ನು ಬಳಸುವುದಿಲ್ಲ ಮತ್ತು ಕೈಯಿಂದ ಮುಟ್ಟದೆ ವೃತ ಆಚರಿಸುತ್ತಾರೆ.
ದೇವರ ಮರ ಕಡಿದು ಅಲ್ಲಿಂದ ವಸಲು ದಿಣ್ಣೆ ಮೂಲಕ ತರಲಾಯಿತು. ಇಲ್ಲಿಂದ ಪ್ರತಿನಿತ್ಯ ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ.
ಎರದ ಕಳ್ಳೆ (ಬಾರೆ ಕಳ್ಳೆ)ಯಿಂದ ಜಾತ್ರೆ ನಡೆಯುವ ವಸಲು ದಿನ್ನೆಯಲ್ಲಿ ಕಳ್ಳೆ, ತುಗ್ಗಲಿ ಮೊರು ಮುಂತಾದ ಮುಳ್ಳುಗಳ ಮರಗಳನ್ನು ಕಡಿದು ಗುಡಿ ನಿರ್ಮಿಸಿ ಅದರ ಮೇಲೆ ಕಳಸ ಪ್ರತಿಷ್ಠಾಪಿಸುವರು.

ಜಾತ್ರೆಯ ಪ್ರಧಾನ ಘಟ್ಟ ಕಳಸ ಕೀಳುವುದು. ಅಂದು ವಸಲು ದಿನ್ನೆಯಲ್ಲಿ ಗುಡಿಕಟ್ಟಿಗೆ ಸೇರಿದ 5 ಜನ ಈರಗಾರರು ಬಾರೆ ಕಳ್ಳೆಯ ಗುಡಿ ಹತ್ತಿ ಕಳಸ ಕೀಳುತ್ತಾರೆ. ಇದನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಮೊದಲು ಕಳಸ ಕಿತ್ತ ಈರಗಾರ ವರ್ಷದ ಈರಗಾರ ಎಂಬ ಪ್ರಶಸ್ತಿಗೆ ಭಾಜನರಾಗುತ್ತಾರೆ.
ಚನ್ನಮ್ಮನಾಗತಿಹಳ್ಳಿ ಗ್ರಾಮಪಂಚಾಯತಿ ವತಿಯಿಂದ ಜಾತ್ರೆ ನಡೆಯುವ ಸ್ಥಳದಲ್ಲಿ ಸ್ವಚ್ಚತೆ , ಕುಡಿಯುವ ನೀರು, ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್ ಹಾಗೂ ಸದಸ್ಯರು ಅಗತ್ಯ ಕ್ರಮಗಳನ್ನ ಕೈಗೊಂಡಿದ್ದಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page