ಚಳ್ಳಕೆರೆ ಜ.19. ದೇವರ ಎತ್ತುಗಳಿಗೆ ಮೇವು, ನೀರು ಹಾಗೂ ನೆರಳಿನ ಕೊರತೆ ಯಾಗದಂತೆ ಎಚ್ಚರಿಕೆ ವಹಿಸುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿರುವ ಅಜ್ಜಯ್ಯನಗುಡಿ ಬಳಿ ಇರುವ ದೇವರ ಎತ್ತುಗಳಿಗೆ ಮೇವು ವಿತರಿಸಿ ಮಾತನಾಡಿದು. ಹರಕೆ ರೂಪದಲ್ಲಿ ಬಿಡುವ ದೇವರ ಎತ್ತುಗಳಿಗೆ ಮೇವಿನ ಕೊರತೆಯಿಂದ ಅಪೌಷ್ಠಿಕತೆಗೆ ತುತ್ತಾಗಿ ನರಳುತ್ತಿದ್ದವು ಇದನ್ನು ಮನಗಂಡು ಜಿಲ್ಲೆಯಲ್ಲಿರುವ ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ಅಥವಾ ಮೇವು ವಿತರಣೆ ಮಾಡುವಂತೆ ಸರಕಾರಕ್ಕೆ ಒತ್ತಡ ಹಾಕಿದ್ದರಿಂದ ದೇವರ ಎತ್ತುಗಳ ಮೇವಿಗಾಗಿ ಹತ್ತು ಲಕ್ಷ ರೂ ಬಿಡುಗಡೆಯಾಗಿದ್ದು ಅದರಲ್ಲಿ ಚಳ್ಳಕೆರೆ ತಾಲೂಕಿಗೆ 5 ಲಕ್ಷರೂ ಬಿಡುಗಡೆಯಾಗಿದ್ದು ಜಿಲ್ಲಾಡಳಿತ ಹಂತದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಇಂದು ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡುತ್ತಿದ್ದೇವೆ.
ದೇವರ ಎತ್ತುಗಳಿಗೆ ಅಜ್ಜನ ಗುಡಿ ಸಮೀಪ ಸರಕಾರಿ ಜಾಗದಲ್ಲಿ ಪ್ರತ್ಯೇಖ ಖಾಯಂ ಆಗಿ ಗೋಶಾಲೆ ನಿರ್ಮಿಸಿ ಟ್ರಸ್ಟ್ ಸ್ಥಾಪಿಸುವ ವ್ಯವಸ್ಥೆ ಮಾಡಿ ನಿರಂತರ ದೇವರ ಎತ್ತುಗಳಿಗೆ ಮೇವು ನೀರು ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ದೇವರ ಎತ್ತುಗಳ ರಕ್ಷಣೆಗಾಗಿ ಮೇವು ಖರೀದಿಸಲು80 ಸಾವಿರ ರೂ ಹಣವನ್ನು ಬಿಡುಗಡೆಗೊಳಿಸಿತ್ತು ಇದು ಸಾಕಾಗುವುದಿಲ್ಲ, ಎಂದು ಈ ಬಾರಿ ಸದಸನದಲ್ಲಿ ಪದೇ ಪದೇ ಸರಕಾರಕ್ಕೆ ಒತ್ತಡ ಹಾಕಿದ್ದರಿಂದ ಈ ಬಾರಿ ದೇವರ ಎತ್ತುಗಳಿಗೆ ಜಿಲ್ಲೆಗೆ 10ಲಕ್ಷ ರೂ ಬಿಡುಗಡೆ ಮಾಡಿದೆ ಎಂದರು. ದೇವರ ಎತ್ತುಗಳಿಗೆ ಆರೋಗ್ಯ ತಪಾಸಣೆ, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಇಒ ಶಶಿಧರ್. ಪಶುಸಂಗೋಪನೆ ಸಹಾಯಮಾಡುವುದುಕ ನಿರ್ದೇಶಕ ಡಾ.ರೇವಣ್ಣ .ಕಿಲಾರಿಗಳು ಮುಖಂಡರು ಇತರರಿದ್ದರು.
0 Comments