![](https://janadhwani.in/wp-content/uploads/2023/08/IMG-20230820-WA0166.jpg)
ನಗರದ ಹೊರವಲಯದ ಡಿ ದೇವರಾಜ ಅರಸು ವಸತಿ ಶಾಲೆಯಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಜೀತ ಹಾಗೂ ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅರಸು ಶ್ರಮಿಸಿದರು. ಅವರು ನೀಡಿದ ಕೊಡುಗೆಗಳು ಮಾದರಿಯಾಗಿವೆ’ ಎಂದರು.
![](https://janadhwani.in/wp-content/uploads/2023/08/IMG-20230820-WA0122.jpg)
‘ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಹೊಲ ಉಳುವವನೇ ಒಡೆಯ ಎಂದು ನೊಂದವರ ಧ್ವನಿಯಾಗಿ, ಅರಸುರವರ ಜನಪರ ಆಡಳಿತ ವೈಖರಿಯನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು
![](https://janadhwani.in/wp-content/uploads/2023/08/IMG-20230820-WA0120.jpg)
ಅರಸುರವರು ದೀನ ದಲಿತರಿಗೆ ಅತ್ಯಂತ ಕೆಳ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಬಸವ ಬುದ್ಧ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಜನರ ಪರವಾಗಿ ನಿರ್ವಹಿಸಿ ಹಿಂದುಳಿದ ವರ್ಗಗಳ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ
ರಾಜಕಾರಣವನ್ನು ಎಲ್ಲರೂ ಮಾಡುತ್ತಾರೆ ಆದರೆ ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಬಡ ಹಾಗೂ ಹಿಂದುಳಿದ ವರ್ಗಗಳ ಜನರ ಮನದಲ್ಲಿ ಉಳಿಯುವಂತಹ ಕಾರ್ಯಕ್ರಮಗಳನ್ನು ರೂಪಿಸಿದಂತಹ ಧೀಮಂತ ರಾಜಕಾರಣಿಗಳಲ್ಲಿ ದೇವರಾಜ ಅರಸರ ರವರು ಮೊದಲಿಗರಾಗುತ್ತಾರೆ ಉಳುವವನೆ ಭೂಮಿಯ ಒಡೆಯ ವೃದ್ಧಾಪ್ಯ ವೇತನ ವಿಧವಾ ವೇತನ ಜೀತ ಪದ್ಧತಿ ನಿರ್ಮೂಲನೆ ಮಾಡಿದರು ಇಂದಿನ ರಾಜಕಾರಣಿಗಳು ದೇವರಾಜ್ ಅರಸುರವರ ಆಡಳಿತದ ವೈಖರಿಗಳನ್ನು ಮೈಗೂಡಿಸಿಕೊಂಡು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ ಇಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವರಾಜ ಅರಸುರವರ ಸಿದ್ಧಾಂತಗಳನ್ನ
![](https://janadhwani.in/wp-content/uploads/2023/08/IMG-20230820-WA0167.jpg)
![](https://janadhwani.in/wp-content/uploads/2023/08/IMG-20230820-WA0122-1.jpg)
ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ್ ಮಾತನಾಡಿ ದೇವರಾಜ ಅರಸುರವರು ದೀನ ದಲಿತರ ಬಂಧುವಾಗಿ ಎಲ್ ಜಿ ಹಾವನೂರರವರ ವರದಿ ಅನುಷ್ಠಾನ ಗೊಳಿಸಿ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನು ದೊರಕಿಸಿಕೊಟ್ಟರು ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಕೃಷಿ ಕೈಸಾಲಗಳನ್ನು ಮನ್ನ ಗೊಳಿಸಿ ರೈತರ ಹಿತವನ್ನು ಕಾಪಾಡಿದರು ಇವರ ಅಧಿಕಾರಾವಧಿಯಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 165 ಸ್ಥಾನಗಳನ್ನು ಹಾಗೂ ಲೋಕಸಭೆಯಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಗುರುನಾಥ್ ದೇವರಾಜ ಅರಸುರವರ ಕುರಿತು ಉಪನ್ಯಾಸ ನೀಡಿದರು ದೇವರಾಜ ಅರಸು ವಸತಿ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿ ಪದವಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ರೆಹಾನ್ ಪಾಷಾ. ಡಿ ವೈ ಎಸ್ಪಿ ಟಿ.ಬಿ ರಾಜಣ್ಣ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ ರಾಘವೇಂದ್ರ . ಸದಸ್ಯರಮೇಶ್ ಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ತಾ ಪಂ ಪ್ರಭಾರ ಇ ಒ ಟಿ .ಹೆಚ್ ಸಂತೋಷ್ ಪೌರಾಯುಕ್ತ ಸಿ ಚಂದ್ರಪ್ಪ. ರೇವಣ್ಣ ಶಿವಲಿಂಗಪ್ಪ .ಶಿವರಾಜ್ ಶ್ರೀನಿವಾಸ್ .ಮೇಘ ಹರಿಪ್ರಸಾದ್. ಲಿಂಗೇಗೌಡ .ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ವಸತಿ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
0 Comments