ದೆಹಲಿ ಜನಧ್ವನಿ ವಾರ್ತೆ ನ.1.ದೆಹಲಿಯ ಅಮೃತಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿರುವ ಚಳ್ಳಕೆರೆ ಆರೋಗ್ಯ ನಿರೀಕ್ಷಕರಾದ ಗೀತಾ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ “ನನ್ನ ಮಣ್ಣು ನನ್ನ ದೇಶ” ಎಂಬ ಕಾರ್ಯಕ್ರಮದ ಮೂಲಕ ದೇಶದ ಎಲ್ಲಾ ರಾಜ್ಯಗಳ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ, ನಗರಸಭೆ, ಪುರಸಭೆ ಹಾಗೂ ಗ್ರಾಮೀಣ ಪ್ರದೇಶದ ಗ್ರಾಮಪಂಚಾಯಿತಿಗಳಿಂದ ಸಂಗ್ರಹ ಮಾಡಿರುವ ಪವಿತ್ರವಾದ ಮಣ್ಣನ್ನು ದೆಹಲಿಯ ರಾಜಭವನ ಮುಂಭಾಗದಲ್ಲಿರುವ ಅಮೃತ ಕಲಶ ಪ್ರತಿಷ್ಠಾಪನೆ ಮಾಡಿರುವ ಕಾರ್ಯಕ್ರಮಕ್ಕೆ ಸಮರ್ಪಣೆ ಮಾಡಲಾಯಿತು ಎಂಬುದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಳ್ಳಕೆರೆ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಗೀತ ಜಬಧ್ವನಿ ಡಿಜಿಟಲ್ ಮಾಧ್ಯಕ್ಜೆ ತಿಳಿಸಿದ್ದಾರೆ.

ಚಳ್ಳಕೆರೆ ನಗರಸಭೆ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಅಮೃತ ಕಳಶ ಯಾತ್ರೆಯ ಮೂಲಕ ಚಳ್ಳಕೆರೆ ನಗರ ವತಿಯಿಂದ ಸಂಗ್ರಹಣೆ ಮಾಡಿರುವ ಮಣ್ಣನ್ನು ದೆಹಲಿಯ ರಾಜಭವನ ಮುಂಭಾಗದಲ್ಲಿ ಅಕ್ಟೋಬರ್ 30 ಮತ್ತು 31 ರಂದು ಅಮೃತ ಕಲಶ ಪ್ರತಿಷ್ಠಾಪನೆ ಮಾಡಿರುವ ಕಾರ್ಯಕ್ರಮದಲ್ಲಿ ಅಮೃತವಾಟಿಕ ಎಂಬ ವೀರ ಯೋಧರಿಗೆ ವಂದನಾ ಕಾರ್ಯಕ್ರಮದಲ್ಲಿ ಅರ್ಪಣೆ ಮಾಡಲಾಯಿತು ಎಂಬುದಾಗಿ ಮಾಹಿತಿ ತಿಳಿಸಿದ್ದಾರೆ.
ದೆಹಲಿಯ ಅಮೃತ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವಆರೋಗ್ಯ ನಿರೀಕ್ಷಕಿ ಗೀತಾರವರು ದೂರದ ದೆಹಲಿಯಿಂದ ವಾಟ್ಸ್ ಆಪ್ ಮೂಲಕ ಜನಧ್ವನಿ ಡಿಜಿಟಲ್ ಮಾಧ್ಯಮಕ್ಕೆ ಪೋಟೋ ಗಳನ್ನು ನೀಡಿದ್ದಾರೆ ತಮ್ಮ ವಿಶಿಷ್ಠ ಅನುಭವಗಳನ್ನು ಸಡಗರ ಸಂಭ್ರಮದಿಂದ ಈ ರೀತಿ ಹಂಚಿಕೊಂಡರು.
ಈ ಅಮೃತ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ನಮ್ಮ ಜೀವಿತ ಅವಧಿಯಲ್ಲಿ ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು, ಮೈ ರೋಮಾಂಚನಗೊಳಿಸುವ ಅನುಭವವಾಯಿತು, ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ದೇಶ, ಭಾಷೆ, ಗಡಿ, ಜಾತಿ,ಮತಗಳನ್ನು ಮೀರಿ, ಯಾವುದೇ ಬೇಧಭಾವವಿಲ್ಲದೆ ಜನರು ಭಾಗವಹಿಸಿರುವುದು ದೇಶದ ಸೌಹಾರ್ದತೆ ಹಾಗೂ ಐಕ್ಯತೆಯ ಸಂದೇಶವಾಗಿದೆ ಎಂದರಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದು, ಜನ್ಮಜನ್ಮಾಂತರದ ಪುಣ್ಯ ಎಂಬುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
0 Comments