ಚಳ್ಳಕೆರೆ ಜನಧ್ವನಿ ಮಾ.17 ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷ ಉಚಿತ ಗ್ಯಾರೆಂಟಿ ಯೋಜನೆಗಳನ್ನು ನೀಡಿ ಪಾಪರ್ ಆಗಿದ್ದು ಅದೇ ರೀತಿ ರಾಜ್ಯ ಕಾಂಗ್ರೆಸ್ ಸರಕಾರ ಉಚಿತ ಗ್ಯಾರೆಂಟಿ ಯೋಜನೆಗಳಿಗೆ ನೀಡಿ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸರಕಾರದ ವಿರುದ್ದ ಗುಡುಗಿದ್ದಾರೆ.
ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರಗಾಲ ಎಂದು ಘೋಷಣೆ ಮಾಡಿದ್ದರೂ ಸಹ ಬರಗಾಲ ನಿರ್ವಹಣೆಗೆ ಉದ್ಯೋಗ, ಕುಡಿಯುವ ನೀರು , ಗೋಶಾಲೆ ,ದೇವರ ಎತ್ತುಗಳಿಗೆ ಮೇವು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ .
ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದರೂ ಅಪ್ಪರ್ ಭದ್ರ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಅನುಧಾನ ಬಿಡುಗಡೆ ಮಾಡಿಸಲು ಸಾಧ್ಯವಾಗದೆ ಗೋಶಾಲೆಗಳನ್ನು ಕಾಟಾಚರಕ್ಕೆ ಮಾಡಿದ್ದು ಗುಣ ಮಟ್ಟದ ಮೇವು ನೀಡುತ್ತಿಲ್ಲ ದೇವರ ಎತ್ತುಗಳಿಗೆ ಗೋಶಾಲೆ ತೆರೆಯಲು ಬರುವುದಿಲ್ಲ ಎಂದು ಕುಂಟು ನೆಪ ಹೇಳಲಾಗುತ್ತಿದೆ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತಿಗಳಿಗೆ ಮೇವಿಲ್ಲದೆ ಸಾಯುವ ಸ್ಥಿತಿಗೆ ಬಂದಿವೆ.
ಕೆರೆಗಳಿಗೆ ನೀರು ತುಂಬಿಸಲು ಮುಂದಾಗುತ್ತಿಲ್ಲ ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಮೇವಿಲ್ಲದೆ ಪರದಾಡುವಂತಾಗಿದೆ.
ಕ್ಷೇತ್ರದ ಜನರ ಕಷ್ಟುಗಳನ್ನು ಹಾಲಿಸ ಬೇಕಾದ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಳ್ಳಿಗಳ ಕಡೆ ಬಾರದೆ ಕಾಮಗಾರಿಗಳ ಉದ್ಘಾಟನೆಗೆ ಬರುತ್ತಿದ್ದಾರೆ ಬಂಡವಾಳ ಹಾಕಿ ಬಂಡವಾಳ ತೆಗೆಯಲು ಮುಂದಾಗಿದ್ದು ಇದು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ.
ದೆಹಲಿ ಕ್ರೇಜಿವಾಲ ಸರಕಾರ ಪಕ್ಕಟೆ ಗ್ಯಾರೆಂಟಿ ಯೋಜನೆಗಳಿಗೆ ಹಣ ಹಾಕಿ ಪಾಪರ್ ಆಗಿದ್ದು ,ಕರ್ನಾಟಕ ಸರಕಾರವೂ ಸಹ ಉಚಿತ ಗ್ಯಾರೆಂಟಿ ಯೋಜನೆಗಳನ್ನು ನೀಡಿರುವುದರಿಂದ ಖಾಜಾನೆ ಖಾಲಿಯಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗೆ ಮಾಡಲು ಹಣವಿಲ್ಲದೆ ಪಾಪರ್ ಆಗುವ ದಿನಗಳು ಸಮೀಪಿಸುತ್ತಿವೆ .
ಈಗಲಾದರೂ ಸರಕಾರ ಗೋಶಾಲೆಗೆ ಸರಿಯಾಗಿ ಮೇವು.ನೀರು ನೆರಳು,.ಕೆರೆಗಳಿಗೆ ನೀರು ತುಂಬಿಸುವ ಯೋಜನೆ.ಅಪ್ಪರ್ ಭದ್ರಾಯೋಜನೆಗೆ ಅನುದಾನ, ಕ್ಷೇತ್ರಗಳ ಅಭೀವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
0 Comments