ದುಡಿತಕ್ಕೆ ಸಿಗದ ಕೂಲಿ ? ಉದ್ಯೋಗ ಖಾತ್ರಿ ಯೋಜನೆಯ ಕೂಲಿ , ಸಾಮಾಗ್ರಿ ಒಟ್ಟು 3386. 39 ಲಕ್ಷ ರೂ ಬಾಕಿ ಯುಗಾದಿಗೆ ಬೇವಿನ ಕಹಿ ನೀಡಿದ ಸರಕಾರ

by | 21/03/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಮಾ.21
ನರೇಗಾ ಯೋಜನೆಯಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಕೈ ಸೇರದೆ ಕೇಂದ್ರ ಹಾಗೂ ರಾಜ್ಯ ಸರಕಾರ ಬೇವಿನ ರುಚಿ ತೋರಿಸಿದಂತಾಗಿದೆ.
ಹೌದು ಇದು ಜಿಲ್ಲೆಯಾದ್ಯಾಂತ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿಯೋಜನೆಯಡಿಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಸುಮಾರು ೪೫ ದಿನಗಳಿಂದ ಕೂಲಿ ಹಣಬಿಡುಗಡೆ ಮಾಡದೆ ಇರುವುದರಿಂದ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ಬದಲು ಬರಿ ಬೇವಿನ ಕಹಿ ರುಚಿ ತೋರಿಸಿದಂತಾಗಿದೆ. ಉದ್ಯೋಗ ಖಾತ್ರಿಯೋಜನೆಯಡಿ ದುಡಿಮೆ ಮಾಡಿದ ಕೂಲಿಕಾರರಿಗೆ ಸುಮಾರು ೪೫ ದಿನಗಳಿಂದ ಕೂಲಿ ಹಣ ಬಿಡುಗಡೆ ಮಾಡದೆ ಇರುವುದರಿಂದ ಕೂಲಿ ಕಾರ್ಮಿಕರು ಕೂಲಿಗಾಗಿ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಗ್ರಾಮೀಣ ಕೂಲಿ ಕಾರ್ಮಿಕರನ್ನು ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ, ಅಂಗನವಾಡಿ, ಶಾಲೆ, ಸರಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ, ರೈತರ ಜಮೀನಿನಲ್ಲಿ ಬುದು ನಿರ್ಮಾಣ,ಕೃಷಿಹೊಂಡ. ಜಾನುವಾರು ಶೆಡ್, ರೇಷ್ಮೆ, ಬಾಳೆ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಹಾಗೂ ಸಾಮಾಗ್ರಿ ವಿತರಣೆ ಮಾಡಿದ ಹಣವೂ ಬಿಡುಗಡೆ ಮಾಡದೆ ಇರುವುದು ಕೂಲಿ ಕಾರ್ಮಿಕರಿಗೆ ಅಕ್ರೋಶಕ್ಕೆ ಕಾರಣವಾಗಿದ್ದು ಸರಕಾರಗಳ ವಿದ್ದು ಇಡಿ ಶಾಪ ಹಾಕುವಂತಾಗಿದೆ.


ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ದೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿಕಾರರಿಗೆ ನೇರವಾಗಿ ಕೂಲಿ ಕಾರ್ಮಿಕರ ಖಾತೆಗೆ ವಿತರಣೆ ವಿಳಂಬವಾದರೆ ಸಂಬAಧಿಸಿದ ಅಧಿಕಾರಿಗಳು, ನೌಕರರು, ಕೂಲಿ ಮೊತ್ತಕ್ಕೆ ಶೇ೦.೦೫ ರಷ್ಟು ದಂಡ ಹಾಕಿ ಕೊಡ ಬೇಕೆಂಬನಿಯವಿದೆ. ಆದರೆ ಸರಕಾರವೇ ಕೂಲಿ ಹಣ ವಿಳಂಬ ಮಾಡಿದರೆ ದಂಡ ಕಟ್ಟುವವರುಯಾರು ?ಎಂಬ ಪ್ರಶ್ನೆ ತಲೆದೋರಿದ್ದು ಕೂಲಿ ಕೆಲಸ ಮಾಡಿ ಸುಮಾರು ಎರಡು ತಿಂಗಳು ಗಡಿ ತಲುಪಲು ಬಂದರೂ ಕೂಲಿ ಹಣ ಬಿಡುಗಡೆ ಮಾಡದೆ ಇರುವುದರಿಂದ ಕೂಲಿ ಕಾರ್ಮಿಕರು ಯುಗಾದಿ ಹಬ್ಬಕ್ಕೆ ಬಟ್ಟೆ ಹಾಗೂ ದಿನಸಿ ಸಾಮಾಗ್ರಿಗಳ ಖರೀದಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
2022-23 ನೇ ಸಾಲಿನ ನರೇಗಾ ಕೂಲಿ ಹಾಗೂ ಸಾಮಾಗ್ರಿ ಹಣ ಬಾಕಿ.
ಚಳ್ಳಕೆರೆ ಕೂಲಿ 55.69ಲಕ್ಷ ರೂ, ಸಾಮಾಗ್ರಿ 497.39 ಲಕ್ಷ ರೂ, ಚಿತ್ರದುರ್ಗ ಕೂಲಿ 46. 35 ಲಕ್ಷ , ಸಾಮಾಗ್ರಿ 275.30 ಲಕ್ಷ ರೂ, ಹಿರಿಯೂರು ಕೂಲಿ 110.7 ಲಕ್ಷ ಸಾಮಾಗ್ರಿ 703.76ಲಕ್ಷ, ಹೊಳಲ್ಕೆರೆ ಕೂಲಿ 120. 96 ಲಕ್ಷ, ಸಾಮಾಗ್ರಿ734. 55 ಲಕ್ಷ, ಹೊಸದುರ್ಗ ಕೂಲಿ 47.53 ಲಕ್ಷ, ಸಾಮಾಗ್ರಿ 526. 61 ಲಕ್ಷ, ಮೊಳಕಾಲ್ಮೂರು ಕೂಲಿ124,74 ಲಕ್ಷ, ಸಾಮಾಗ್ರಿ2.66 ಲಕ್ಷ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಾಡಿದ ವಿವಿದ ಕಾಮಗಾರಿಗೆ ಕೂಲಿ 505.98 ಲಕ್ಷ ರೂ ಸಾಮಾಗ್ರಿ 2869. 39 ಲಕ್ಷ ಒಟ್ಟು 3386. 39 ಲಕ್ಷ ರೂಗಳನ್ನು ಸರಕಾರ ಅನುದಾನ ಬಿಡುಗಡೆ ಮಾಡಬೇಕಿದೆ.
ಈಗಲಾದರೂ ಸರಕಾರ ನರೇಗಾ ಯೋಜನೆಯಡಿಯಲ್ಲಿ ಬಾಕಿ ಇರುವ ಕೂಲಿ ಹಾಗೂ ಸಾಮಾಗ್ರಿ ಬಿಲ್ ಬಿಡುಗಡೆ ಮಾಡುವುದೇ ಕಾದು ನೋಡ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page