ದಿಕ್ಕಿಲ್ಲದ ಅನಾಥಶ್ವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ

by | 13/02/23 | ಸಾಮಾಜಿಕ

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.13 ಅಪಘಾತದಲ್ಲಿ ಮೃತಪಟ್ಟ ವಾರಸುದಾರರಿಲ್ಲದೆ ಅನಾಥ ಶವದ ಅಂತ್ಯ ಸಂಸ್ಕಾರ ಪೂಜಾ ವಿಧಿವಿಧಾನದೊಂದಿಗೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಹೊರವಲಯದ ಪೂಜಾ ಡಾಬ ಬಳಿ ಬೆಳಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಶವ ರಸ್ತೆ ಮೇಲೆ ಬಿದ್ದಿರುವುದನ್ನು ಅದೇ ದಾರಿ ಮಾರ್ಗವಾಗಿ ಬೆಳಿಗ್ಗೆ 08-30 ಗಂಟೆಗೆ ಪಿ ಇಸ್ಮಾಯಿಲ್ ಠಾಣೆಗೆ ಬಂದು 03-00 ಗಂಟೆಗೆ ಚಳ್ಳಕೆರೆ ಟೌನ್ ಹೊರವಲಯದ ಪೂಜಾ ಡಾಬಾ
ಬಳಿಯ ಎನ್ ಹೆಚ್ – 150 (ಎ) ಟಾರ್ ರಸ್ತೆಯಲ್ಲಿ ನಾನು ನನ್ನ ಟಾಟಾ ಏಸ್ ವಾಹನವನ್ನು ಸಾಣೆಕೆರೆ ಗ್ರಾಮದಿಂದ ಚಳ್ಳಕೆರೆ ಕಡೆಗೆ ಚಾಲನೆ
ಮಾಡಿಕೊಂಡು ಬರುವಾಗ ರಸ್ತೆಯಲ್ಲಿ ಯಾರೋ ಸತ್ತು ಬಿದ್ದಿರುವುದು ವಾಹನದ ಲೈಟ್ ಬೆಳಕಿನಲ್ಲಿ ಕಂಡುಬಂದಿದ್ದು ನಾನು ನನ್ನ ವಾಹನವನ್ನು
ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಶವದ ಬಳಿ ಹೋಗಿ ನೋಡಲಾಗಿ ಯಾರೋ ಒಬ್ಬ ಗಂಡಸಿನ ಕೈ ಕಾಲುಗಳು ಮತ್ತು ಮೃತದೇಹ ಪೂರಾ ಜಜ್ಜಿ
ರಕ್ತಗಾಯಗಳಾಗಿ ಮೃತ ಪಟ್ಟಿರುವುದು ಕಂಡುಬಂದಿದ್ದು ಮೃತ ಗಂಡಸಿನ ಹೆಸರು ವಿಳಾಸ ಗೊತ್ತಾಗಲಲಿ, ಸದರಿ ಗಂಡಸಿನ ಶವವನ್ನು ನೋಡಿದಾಗ
ದಿನಾಂಕ :13-02-2023 ರಂದು ಬೆಳಿಗ್ಗೆ 02-00 ಗಂಟೆಯಿಂದ ದಿನಾಂಕ :13-02-2023 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಯ
ಮದ್ಯದ ವೇಳೆಯಲ್ಲಿ ಯಾವುದೋ ವಾಹನವನ್ನು ಅದರ ಚಾಲಕನು ಅತೀವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು
ಅನಾಮದೇಯ ಬಿಕ್ಷುಕ ಗಂಡಸಿಗೆ ಡಿಕ್ಕಿ ಹೊಡೆಸಿದ್ದರಿಂದ ಬಿಕ್ಷುಕ ಗಂಡಸು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮತ್ತು
ಅಪಘಾತ ಪಡಿಸಿದ ವಾಹನವನ್ನು ಅದರ ಚಾಲಕನು ಸ್ಥಳದಲ್ಲಿ ನಿಲ್ಲಿಸದೆ ತೆಗೆದುಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಅನಾಮದೇಯ
ಬಿಕ್ಷುಕ ಗಂಡಸಿಗೆ ಸುಮಾರು 60 ವರ್ಷ ವಯಸ್ಸಿದು, ಕೋಲು ಮುಖ, ಎಣ್ಣೆಗೆಂಪು ಬಣ, ತಲೆಯಲ್ಲಿ ಸುಮಾರು 7 ಇಂಚು ಉದ್ದದ ಬಿಳಿ
ಕೂದಲು, ಹಾಗೂ ಬಿಳಿ ಮೀಸೆ ಮತ್ತು ಗಡ ಇರುತ್ತದೆ. ಮೃತನ ಮೈ ಮೇಲೆ ಒಂದು ಹಳೆಯ ಷರ್ಟ್ ಇರುತ್ತದೆ. ಸದರಿ ಅನಾಮಧೇಯ ಗಂಡಸಿನ
ವಾರಸುದಾರರು ಯಾರೂ ಗೊತ್ತಾಗದೆ ಇದ್ದುದರಿಂದ ನಾನು ತಡವಾಗಿ ಬಂದು ದೂರು ನೀಡಿರುತ್ತೇನೆ, ಅಪಘಾತ ಪಡಿಸಿದ ಯಾವುದೋ ವಾಹನ
ಮತ್ತು ಅದರ ಚಾಲಕನಿಗೆ ಹಾಗೂ ಅನಾಮಧೇಯ ಗಂಡಸಿನ ಹೆಸರು ವಿಳಾಸವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ಇದು ದೂರಿನ
ಮೇರೆಗೆ ಚಳ್ಳಕೆರೆ ಠಾಣೆ ಮೊ ನಂ 55/2023 ಕಲಂ : 279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿರುತ್ತದೆ. ವಾರಸುದಾರಿಲ್ಲ ಕಾರಣ ಠಾಣೆಯ ಪಿಐ ದೇಶಾಯಿ ನೇತೃತ್ವದಲ್ಲಿ ಎಎಸ್ಐ ನಾಗರಾಜ್ .ಸಿಬ್ಬಂದಿ ಕೃಷ್ಣ ಅಂತ್ಯಸಂಸ್ಕಾರ ಮಾಡಿದ್ದಾರೆ

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page