ಚಳ್ಳಕೆರೆ ಜನಧ್ವನಿ ವಾರ್ತೆ ಫೆ.13 ಅಪಘಾತದಲ್ಲಿ ಮೃತಪಟ್ಟ ವಾರಸುದಾರರಿಲ್ಲದೆ ಅನಾಥ ಶವದ ಅಂತ್ಯ ಸಂಸ್ಕಾರ ಪೂಜಾ ವಿಧಿವಿಧಾನದೊಂದಿಗೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಹೊರವಲಯದ ಪೂಜಾ ಡಾಬ ಬಳಿ ಬೆಳಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಶವ ರಸ್ತೆ ಮೇಲೆ ಬಿದ್ದಿರುವುದನ್ನು ಅದೇ ದಾರಿ ಮಾರ್ಗವಾಗಿ ಬೆಳಿಗ್ಗೆ 08-30 ಗಂಟೆಗೆ ಪಿ ಇಸ್ಮಾಯಿಲ್ ಠಾಣೆಗೆ ಬಂದು 03-00 ಗಂಟೆಗೆ ಚಳ್ಳಕೆರೆ ಟೌನ್ ಹೊರವಲಯದ ಪೂಜಾ ಡಾಬಾ
ಬಳಿಯ ಎನ್ ಹೆಚ್ – 150 (ಎ) ಟಾರ್ ರಸ್ತೆಯಲ್ಲಿ ನಾನು ನನ್ನ ಟಾಟಾ ಏಸ್ ವಾಹನವನ್ನು ಸಾಣೆಕೆರೆ ಗ್ರಾಮದಿಂದ ಚಳ್ಳಕೆರೆ ಕಡೆಗೆ ಚಾಲನೆ
ಮಾಡಿಕೊಂಡು ಬರುವಾಗ ರಸ್ತೆಯಲ್ಲಿ ಯಾರೋ ಸತ್ತು ಬಿದ್ದಿರುವುದು ವಾಹನದ ಲೈಟ್ ಬೆಳಕಿನಲ್ಲಿ ಕಂಡುಬಂದಿದ್ದು ನಾನು ನನ್ನ ವಾಹನವನ್ನು
ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಶವದ ಬಳಿ ಹೋಗಿ ನೋಡಲಾಗಿ ಯಾರೋ ಒಬ್ಬ ಗಂಡಸಿನ ಕೈ ಕಾಲುಗಳು ಮತ್ತು ಮೃತದೇಹ ಪೂರಾ ಜಜ್ಜಿ
ರಕ್ತಗಾಯಗಳಾಗಿ ಮೃತ ಪಟ್ಟಿರುವುದು ಕಂಡುಬಂದಿದ್ದು ಮೃತ ಗಂಡಸಿನ ಹೆಸರು ವಿಳಾಸ ಗೊತ್ತಾಗಲಲಿ, ಸದರಿ ಗಂಡಸಿನ ಶವವನ್ನು ನೋಡಿದಾಗ
ದಿನಾಂಕ :13-02-2023 ರಂದು ಬೆಳಿಗ್ಗೆ 02-00 ಗಂಟೆಯಿಂದ ದಿನಾಂಕ :13-02-2023 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಯ
ಮದ್ಯದ ವೇಳೆಯಲ್ಲಿ ಯಾವುದೋ ವಾಹನವನ್ನು ಅದರ ಚಾಲಕನು ಅತೀವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು
ಅನಾಮದೇಯ ಬಿಕ್ಷುಕ ಗಂಡಸಿಗೆ ಡಿಕ್ಕಿ ಹೊಡೆಸಿದ್ದರಿಂದ ಬಿಕ್ಷುಕ ಗಂಡಸು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮತ್ತು
ಅಪಘಾತ ಪಡಿಸಿದ ವಾಹನವನ್ನು ಅದರ ಚಾಲಕನು ಸ್ಥಳದಲ್ಲಿ ನಿಲ್ಲಿಸದೆ ತೆಗೆದುಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಅನಾಮದೇಯ
ಬಿಕ್ಷುಕ ಗಂಡಸಿಗೆ ಸುಮಾರು 60 ವರ್ಷ ವಯಸ್ಸಿದು, ಕೋಲು ಮುಖ, ಎಣ್ಣೆಗೆಂಪು ಬಣ, ತಲೆಯಲ್ಲಿ ಸುಮಾರು 7 ಇಂಚು ಉದ್ದದ ಬಿಳಿ
ಕೂದಲು, ಹಾಗೂ ಬಿಳಿ ಮೀಸೆ ಮತ್ತು ಗಡ ಇರುತ್ತದೆ. ಮೃತನ ಮೈ ಮೇಲೆ ಒಂದು ಹಳೆಯ ಷರ್ಟ್ ಇರುತ್ತದೆ. ಸದರಿ ಅನಾಮಧೇಯ ಗಂಡಸಿನ
ವಾರಸುದಾರರು ಯಾರೂ ಗೊತ್ತಾಗದೆ ಇದ್ದುದರಿಂದ ನಾನು ತಡವಾಗಿ ಬಂದು ದೂರು ನೀಡಿರುತ್ತೇನೆ, ಅಪಘಾತ ಪಡಿಸಿದ ಯಾವುದೋ ವಾಹನ
ಮತ್ತು ಅದರ ಚಾಲಕನಿಗೆ ಹಾಗೂ ಅನಾಮಧೇಯ ಗಂಡಸಿನ ಹೆಸರು ವಿಳಾಸವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ಇದು ದೂರಿನ
ಮೇರೆಗೆ ಚಳ್ಳಕೆರೆ ಠಾಣೆ ಮೊ ನಂ 55/2023 ಕಲಂ : 279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿರುತ್ತದೆ. ವಾರಸುದಾರಿಲ್ಲ ಕಾರಣ ಠಾಣೆಯ ಪಿಐ ದೇಶಾಯಿ ನೇತೃತ್ವದಲ್ಲಿ ಎಎಸ್ಐ ನಾಗರಾಜ್ .ಸಿಬ್ಬಂದಿ ಕೃಷ್ಣ ಅಂತ್ಯಸಂಸ್ಕಾರ ಮಾಡಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments