ಚಳ್ಳಕೆರೆ ಜನಧ್ವನಿ ವಾರ್ತೆ ಮಾ.೧೨
ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಇಂತಹ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಕಡಿಮೆ ಜನರು ಭಾಗವಹಿಸದೆ ಇರುವ ಬಗ್ಗೆ ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬಯಲು ರಂಗಮಂದಿರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಚರಣೆ ಮಾಡುವ ದಾರ್ಶನಿಕ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗ ಬೇಕು. ಚುವಾವಣೆ ಸಂದರ್ಭದಲ್ಲಿ ರಾಜಕೀಯ ಉದ್ದೇಶಕ್ಕಾಗಿ ಸಮಾವೇಶಗಳಿಗೆ ಜನ ಸೇರಿಸುತ್ತಾರೆ ಆದರೆ ಕನ್ನಡ ನಾಡು ನುಡಿ, ಜಲ ಉಳಿವಿಗಾಗಿ ಹಮ್ಮಿಕೊಳ್ಳುವ ಮಹತ್ವದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕನ್ನಡಾಭಿಮಾನಿಗಳು, ವಿವಿಧ ಸಂಘಟನೆಗಳು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಕನ್ನಡ ಸಾಹಿತ್ಯದ ಕೃಷಿ ಬೆಳವಣಿಗೆಗೆ ಕೇವಲ ಸಂಘಟನೆ ಸಾಲದು. ಬದಲಾಗಿ ದೊಡ್ಡ ಪರಂಪರೆ ಬೆಳೆಯಬೇಕಾಗಿದೆ. ಕನ್ನಡ ನಮ್ಮೆಲ್ಲರ ಜೀವಾಳವಾಗಿದ್ದು, ಭಾರತದ ಸಂಸ್ಕ್ರತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ತಿಳಿಸಿದರು.
ನಿಕಟಪೂವರ್ಗ ತಾಲೂಕು ಸಮ್ಮೇಳನಾಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ ಮಾತನಾಡಿ ಬಳ್ಳಾರಿ ಚಿತ್ರದುರ್ಗ ಬರದ ನಾಡು ಅತಿ ಕಡಿಮೆ ಮಳೆ ಬೀಳುವ ಪ್ರದೇಶ, ಹಿಂದುಳಿದ ಜಿಲ್ಲೆಗಳು ಎಂದು ಎನಿಸಿಕೊಂಡಿದ್ದು ವಿಶೇಷ ಅನುದಾನದಡಿಯಲ್ಲಿ ಕಲ್ಯಾಣ ಕರ್ನಾಟ ಎಂದು ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಚಿತ್ರದುರ್ಗ, ಬಳ್ಳಾರಿ ಎರಡು ಜಿಲ್ಲೆಗಳನ್ನು ೩೭೧ ಜೆ ಅಡಿಯಲ್ಲಿ ಜಾರಿಗೆ ತರುವ ಮೂಲಕ ಪರಶುರಾಂಪುರ ತಾಲೂಕು ಕೇಂದ್ರ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸಂಸ್ಥೆ, ಡಿಆರ್ ಡಿಒ, ಸೇರಿದಂತೆ ಕೇಂದ್ರದ ಸಂಸ್ಥೆಗಳು ಸ್ಥಾಪನೆಯಾಗಿದ್ದು ಸ್ಥಳಿಯರಿಗೆ ಉದ್ಯೋಗ ಕಲ್ಪಿಸ ಬೇಕು, ರಾಣಿಕೆರೆ ಪೀಡರ್ ಚಾನಲ್ , ಕೆರೆ ಗಳು ಅಭಿವೃದ್ಧಿ, ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಪಡಿಸಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಮಾತನಾಡಿ ಕನ್ನಡ ಭಾಷೆಗೆ ಸೌಂದರ್ಯವಿದೆ. ಭಾಷೆಯನ್ನು ಗೌರವಸುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಜನರನ್ನು ಗೌರವಿಸಿದಂತೆ. ನಮ್ಮ ಜಿಲ್ಲೆ ಅದರಲ್ಲೂ ಚಳ್ಳಕೆರೆ ತಾಲೂಕು ಹಲವಾರು ತಳಕಿನ ವೆಂಕಣ್ಣಯ್ಯ, ಜಾನಪದ ಸಿರಿಯಜ್ಜಿ, ಬೆಳೆಗೆರೆ ಕೃಷ್ಣಶಾಸ್ತಿç ಸೇರಿದ ಹಲವು ಸಾಹಿತಿಗಳ ಜನ್ಮ ಸ್ಥಳವಾಗಿದ್ದು ಕನ್ನಡ ಭವನ, ನಾಡೋಜ ದಿ.ಸಿರಿಯಜ್ಜಿಯ ಸ್ಮಾರಕ,ಶತಮಾನ ಕಂಡ ಶಾಲೆಗಳನ್ನು ಉನ್ನತೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು, ಜಾರಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬರಡು ಸೀಮೆಯನ್ನು ಹಸಿರು ವಲಯವನ್ನಾಗಿಸುವುದು, ತಾಲೂಕಿನ ಬಡ ಕುಟುಂಬದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಅರಣ್ಯ ಕೃಷಿ ಪದ್ದತಿ, ಸೇರಿದಂತೆ ಹಲವು ಯೋಜೆಗಳನ್ನು ಜಾರಿಗೊಳಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ೪ ನೇ ಸಮ್ಮೇಳನ ಕಾರ್ಯಕ್ಕೆ ಸುಮಾರು ೨ ಸಾವಿರ ಕನ್ನಡಾಭಿಮಾನಿಗಳ ನಿರೀಕ್ಷೆಯಿತ್ತು ಆದರೆ ನಿರೀಕ್ಷೆಯಂತೆ ಬಾರದೆ ಇರುವುದು ವಿಷಾಧನೀಯ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗವಹಿಸಿ ಎಲ್ಲಾರಿಗೂ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಯಶಸ್ವಿಗೆ ಸಹಕರಿದವರು ಅಭಿನಂಧನೆಗಳನ್ನು ತಿಳಿಸಿದರು.
ಕಾರ್ಯಕ್ರಕ್ಕೂ ಮುನ್ನ ಬೆಳಗ್ಗೆ ೭ ಗಂಟೆಗೆ ತಹಶೀಲ್ದಾರ್ ರೇಹಾನ್ ಪಾಷ ರಾಷ್ಟçಧ್ವಜರೋಹಣ ನೆರವೇರಿಸಿದರು, ನಗರಸಭೆ ಅಧ್ಯಕ್ಷೆ ಸುಮಕ್ಕ ನಾಡಧ್ವಜರೋಹಣ, ತಾಲೂಕು ಅಧ್ಯಕ್ಷ ಪರಿಷತ್ ಧ್ವಜರೋಹಣ, ಸಾಹಿತಿ ಮರಿಕುಂಟೆ ತಿಪ್ಪಣ್ಣ ಬೆಳಗೆರೆ ಕೃಷ್ಣ ಶಾಸ್ತಿçಯವರ ಮಹಾಧ್ವರವನ್ನು ಉದ್ಘಾಟಿಸಿದರು ನಂತರ ಚಳ್ಳಕೆರೆಮ್ಮ ದೇವಸ್ಥಾನ ಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಇವರನ್ನು ಸಾರೋಟದಲ್ಲಿ ವಿವಿಧ ಕಲಾ ತಂಡಗಳೊAದಿಗೆ ಪ್ರಮುಖ ಬೀದಿಗಳನ್ನುಮೆರವಣಿಗೆ ಮೂಲಕ ಕಾರ್ಯಕ್ರಮದ ವೇಧಿಯತ್ತ ಕರೆ ತಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿಸಮಿತಿ ಅಧ್ಯಕ್ಷೆ ಎಂ.ಜೆ,ರಾಘವೇAದ್ರ, ಸಾಹಿತಿ ಮಿರಸಾಬಿಹಳ್ಳಿ ಶಿವಣ್ಣ, ಮಾಜಿ ಗಡಿನಾಡು ಅಧ್ಯಕ್ಷ ರಾಮಚಂದ್ರಪ್ಪ,ನಾಟಕ ಅಕಾಡಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಕ.ಸ,ಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ,ಡಾ.ಎA.ಮAಜಣ್ಣ, ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ , ಪಾಪಣ್ಣ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಹೊನ್ನಯ್ಯ, ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ಮೋದೂರು ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರ ಸಾಹಿತಿ , ಕವಿಗಳಿಗೆ ಸನ್ಮಾನಿಸಿ ಗೌರವಿಸಿದರು.
0 Comments