ಚಳ್ಳಕೆರೆ ಜ.19 ಮಹಾಯೋಗಿ ವೇಮನ ಪ್ರಜಾಕವಿ ಎಂಬ ಹೆಸರಿನಿಂದ ಪ್ರಖ್ಯಾತ ಹೊಂದಿದ್ದರು ಬಸವಣ್ಣ ಅಂಬೇಡ್ಕರ್ ರವರ ಸಮಾನತೆಯ ತತ್ವವನ್ನು ತಮ್ಮ ಕವಿತೆಗಳ ಮೂಲಕ ಸಾರಿದಂತಹ ಮಹಾನ್ ಮಾನವತಾವಾದಿ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ವೇಮನರು ಜನರ ನಡೆನುಡಿಯನ್ನು ಕಂಡು ಕವಿತೆಗಳನ್ನು ರಚಿಸಿದಂತವರು ಜನರ ಜೀವನದ ಕಷ್ಟ ಸುಖಗಳನ್ನು ತಮ್ಮ ಕವಿತೆಗಳಲ್ಲಿ ಬರೆದು ಜನಾನುರಾಗಿಯಾಗಿ ತಮ್ಮ ಬದುಕನ್ನು ಕಳೆದಂತಹ ಮಹಾನ್ ಮೇಧಾವಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸ್ಮರಿಸಿದರು.
ತಹಶೀಲ್ದಾರ್ ರೆಹಾನ್ ಪಾಷ ಮಾತನಾಡಿ ಮಹಾಯೋಗಿ ಹೇಮನರು ಬರೆದಿರುವ ಸಾಹಿತ್ಯ ರಚನೆ ಜೀವನದ ಅನುಭವದಿಂದ ಬಂದಂತಹದಾಗಿದೆ ಬೇರೆಯವರ ಮೇಲೆ ತಮ್ಮ ಬೊಟ್ಟು ತೋರಿಸುವ ಬದಲು ಮನಸ್ಸನ್ನು ಶುದ್ಧೀಕರಣ ಗೊಳಿಸಿಕೊಳ್ಳಬೇಕು ಆತ್ಮ ಶುದ್ಧಿ ಇರದೆ ಯಾವ ಕೆಲಸ ಮಾಡಿದರು ವ್ಯರ್ಥ ಪ್ರತಿಯೊಬ್ಬ ವ್ಯಕ್ತಿಯು ಜನ ಸಮಾಜದ ಜೊತೆ ಬದುಕಬೇಕೆ ಹೊರತು ಒಬ್ಬಂಟಿಯಾಗಿ ಬದುಕಿದರೆ ಅದಕ್ಕೆ ಅರ್ಥವಿರುವುದಿಲ್ಲ ಮನುಷ್ಯನ ಮಾತಿನ ವಕ್ರತೆ ಮತ್ತು ಕಲ್ಲಿನ ವಕ್ರತೆಯನ್ನು ತಿದ್ದಬಹುದು ಆದರೆ ಮನಸ್ಸಿನ ವಕ್ರತೆಯನ್ನು ಎಂದಿಗೂ ಸಹ ತಿದ್ದಲಾಗದು ಎಂಬ ಆಶಯ ನುಡಿಗಳನ್ನು ವೇಮನರು ತಮ್ಮ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ಉಣ ಬಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯೆ ಸುಮಾ ಭರಮಣ್ಣ ಗದ್ದಿಗೆ ತಿಪ್ಪೇಸ್ವಾಮಿ ತಾಲೂಕು ಪಂಚಾಯಿತಿ ಇ ಓ ಶಶಿಧರ್ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸಮುದಾಯದ ಮುಖಂಡರಾದ ರಘು ರೆಡ್ಡಿ ತಿಮ್ಮಾರೆಡ್ಡಿ ಬಸವ ರೆಡ್ಡಿ ವೆಂಕಟೇಶ್ ರೆಡ್ಡಿ ರಾಜು ಕೃಷ್ಣಾರೆಡ್ಡಿ ಲಕ್ಷ್ಮಣ್ ರೆಡ್ಡಿ ತಿಮ್ಮಾರೆಡ್ಡಿ ಬಿವಿ ಸಿರಿಯಣ್ಣ
ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
0 Comments