ಹಿರಿಯೂರು ಮೇ26 ಟೌನ್ ವೇದಾವತಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಂದ್ರಾ ಲೇ ಔಟ್ ಗೆ ಸಂಪರ್ಕ ಕಲ್ಪಿಸುವ ಪಾರಂಪರಿಕ ರೂಢಿಗತ ಬಂಡಿದಾರಿಯನ್ನು ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ನಡುವೆ ಕಳೆದ 3 ವರ್ಷಗಳಿಂದ ತಡೆ ಹಿಡಿಯಲಾಗಿದೆ.
ಅಡ್ಡಿ ಪಡಿಸಿರುವ ರಸ್ತೆಯನ್ನು Easement Act ಪ್ರಕಾರ ಬಿಡಿಸಿಕೊಡಲು ಕೋರಿ 55 ಜನ ನಾಗರಿಕರು ಮೊಬೈಲ್ ನಂಬರ್ ಸಹಿತ ಸಹಿ ಮಾಡಿದ ಅರ್ಜಿಯನ್ನು ಹಿರಿಯೂರು ತಹಶೀಲ್ದಾರ್,ಪೌರಾಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಲಾಗಿದೆ,ದಾರಿ ವಿವಾದ ಬಗೆಹರಿಸಲು ಯಾವುದೇ ಅಧಿಕಾರಿಗಳು ಬಾರದೆ ಇದ್ದಾಗ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿ ವಿಚಾರಣೆಗೆ ಮಂಡಿಸಿದಾಗ ಜಿಲ್ಲಾಧಿಕಾರಿಗಳಿಗೆ ಸ್ಥಳ ತನಿಖೆ ನಡೆಸಿ ವರದಿ ನೀಡಲು SHRC ಆದೇಶ ಮಾಡಿದ್ದರೂ ಕೂಡ ದಾರಿ ಸಮಸ್ಯೆ ಜೀವಂತವಾಗಿ ಇರುತ್ತದೆ.
ಮುಖ್ಯ ಮಂತ್ರಿಗಳ ಏಕೀಕೃತ ಕುಂದುಕೊರತೆ ಜನಸ್ಪಂದನ ವಿಭಾಗಕ್ಕೆ ದೂರು ದಾಖಲಿಸಿ ವಿಚಾರಣೆಗೆ ಮಂಡಿಸಿದಾಗ ಪೌರಾಯುಕ್ತರು ಮುಂದಿನ ಕೌನ್ಸಿಲ್ ಸಭೆಯಲ್ಲಿ ಅನುದಾನ ಕಾಯ್ದಿರಿಸಿ ರಸ್ತೆ ಮಾಡುವುದಾಗಿ ಹೇಳಿಕೆ ನೀಡಿ ಆನ್ಲೈನ್ ಕಂಪ್ಲೆಂಟ್ ಮುಕ್ತಾಯ ಮಾಡಿರುತ್ತಾರೆ. ಪೌರಾಯುಕ್ತರು ನಗರಸಭೆ ಆರೋಗ್ಯ ನಿರೀಕ್ಷಕರಿಗೆ ರಸ್ತೆ ಸ್ವಚ್ಛವಾಗಿಡಲು ಸೂಚಿಸಿರುವುದಾಗಿ ತಿಳಿಸಿರುತ್ತಾರೆ,ಆದಾಗ್ಯೂ ರಸ್ತೆ ಸ್ವಚ್ಛಗೊಳಿಸಲು ಯಾರೂ ಬಂದಿಲ್ಲ ಎಂದು ದಿನಾಂಕ 26-05-2023 ರಂದು ಚಿತ್ರದುರ್ಗ ಜಿಲ್ಲೆ ಅಪರ ಜಿಲ್ಲಾಧಿಕಾರಿಗಳಿಗೆ ಪೂರಕ ದಾಖಲೆಗಳ ಸಹಿತ ಚಂದ್ರಾ ಲೇ ಔಟ್ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ರಾಥೋಡ್ ಉಪಾಧ್ಯಕ್ಷ ಸ್ವಾಮಿ,ಕಾರ್ಯದರ್ಶಿ ಸಿ ಜಿ ಗೌಡ ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷರಾದ ಆಲೂರು ರಾಮಣ್ಣನವರು ದೂರು ಅರ್ಜಿ ಸಲ್ಲಿಸಿರುತ್ತಾರೆ,ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮತ್ತು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಎಸ್ ವಿ ರಂಗನಾಥ್ ಉಪಸ್ಥಿತರಿದ್ಧರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments