ಚಳ್ಳಕೆರೆ ಡಿ.9. ಚಳ್ಳಕೆರೆ ನ್ಯಾಯಾಲಯದಲ್ಲಿ ತಳಕು ಹೋಬಳಿ ವ್ಯಾಪ್ತಿಯ ಮೈಲನಹಳ್ಳಿ ಗ್ರಾಮದ ಗುರುರಾಜ್ ಹಾಗೂ ಅನಿತಾಕುಮಾರಿ ಸುಮಾರು 5 ವರ್ಷಗಳ ನಂತರ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ನಗೆ ಬೀರಿದರು.
ಸುಮಾರು 5 ವರ್ಷಗಳಿಂದ ದಾಂಪತ್ಯ ಪುನರ್ ಪ್ರಾಪ್ತಿ ಕೋರಿ ಸಲ್ಲಿಸುತ್ತಿದ್ದ ಸತಿ–ಪತಿ ಶನಿವಾರ ಒಂದಾಗಿರುವ ಅಪರೂಪದ ಕ್ಷಣಕ್ಕೆ ಚಳ್ಳಕೆರೆ ನ್ಯಾಯಾಲಯ ಸಾಕ್ಷಿಯಾಗಿದೆ. ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ನಲ್ಲಿ ದಂಪತಿ ಮತ್ತೊಮ್ಮೆ ಹಾರ ಬದಲಿಸಿಕೊಂಡಿದ್ದಾರೆ.
ಕೆಲ ಕಾರಣಗಳಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡಿ ದಾಂಪತ್ಯ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತ್ತು. ಪತಿ ಹಾಗೂ ಪತ್ನಿ ಇಬ್ಬರು ದಾಂಪಾತ್ಯ ಪುನರ್ ಪ್ರಾಪ್ತಿಗಾಗಿ ನ್ಯಾಯಾಲಕ್ಕೆ ನ್ಯಾಯಾಲಯಕ್ಕೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು.
ಶನಿವಾರ ಜೆಎಂಎಫ್ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಕಲ್ಕಪ್ಪ ಗೋಣಿ ಇವರ ಸಮ್ಮುಖದಲ್ಲಿ ಅನಿತಾಕುಮಾರಿ ಪರ ವಕೀಲರಾದ ಕೆ.ಸಿ.ನಾಗರಾಜ್. ಗುರುರಾಜ್ ಪರ ವಕೀಲ ಚಂದ್ರಣ್ಣ ಅರ್ಜಿದಾರರಾದ ಗುರಾಜ್ ಹಾಗೂ ಪತ್ನಿ ಅನಿತಾಕುಮಾರಿ ಜತೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದರು. ಬಳಿಕ ಇಬ್ಬರೂ ಮನಸ್ಸು ಬದಲಿಸಿದ್ದು, ಮತ್ತೆ ಜೊತೆಯಾಗಿ ಬಾಳಲು ಸಮ್ಮತಿಸಿದ್ದರು. ದಾಂಪತ್ಯದಲ್ಲಿ ಒಡಕು ಮೂಡುವುದು ಸಹಜ. ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ನ್ಯಾಯಾಲಯದ ಮೆಟ್ಟಿಲು ಏರುವುದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಸರಿಯಲ್ಲ. ಇನ್ನು ಮುಂದೆ ಗಂಡ ಹೆಂಡತಿ ಅನ್ಯೋನ್ಯವಾಗಿ ಸುಖ ಸಂಸಾರ ನಡೆಸುವಂತೆ ಗಂಡ ಹೆಂಡತಿಗೆ ಕಿವಿ ಮಾತು ಹೇಳಿ ಸತಿ ಪತಿ ಹಾರ ಬದಲಾಯಿಸಿಕೊಂಡು ಇಬ್ಬರು ನಗೆ ಬೀರಿದರು.
0 Comments