ದಲಿತ ಕುಂದು ಕೊರತೆ ಸಭೆ ಕರೆದು ಒಂದು ವರ್ಷ ಕಳೆದಿದೆ ಅಧಿಕಾರಿಗಳು ಬರ‍್ತಾರೆ ಹೋಗ್ತಾರೆ ಆದರೆ ಹಿಂದಿನ ಸಭೆಯಲ್ಲಿ ನಡೆದ ಕುಂದು ಕೊರತೆಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿದಿವೆ ಸಭಾ ನಡುವಳಿ ಪುಸ್ತಕವೂ ಇಲ್ಲದಂತಾಗಿದೆ ಎಂದು ದಲಿತ ಮುಖಂಡರ ಗಂಭೀರ ಆರೋಪ..

by | 13/11/23 | ಸುದ್ದಿ

‌ ‌ ‌‌‌‌‌ ಚಳ್ಳಕೆರೆ ಜನಧ್ವನಿ ವಾರ್ತೆ ನ.13. ದಲಿತ ಕುಂದು ಕೊರತೆ ಸಭೆ ಕರೆದು ಒಂದು ವರ್ಷ ಕಳೆದಿದೆ ಅಧಿಕಾರಿಗಳು ರ‍್ತಾರೆ ಹೋಗ್ತಾರೆ ಆದರೆ ಹಿಂದಿನ ಸಭೆಯಲ್ಲಿ ನಡೆದ ಕುಂದು ಕೊರತೆಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿದಿವೆ ಸಭಾ ನಡುವಳಿ ಪುಸ್ತವೂ ಇಲ್ಲದಂತಾಗಿದೆ ಎಂದು ದಲಿತ ಮುಖಂಡು ಗಂಭೀರ ಆರೋಪ ಮಾಡಿದರು.
ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಉಪಾಧೀಕ್ಷರ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಿದ್ದ ದಲಿತ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಆರೋಪ ಮಾಡಿದರು.
ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣುಗಳು ನಡೆದಾಗ ದಲಿತ ಮುಖಂಡರು ನ್ಯಾಯಕ್ಕಾಗಿ ಠಾಣೆಗೆ ಹೋದಾಗ ಅಲ್ಲಿನ ಸಿಬ್ಬಂದಿಗಳು ಗೌರವ ಕೊಡುತ್ತಿಲ್ಲ ಮೊದಲು ಠಾಣೆಯ ಸಿಬ್ಬಂದಿಗಳಿಗೆ ಸಭೆ ನಡೆಸಿ ಸೌಜನ್ಯರೀತಿ ವರ್ತಿಸುವಂತೆ ತಿಳುವಳಿಕೆ ಹೇಳಬೇಕಿದೆ.


ದಲಿತ ಕುಂದು ಕೊರತೆ ಸಭೆಗೆ ಸಮಾಜಕಲ್ಯಾಣ ಇಲಾಖೆ ಹಾಗೂ ತಹಶೀಲ್ದಾರ್ ಇರಬೇಕು ಯಾವುದೇ ದಲಿತ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳು ಇರುವುದಿಲ್ಲ ಕಳೆದ ಒಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ಹೇಳಲಾಗಿತ್ತು ಅವು ಯಾವೂ ಪರಿಹಾರ ಕಂಡಿಲ್ಲ ಪ್ರತಿ ತಿಂಗಳು ಸಭೆ ನಡೆಯ ಬೇಕು ಹಿಂದಿನ ನಡುವ ಪುಸ್ತಕದಲ್ಲಿನ ಸಮಸ್ಯೆಗಳ ಚರ್ಚೆ ವಿಷಯಗಳ ಹೇಳಿ ಸಭೆ ಮುಂದುವರಿಸುವಂತೆ ದಲಿತ ಮುಖಂಡರಾದ ವಿಜಯ್, ಚಂದ್ರಣ್ಣ, ಆನಂದ್,ತಿಪ್ಪೇಸ್ವಾಮಿ ಒತ್ತಾಯಿಸಿದರು.


ದಲಿತ ಮುಖಂಡ ಮಾಜಿ ನಗರಸಭೆ ಉಪಾಧ್ಯಕ್ಷ ವಿಜಯ್ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಜನ ಸಂಪರ್ಕ ಸಭೆ ನಡೆಸುತ್ತಾರೆ ಅದೇ ರೀತಿ ದಲಿತ ಕುಂದು ಕೊರತೆ ಸಭೆಯನ್ನು ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆ , ಪೋಲಿಸ್ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಟಿ.ರಘುಮೂರ್ತಿ ದಲಿತ ಕುಂದು ಕೊರತೆ ಸಭೆ ನಡೆಸುವಂತೆ ಸಭೆ ಗಮನ ಸೆಳೆದರು.
ದಲಿತ ಮುಖಂಡ ಪ್ರಕಾಶ್ ಮಾತನಾಡಿ ತಳಕು,ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಬಿತ್ತನೆ ಸಮಯದಲ್ಲಿ ರಸ್ತೆ ಸಂಬಂಧ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಆದರೂ ಸಹ ಪೊಲೀಸ್ ಇಲಾಖೆ ದಲಿತರ ಕುಂದು ಕೊರತೆ ಸಭೆಗಳನ್ನು ನೆಪಕ್ಕೆ ಮಾತ್ರ ಮಾಡಲಾಗುತ್ತಿದೆ.
ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ದಲಿತರ ಕುಂದು ಕೊರತೆ ಸಭೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ . ದಲಿತರ ಕಾಲೋನಿಯಲ್ಲಿ ದಲಿತ ಕುಂದು ಕೊರತೆ ಸಭೆಗಳನ್ನು ನಡೆಸುವುದನ್ನು ಬಿಟ್ಟು ಯಾರು ದಲಿತರ ಮೇಲೆ ದೌರ್ಜನ್ಯಗಳು ನಡೆಸುತ್ತಾರೆ ಅಲ್ಲಿ ದಲಿತ ಕುಂದು ಕೊರತೆ ಸಭೆಗಳನ್ನು ನಡೆಸ ಬೇಕು, ದಲಿತ ದೌರ್ಜನ್ಯ ಪ್ರಕರಗಳು ನಡೆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.


ಡಿವೈಎಸ್‌ಪಿ ರಾಜಣ್ಣ ಮಾತನಾಡಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಪ್ರತಿ ತಿಂಗಳು ದಲಿತ ಕುಂದು ಕೊರತೆ ಸಭೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ನಡೆಸಲಾಗುವುದು ಮುಂದಿ ಸಭೆ ಡಿ.12 ಕ್ಕೆ ಆಯೋಜನೆ ಮಾಡಲಾಗುವುದು ಅಷ್ಟೊತ್ತಿಗೆ ಕುಂದು ಕೊರತೆ ಸಭೆಯ ನಡುವಳಿ ಪುಸ್ತಕವನ್ನು ಪತ್ತೆ ಮಾಡಲಾಗುವುದು ದಲಿತರೊಂದಿಗೆ ಪೊಲೀಸ್ ಇಲಾಖೆ ಇದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಮುಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ದ್ಯಾವರನಹಳ್ಳಿ ಮನಕೆರೆ ಶಿವಮೂರ್ತಿ, ನನ್ನಿವಾಳ ನಾಗರಾಜ್, _ಡಾ.ಮಂಜುನಾಥ್ ಸಿ .ಟಿ.ಶ್ರೀನಿವಾಸ್, ಸೂರನಾಯಕ, ದ್ಯಾವರನಹಳ್ಳಿಆನಂದ್ ಕುಮಾರ್. ತಿಪ್ಪೇಶ್, ಹೊಟ್ಟೆಪ್ಪನಹಳ್ಳಿ ಕಾಂತರಾಜ್, ಭೂಸುದಾರಣೆ ಹಕ್ಕು ಹೋರಾಟ ಸಮಿತಿ ಶ್ರೀನಿವಾಸ್ ಮಾತನಾಡಿದರು.
ವೀರಭದ್ರಿ., ಸೂರಿ., ನಾವೆಲ್ಲ ಮಹೇಶ್, ಇತರರಿದ್ದರು.
ಚಳ್ಳಕೆರೆ ಪಿಐ ಆರ್.ಎಫ್.ದೇಸಾಯಿ, ತಳಕು ವೃತ್ತ ನಿರೀಕ್ಷಕ ಸಮೀವುಲ್ಲ, ಪಿಎಸ್‌ಐ ಗಳಾದ ಶಿವರಾಜ್ , ಧೆರಪ್ಪ , ದಲಿತ ದಲಿತ ಮುಖಂಡರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *