ಹಿರಿಯೂರು :
ಚಂದ್ರಾ ಲೇ ಔಟ್ ರಸ್ತೆ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಯಾವುದೇ ಮೇಲಾಧಿಕಾರಿ ಅಥವಾ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೂ ಕೂಡ 13 ವರ್ಷಗಳ ಕಾಲ ರಸ್ತೆ ಬಿಡಿಸಿಕೊಡಲು ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬುದಾಗಿ ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ ಗಂಭೀರ ಆರೋಪ ಮಾಡಿದ್ದಾರೆ.
ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ :ಸಿ ಆರ್ :286/2009-10 2010 ಡಿಸೆಂಬರ್ 16 ರಂದು ಹಿರಿಯೂರು ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಬಬ್ಬೂರು ಸರ್ವೇ ನಂಬರ್ 40/3 ರಲ್ಲಿ ಒತ್ತುವರಿ ಮಾಡಿರುವ ರಸ್ತೆ ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ಮಾಡಿರುತ್ತಾರೆ.
ದಾರಿ ಅಡ್ಡಿಪಡಿಸಿರುವ ಎದುರುದಾರರು ಜಿಲ್ಲಾಧಿಕಾರಿ ಆದೇಶದಂತೆ ದಾರಿ ಬಿಡದೆ ಹಿರಿಯೂರು ಜೆ ಎಮ್ ಎಫ್ ಸಿ ನ್ಯಾಯಾಲಯದಲ್ಲಿ ಓ ಎಸ್ :ನಂ :17/2010 ರಂತೆ ದೂರು ದಾಖಲಿಸಿ ನಿರಂತರವಾಗಿ 7 ವರ್ಷಗಳ ಕಾಲ ಕೇಸು ನಡೆಸಿಕೊಂಡು ಬಂದಿದ್ದು, ಆದರೆ ಘನ ನ್ಯಾಯಾಲಯ 2017 ರ ಜೂನ್ 6 ವಿನಾಕಾರಣ ವ್ಯಾಜ್ಯ ಉಂಟುಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದರಿಂದ ದೂರುದಾರರೆ ಎದುರುದಾರರಿಗೆ ನ್ಯಾಯಾಲಯದ ಖರ್ಚು ನೀಡಲು ಆದೇಶಿಸಿ ಕೇಸು ವಜಾ ಆಗಿರುತ್ತದೆ.
ಆದಾಗ್ಯೂ ಮತ್ತೊಮ್ಮೆ ಹಿರಿಯೂರು ಜೆ.ಎಮ್.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆರ್.ಎ.ನಂ.15/2017 ರಂತೆ ಮೇಲ್ಮನವಿ ಸಲ್ಲಿಸಿ 6 ವರ್ಷಗಳ ಬಳಿಕ 2023 ಜೂನ್ 13 ರಂದು ಮೇಲ್ಮನವಿ ಕೂಡ ವಜಾ ಆಗಿದ್ದು, ಓ.ಎಸ್. ನಂ:17/2010 ರ ಆದೇಶವನ್ನು ಎತ್ತಿ ಹಿಡಿಯಲಾಗಿದೆ.
ಈ ಪ್ರಯುಕ್ತ ಜಿಲ್ಲಾಧಿಕಾರಿಗಳ ಆದೇಶದಂತೆ ಹಿರಿಯೂರು ತಹಶೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರು ರಸ್ತೆ ಬಿಡಿಸಿಕೊಡಲು ಜವಾಬ್ದಾರರಾಗಿರುತ್ತಾರೆ ಎಂಬುದಾಗಿ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ರಾಥೋಡ್ ತಿಳಿಸಿದ್ದಾರೆ.
ಚಂದ್ರಾ ಲೇ ಔಟ್ ನಾಗರೀಕ ಹಿತರಕ್ಷಣಾ ಸಮಿತಿ ಮತ್ತು ಉಪ್ಪಾರ ಸಂಘದ ಪದಾಧಿಕಾರಿಗಳು ನಿರಂತರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ,ದಾರಿ ಬಿಡಿಸಿಕೊಡಲು ಸತ್ಯಾಗ್ರಹ ಮಾಡುತ್ತಿದ್ದರೂ ಕೂಡ ಅಧಿಕಾರಿಗಳು ಏಕೆ ದಾರಿ ಬಿಡಿಸಿಕೊಡಲು ಮುಂದೆ ಬರುತ್ತಿಲ್ಲ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ 13 ವರ್ಷಗಳ ಕಾಲ ದಾರಿಬಿಡಿಸಿಕೊಡದೆ ಈಭಾಗದ ನಾಗರೀಕರಿಗೆ ತೊಂದರೆಯಾಗಿರುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೂ ಕೂಡ ಈ ಭಾಗದ ನಾಗರೀಕರ ರಸ್ತೆ ಸಮಸ್ಯೆ ಜೀವಂತವಾಗಿಟ್ಟಿರುವ ಅಧಿಕಾರಿಗಳ ವಿಳಂಬ ನೀತಿ ಸಲ್ಲದು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಯುಕ್ತ ಮೇಲಾಧಿಕಾರಿ ಆದೇಶ ಪಾಲಿಸದೆ ಕರ್ತವ್ಯ ನಿರ್ಲಕ್ಷ್ಯ ಮಾಡಿರುವ ಈ ಹಿಂದೆ ಇದ್ದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ,ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶ ಮಾಡಿ ಹಾಲಿ ಇರುವ ಅಧಿಕಾರಿಗಳ ಮೂಲಕ ರಸ್ತೆ ಬಿಡಿಸಿಕೊಡಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಸ್ವಾಮಿ ,ಕಾರ್ಯದರ್ಶಿ ಸಿ.ಜಿ.ಗೌಡ, ಗ್ರಾ ಪಂ ಸದಸ್ಯರಾದ ಶಶಿಕಲಾ ,ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments