ಚಿತ್ರದುರ್ಗ ಮಾ.27 ಮುಂಬರುವ ಲೋಕಸಭಾ ಚುನಾವಣೆಗೆ ದೈಹಿಕ ಅಂಗವಿಕಲ ಶಿಕ್ಷಕರು, ಗರ್ಭಿಣ ಯರು, ನವಜಾತ ಶಿಶು ಹೊಂದಿರುವ ಶಿಕ್ಷಕಿಯರು ಹಾಗೂ ಮಾರಣಾಂತಿಕ ಖಾಯಿಲೆಯುಳ್ಳ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಬಾರದಾಗಿ ಮನವಿ ಮಾಡಿದ್ದೇವೆ ಎಂದು ಚಿತ್ರದುರ್ಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ ಬಿ ಮಹಂತೇಶ ಹೇಳಿದರು
ಚಿತ್ರದುರ್ಗ ನಗರದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ) ಹಾಗೂ ವಿವಿಧ ತಾಲೂಕುಗಳ ಶಿಕ್ಷಕರ ಸಂಘದ ವತಿಯಿಂದ ಸಂಘದ ಪದಾಧಿಕಾರಿಗಳು ಚುನಾವಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು
ಭಾರತ ಚುನಾವಣಾ ಆಯೋಗ ಮತ್ತು ಸರ್ಕಾರದ ಸೂಚನೆಯಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿರುವ ತೀವ್ರತರ ಖಾಯಿಲೆಯಿಂದ ಬಳಲುವ ಶಿಕ್ಷಕರು, ದೈಹಿಕ ಅಂಗವಿಕಲತೆಯುಳ್ಳ ಶಿಕ್ಷಕರು, ಗರ್ಭಿಣ ಯರು ನವಜಾತ ಶಿಶುವುಳ್ಳ ಶಿಕ್ಷಕಿಯರನ್ನು ಜಿಲ್ಲಾ ಚುನಾವಣಾಧಿಕಾರಿಗಳು ಮುಂಬರುವ ಸಾರ್ವತ್ರಿಕ ಚುನಾವಣಾ ಕಾರ್ಯಕ್ಕೆ ನಿಯೋಜಿಸದೆ ಇವರಿಗೆ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದೇವೆ ಎಂದರು
ಪ್ರಧಾನ ಕಾರ್ಯದರ್ಶಿ ಜಿ ಟಿ ಹನುಮಂತಪ್ಪ ಮಾತನಾಡಿ ಶಿಕ್ಷಕರ ಮನವಿಯಂತೆ ಸಂಘವು ಜಿಲ್ಲಾ ಮತ್ತು ತಾಲೂಕು ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಪತ್ರ ನೀಡಿ ಶಿಕ್ಷಕರ ಹಿತ ದೃಷ್ಟಿಯಿಂದ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು
ಮನವಿ ಪತ್ರ ಸಲ್ಲಿಸುವ ವೇಳೆ ಚುನಾವಣಾ ಶಾಖೆಯ ಅಧಿಕಾರಿ ಸಂತೋಷ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಿ ಬಿ ಮಹಂತೇಶ, ಗೌರವಾಧ್ಯಕ್ಷ ಕೆ ವೀರಣ್ಣ, ಪ್ರಧಾನ ಕಾರ್ಯದರ್ಶಿ ಜಿ ಟಿ ಹನುಮಂತಪ್ಪ, ಸಂಘದ ಗೌರವಾಧ್ಯಕ್ಷ ಕೆ ವೀರಣ್ಣ, ಕಾರ್ಯಾಧ್ಯಕ್ಷ ಆರ್ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಎಸ್ ಕೆಂಚಪ್ಪ, ಚಿತ್ರಹಳ್ಳಿ ರುದ್ರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು
0 Comments