ತಿರುಗಿ ಬಾರದೂರಿಗೆ ನಡೆದ ಅಲ್ಲೂರಿ ..

by | 16/11/22 | ಮಾತೆಂದರೆ ಇದು, ವೈರಲ್, ಸಿನಿಮಾ, ಸುದ್ದಿ

ತಿರುಗಿ ಬಾರದೂರಿಗೆ ನಡೆದ ಅಲ್ಲೂರಿ …….
*************************************
8 ಜನವರಿ 2022 ಅಣ್ಣ ರಮೇಶ್‌ಬಾಬು ನಿಧನ;
28 ಸೆಪ್ಟೆಂಬರ್ 2022 ತಾಯಿ‌ ಇಂದಿರಾದೇವಿ ನಿಧನ;
15 ನವಂಬರ್ 2022 ತಂದೆ ಸೂಪರ್ ಸ್ಟಾರ್ ಕೃಷ್ಣ‌ ನಿಧನ.

ಕಳೆದ ಹನ್ನೊಂದು ತಿಂಗಳ ಅವಧಿಯಲ್ಲಿ ತನ್ನ ಕುಟುಂಬದ ಮೂವರು ಹಿರಿಯರನ್ನು ಕಳೆದುಕೊಂಡ ದೌರ್ಭಾಗ್ಯವಂತ ನಟ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ! ಅವರ ದೌರ್ಭಾಗ್ಯದ ಸಾಲಿಗೆ ಅವರ ತಂದೆ ತೆಲುಗು ಚಿತ್ರರಂಗದ ಒಂದು ಕಾಲದ ಸುಂದರ ನಟ, ನಟ ಶೇಖರ ಘಟ್ಟಮನೇನಿ ಶಿವರಾಮಕೃಷ್ಣ ಮೂರ್ತಿ ಅಥವಾ ಎಲ್ಲರ ನೆಚ್ಚಿನ ಸೂಪರ್ ಸ್ಟಾರ್ ಕೃಷ್ಣ ಇಂದು ಸೇರಿದ್ದು ದುರಂತಮಯ ಘಟ್ಟ.

ವಯೋ ಸಹಜ ಖಾಯಿಲೆ ಹಾಗೂ ಹೃದಯಾಘಾತದಿಂದ ಇಂದು ಮುಂಜಾನೆ‌ ಕೊನೆಯುಸಿರೆಳೆದ ಕೃಷ್ಣ ರ ನಿಧನದಿಂದ ತೆಲುಗು ಚಿತ್ರರಂಗವನ್ನು‌ ದಶಕಗಳ ಕಾಲ ಆಳಿದ ಒಂದು‌ ಭವ್ಯ ಕೊಂಡಿ ಕಳಚಿದಂತಾಗಿದೆ.

ನಮಗಿನ್ನೂ ಚೆನ್ನಾಗಿ ನೆನಪಿರುವಂತೆ, ನಮ್ಮ ಬಾಲ್ಯದ ದಿನಗಳಲ್ಲಿ ಟೂರಿಂಗ್ ಟಾಕೀಸ್ ನಲ್ಲಿ ಕನ್ನಡ ಹೊರತಾಗಿ ಇತರೆ‌ ಭಾಷೆಯ ಚಿತ್ರಗಳನ್ನೂ ನೋಡುವ ಖುಷಿ ನಮ್ಮದಾಗಿತ್ತು. ಕನ್ನಡದಲ್ಲಿ ಅಣ್ಣಾವ್ರು, ತಮಿಳಿನಲ್ಲಿ ಎಂ.ಜಿ.ಆರ್, ಶಿವಾಜಿ ಗಣೇಶನ್, ತೆಲುಗಿನಲ್ಲಿ ಎನ್.ಟಿ.ಆರ್ , ಅಕ್ಕಿನೇನಿ ನಾಗೇಶ್ವರರಾವ್ ಹಾಗೂ ಕೃಷ್ಣ ಇವರ ಚಿತ್ರಗಳೆಂದರೆ ಮುಗಿಬಿದ್ದು‌ ನೋಡುತ್ತಿದ್ದ ದಿನಗಳವು. ಕನ್ನಡ ಬಿಟ್ಟು ಇತರೆ ಭಾಷೆ ಅರ್ಥವಾಗದಿದ್ದರೂ, ಈ ನಾಯಕ ನಟರಿದ್ದಾರೆಂದರೆ ಸಾಕು, ಅವರ ಅಮೋಘ ಅಭಿನಯದಿಂದ ಇಡೀ ಚಿತ್ರವೇ ನಮಗೆ ಅರ್ಥವಾಗುತ್ತಿತ್ತು. ಅದರಲ್ಲೂ ತೆಲುಗಿನ ಕೃಷ್ಣ ರವರ ಅನೇಕ ‌ಸಿನಿಮಾಗಳು ಆ ಕಾಲದ ಪಡ್ಡೆಗಳಾಗಿದ್ದ ನಮಗೆ ಖುಷಿ ಕೊಡಲು ಕಾರಣ ಅವರ ಸಿನಿಮಾಗಳಲ್ಲಿನ ಡಿಶುಂ ಡಿಶುಂ ಫ಼ೈಟಿಂಗ್ಸ್, ಸಾಂಗ್ಸ್, ಹಾಗೂ ಜೇಮ್ಸ್ ಬಾಂಡ್ ಮಾದರಿಯ ಪತ್ತೇದಾರಿ ಸಾಹಸ. ನೋಡಲು ಸ್ಫುರದ್ರೂಪಿಯಾಗಿದ್ದ ಕೃಷ್ಣ ನಮ್ಮ ಪಾಲಿನ ನೆಚ್ಚಿನ ತೆಲುಗು ಹೀರೋ ಆಗಿದ್ದರು.

1960- 70 ರ ದಶಕಗಳ ಕಪ್ಪು ಬಿಳುಪು ಚಿತ್ರಗಳ ಸುವರ್ಣಯುಗದಲ್ಲಿ ಕೃಷ್ಣ ನಟಿಸಿ ತೆರೆಕಂಡ ಅನೇಕ ಚಿತ್ರ ಗಳು ಸೂಪರ್ ಹಿಟ್ ಆಗಿದ್ದವು. ಅವುಗಳಲ್ಲಿ ತೇನೆ ಮನಸುಲು, ಸಾಕ್ಷಿ, ಪಂಡಂಟಿ ಕಾಪುರಂ, ಮರಪುರಾನಿ‌ ಕಥ, ಸ್ತ್ರೀ ಜನ್ಮ, ಮಂಚಿ ಕುಟುಂಬಂ, ಪಗಸಾದಿಸ್ತಾ, ಅಕ್ಕ ಚೆಲ್ಲಿಲು…ಮುಂತಾದ ಸಾಂಸಾರಿಕ ಕಥೆಗಳು ಹಿಟ್ ಆಗಿದ್ದವು. ಆದರೆ ನಮಗೆ ಕೃಷ್ಣ ಎಂದರೆ ನೆನಪಿಗೆ ಬರುವ ಚಿತ್ರಗಳೆಂದರೆ ಕೌಬಾಯ್ ಪಾತ್ರಗಳ ಜೇಮ್ಸ್ ಬಾಂಡ್ ಮಾದರಿ ಚಿತ್ರಗಳು. ಅವುಗಳಲ್ಲಿ ಗೂಢಾಚಾರಿ 116, ಜೇಮ್ಸ್ ಬಾಂಡ್ 777, ಮೋಸಗಾಳ್ಳುಕ್ಕು‌ ಮೋಸಗಾಡು, ಏಜೆಂಟ್ ಗೋಪಿ…ಮುಂತಾದವು ಕಣ್ಣಿಗೆ ಹಬ್ಬದಂತಿದ್ದವು. ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಾ ಬಂದ ಕೃಷ್ಣ ರ ಪ್ರತಿಭೆ ಅನಾವರಣವಾಗಿದ್ದು ಅವರ ಮಹತ್ವಾಕಾಂಕ್ಷೆಯ ನೂರನೇ ಅದ್ಭುತ ಚಿತ್ರ ” ಅಲ್ಲೂರಿ ಸೀತಾರಾಮರಾಜು ” ವಿನ ಪಾತ್ರದಲ್ಲಿ . ಬಹುಶಃ ಕೃಷ್ನರಿಗೆ ಸ್ಟಾರ್ ಡಂ ಕೊಟ್ಟ ಚಿತ್ರ ಅದು. ಈ ಚಿತ್ರದ ಖದರ್ ಹೇಗಿತ್ತೆಂದರೆ ಅದು ಬಿಡುಗಡೆಯಾದ ನಂತರ ಇವರು ನಟಿಸಿದ ಹತ್ತು ಕೌಟುಂಬಿಕ ಚಿತ್ರಗಳು ಸಾಲು ಸಾಲಾಗಿ ಮಕಾಡೆ ಮಲಗಿದ್ದವು. ಕಾರಣ , ಸೀತಾರಾಮರಾಜು ವಿನ ಅಬ್ಬರದಲ್ಲಿ ಕೃಷ್ಣ ರನ್ನು ಕಣ್ತುಂಬಿಕೊಂಡಿದ್ದ ತೆಲುಗು ಪ್ರೇಕ್ಷಕ ಅವರನ್ನು ಸಾಂಸಾರಿಕ ಸಾಫ಼್ಟ್ ರೋಲ್ ಗಳಲ್ಲಿ ಒಪ್ಪಿಕೊಳ್ಳಲು ತಯಾರಾಗಿರಲಿಲ್ಲ. ಅಂದ ಮೇಲೆ ಆ ಪಾತ್ರದ ಎಫ಼ೆಕ್ಟು ಹೇಗಿತ್ತೆಂಬುದನ್ನು ಊಹಿಸಿ.

ಇನ್ನು ಎಪ್ಪತ್ತು ಎಂಭತ್ತರ ದಶಕದಲ್ಲಿ ಕೃಷ್ಣ ರ ಸಿನಿ ಜರ್ನಿ ಉತ್ತುಂಗದಲ್ಲಿತ್ತು. ಅನ್ನದಮ್ಮುಲ ಸವಾಲ್, ಹೇಮಾಹೇಮಿಲು, ಮಂಡೇಗುಂಡೆಲು, ಕುರುಕ್ಷೇತ್ರಮು, ಕುಮಾರ್ ರಾಜಾ ( ಅಣ್ಣಾವ್ರ ಶಂಕರ್ ಗುರು ರಿಮೇಕ್ ), ದೊಂಗಲಕು ದೊಂಗ, ಪಲ್ನಾಟಿ‌ಸಿಂಹಂ, ಅಗ್ನಿಪರ್ವತಂ, ವಜ್ರಾಯುಧಂ, ಜಮದಗ್ನಿ, ಅಶ್ವಥಾಮ, ಸಿಂಹಾಸನಂ….ಹೀಗೆ ಹಿಟ್ ಸಿನಿಮಾಗಳ ಸರದಾರರಾಗಿ ಮೆರೆದ ‌ಕೃಷ್ಣರವರದ್ದು ಒಬ್ಬ ಪಕ್ಕಾ ಪ್ರೊಫ಼ೆಷನಲ್ ಪರ್ಸನಾಲಿಟಿ .

ಕೃಷ್ಣ ಕೇವಲ ನಟ ಮಾತ್ರವಲ್ಲ, ನಿರ್ಮಾಪಕ ನಿರ್ದೇಶಕರೂ ಆಗಿದ್ದರು. ಸುಮಾರು ಹದಿನೈದು ಸಿನಿಮಾಗಳನ್ನು‌ ನಿರ್ದೇಶಿಸಿದ ಕೀರ್ತಿ ಇವರದ್ದು. ಅದಕ್ಕಿಂತ ಹೆಚ್ಚಿಗೆ ಪದ್ಮಾಲಯ ಫ಼ಿಲಂಸ್ ಲಾಂಛನದಲ್ಲಿ ಹಾಗೂ ಪತ್ನಿ ವಿಜಯ ನಿರ್ಮಲರ ಸಾಂಗತ್ಯದಲ್ಲಿ ಅನೇಕಾನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ತೆಲುಗು ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು. ರಾಜಕೀಯ ರಂಗದಲ್ಲೂ ಮಿಂಚಿ‌ ಒಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಲೋಕಸಭಾ ಸದಸ್ಯರೂ ಸಹ ಆಗಿದ್ದರು. ತೆಲುಗು ದೇಶಂ ಗೆ ಟಾಂಗ್ ಕೊಡಲು ” ನಾ‌ ಪಿಲಪೇ ಪ್ರಭಾಂಜನಂ ” ಎಂಬ‌ ಚಿತ್ರ ಆಗ ಸಾಕಷ್ಟು ವಿವಾದಾತ್ಮಕವಾಗಿದ್ದರೂ ಹಿಟ್ ಆಗಿತ್ತು.

ಎರಡನೇ ಪತ್ನಿ ವಿಜಯ ನಿರ್ಮಲ ಜೊತೆ ಕೃಷ್ಣ ಅತಿ ಹೆಚ್ಚು 48 ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರೆ, ಜಯಪ್ರದಾ ನಾಯಕಿಯಾಗಿ ಇವರೊಂದಿಗೆ ಸುಮಾರು 47 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಷ್ಟೇ ಅಲ್ಲದೇ ನಂದಮೂರಿ, ಅಕ್ಕಿನೇನಿ‌ ಅಲ್ಲದೇ ತಮ್ಮ ಸಮಕಾಲೀನ ಎಲ್ಲಾ ಕಲಾವಿದರ ಜೊತೆಯಲ್ಲೂ ಕೃಷ್ಣ ತೆರೆ ಹಂಚಿಕೊಂಡಿದ್ದರು.

ತೆಲುಗು ಚಿತ್ರ ರಂಗದಲ್ಲಿನ ಮೊಟ್ಟ ಮೊದಲ ಸಿನಿಮಾ ಸ್ಕೋಪ್ ಚಿತ್ರ ಅಲ್ಲೂರಿ ಸೀತಾರಾಮರಾಜು ವಿನ‌ ನಿರ್ಮಾಣ ಹಾಗೂ ನಾಯಕ ಕೃಷ್ಣ, ಮೊದಲ ಈಸ್ಟ್ ಮನ್ ಕಲರ್‌ ಸಿನಿಮಾ “ಈ‌ನಾಡು” ವಿನ ಕರ್ತೃ ಕೃಷ್ಣ, ಮೊದಲ 70mm ಸಿನಿಮಾ ಸಿಂಹಾಸನಂ ನಾಯಕ ಕೃಷ್ಣ, ಮೊದಲ DTS ಚಿತ್ರ ” ತೆಲುಗು ವೀರಾ ಲೇವರ ” ನಿರ್ಮಿಸಿದ್ದು ಕೃಷ್ಣ, ಹಾಗೂ ಕೌಬಾಯ್‌ ಪಾತ್ರಗಳನ್ನು ಮೊಟ್ಟಮೊದಲು ಪರಿಚಯಿಸಿದ್ದು ಕೃಷ್ಣ. ….ಹೀಗೆ ಅವರ ಸಾಧನೆಗಳ ಪಟ್ಟಿ‌ ಬೆಳೆಯುತ್ತಾ ಹೋಗುತ್ತದೆ. ಅವರ ಅನನ್ಯ ಕೊಡುಗೆಗಳಿಗಾಗಿ ಪದ್ಮಭೂಷಣ, ನಂದಿ ಅವಾರ್ಡ್, ಆಂಧ್ರ ಯೂನಿವರ್ಸಿಟಿ ಯಿಂದ ಡಾಕ್ಟರೇಟ್, ಫ಼ಿಲಂ‌ಫ಼ೇರ್ , ಎನ್.ಟಿ.ಆರ್ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೂ ಕೃಷ್ಣ ಭಾಜನರಾಗಿದ್ದರು.

ಇಬ್ಬರು ಪತ್ನಿಯರನ್ನು‌ ಹೊಂದಿದ್ದ ಕೃಷ್ಣ ರ ಮೊದಲ ಪತ್ನಿ ಇಂದಿರಾ ದೇವಿಯ ಐದು ಜನ ಮಕ್ಕಳಲ್ಲಿ‌ ಇಂದಿನ ಸೂಪರ್ ಸ್ಟಾರ್ ಮಹೇಶ್ ಬಾಬು ಒಬ್ಬರು. ಅತ್ಯಂತ‌ ಸೂಕ್ಷ್ಮ ಹಾಗೂ ಮೃದುಭಾಷಿತ ಕೃಷ್ಣ ರವರ ಅಗಲಿಕೆ ತೆಲುಗು ಚಿತ್ರಜಗತ್ತಿಗೆ ಬಹುದೊಡ್ಡ ನಷ್ಟ.

** ಮರೆಯುವ ಮುನ್ನ **

ಎಂಭತ್ತರ ದಶಕದಲ್ಲಿ ಕನ್ನಡದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ‌ಜಯಪ್ರದಾರ ಜೋಡಿಯಲ್ಲಿ ಅದ್ದೂರಿಯ ” ಲವ ಕುಶ” ಚಿತ್ರವನ್ನು‌ ತಮ್ಮ ಪದ್ಮಾಲಯ ಫ಼ಿಲಂಸ್ ಅಡಿಯಲ್ಲಿ ನಿರ್ಮಾಣ‌ ಮಾಡಲು ಎಲ್ಲವನ್ನೂ ರೆಡಿ‌ ಮಾಡಿಕೊಂಡು‌, ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ಹಾಗೂ ಹಾಡುಗಳ ಧ್ವನಿಮುದ್ರಣ ಕಾರ್ಯವೂ ಜರುಗಿತ್ತು. ಅದೇನು ಕಾರಣವೋ ಗೊತ್ತಿಲ್ಲ. ಆನಂತರ ಈ‌ ಚಿತ್ರ ಮುಂದುವರೆಯಲೇ ಇಲ್ಲ. ಇಲ್ಲವಾಗಿದ್ದಲ್ಲಿ ಅದು ಬಹುಶಃ ‌ಕನ್ನಡದ ಒಂದು ಅದ್ದೂರಿ ಪೌರಾಣಿಕ ಚಿತ್ರವಾಗುವ ಎಲ್ಲಾ ಸಾಧ್ಯತೆ ಇತ್ತು. ಇದರ ಹೊರತಾಗಿಯೂ ಡಾ. ರಾಜ್ ಕುಮಾರ್ ರವರೊಂದಿಗೆ ಹಾಗೂ ಕನ್ನಡ ಚಿತ್ರರಂಗದ ಜೊತೆ ಕೃಷ್ಣರಿಗೆ ಉತ್ತಮ ಭಾಂದವ್ಯವಿತ್ತು. ಕರ್ನಾಟಕದಲ್ಲೂ ಅವರಿಗೆ ಉತ್ತಮ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಸುಮಾರು ಐದು ದಶಕಗಳ ಕಾಲ ತಮ್ಮ‌ ಅನನ್ಯ‌ ಸೇವೆ ಮತ್ತು ಸಾಧನೆಗಳಿಂದ ತೆಲುಗು ಚಿತ್ರರಂಗದ ಕೀರ್ತಿಯನ್ನು ಎತ್ತರಕ್ಕೇರಿಸಿದ ನಟಶೇಖರ ಕೃಷ್ಣರವರ ಅಗಲಿಕೆ ತೆಲುಗು ಚಿತ್ರರಂಗದ ಚರಿತೆಯಲ್ಲಿ ಒಂದು‌‌ ಕರಾಳ ದಿನ. ದಿಗ್ಗಜರಾದ ನಂದಮೂರಿ ತಾರಕ ರಾಮಾರಾವ್, ಅಕ್ಕಿನೇನಿ ನಾಗೇಶ್ವರರಾವ್, ಶೋಭನ್ ಬಾಬು, ಕೃಷ್ಣಂರಾಜು, ಮುಂತಾದ ಪ್ರತಿಭಾನ್ವಿತ ನಾಯಕನಟರ ಸಾಲಿನ ನೇಪಥ್ಯಕ್ಕೆ ಸೂಪರ್ ಸ್ಟಾರ್ ಕೃಷ್ಣ ಇಂದು ಸರಿದಿದ್ದಾರೆ. ಅವರ ಸೂಪರ್ ಸ್ಟಾರ್ ಪರಂಪರೆಯನ್ನು ಪುತ್ರ‌ ಮಹೇಶ್ ಬಾಬು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು‌ ಹೋಗುತ್ತಿದ್ದಾರೆಂಬ ಕಿಂಚಿತ್ ಸಮಾಧಾನದಲ್ಲಿ ಅಗಲಿದ ಶ್ರೇಷ್ಠ ನಟಶೇಖರನಿಗೆ ಅಭಿಮಾನದ ಅಕ್ಷರನಮನಗಳು.

ಹಿರಿಯೂರು ಪ್ರಕಾಶ್.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page