ತಿಮ್ಮಪ್ಪಯ್ಯನಹಳ್ಳಿ ಮಾರಮ್ಮ ದೇವಿಯ ಹುಂಡಿ ಕಳವು.

by | 03/11/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ನ.3. ಕಳ್ಳರು ದೇವಸ್ಥಾನದ ಹುಂಡಿ ಕಳವು ಮಾಡಿ ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲ್ಲೂಕಿನ ತಿಮಗಮಪ್ಪಯ್ಯನಹಳ್ಳಿ ಗ್ರಾಮದ ಶ್ರೀಮಾರಮ್ಮಾಜಿ ದೇವಸ್ಥಾನದಲ್ಲಿ ಗುರುವಾರ ತಡ ರಾತ್ರಿ ಯಾರೋ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ ಶುಕ್ರವಾರ ಬೆಳಗ್ಗೆ ದೇವಿಯ ಪೂಜೆಂದೇವಸ್ಥಾನಕ್ಕೆ ಬಂದಾಗ ಹುಂಡಿ ಕಳವಾಗಿರುವುದು ಬೆಳಕಿಗೆ ಬಂದಿದ್ದು ತಕ್ಷಣ ಗ್ರಾಮದ ಮುಖಂಡರು ತಳಕು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ . ತಳಕು ಠಾಣೆಯ ಪಿಎಸ್ ಐ ಲೋಕೇಶ್ ಹಾಗೂ ಸಿಬ್ಬಂದಿ ಬೆಳ್ಳಂ ಬೆಳಕಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *