ನಾಯಕನಹಟ್ಟಿ ಮಾ21
ಮಧ್ಯಕರ್ನಾಟಕದಲ್ಲಿ ಪ್ರಖ್ಯಾತವಾಗಿರುವ ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂಗಳ ವಿಮೆಯನ್ನು ಜಿಲ್ಲಾಡಳಿತ ಒದಗಿಸಿದೆ. ಗುರುವಾರ ಇದಕ್ಕೆ ಸಂಬಂಸಿದಂತೆ ವಿಮೆ ಪಾಲಿಸಿ ಪ್ರತಿಯನ್ನು ಕಂಪನಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಗೆ ನೀಡಿದರು.
ದಾವಣಗೆರೆ ವೃತ್ತದ ದಿ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿಯ ವಿಭಾಗೀಯ ಮ್ಯಾನೇಜರ್ ದೇವದಾಸ್ ಮಾತನಾಡಿ, ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. ಒಂದು ವರ್ಷದ ಅವಧಿಗೆ ರಥಕ್ಕೆ 2.5 ಕೋಟಿ ರೂಗಳ ವಿಮೆ ಒದಗಿಸಲಾಗಿದೆ.
ರಥೋತ್ಸವದಲ್ಲಿ ಅವಘಢ ಸಂಭವಿಸಿದಲ್ಲಿ 89 ಭಕ್ತರಿಗೆ ತಲಾ 2 ಲಕ್ಷ ರೂಗಳ ವಿಮೆ ಯನ್ನು 30ದಿನದವೆಗೆ ನೀಡಲಾಗಿದೆ. ರಥದ ಸುತ್ತಲೂ ರಥವನ್ನು ಚಲಾಯಿಸುವ ಹಾಗೂ ಸಾಂಪ್ರದಾಯಿಕ ಸೇವಾಕರ್ತರು ಭಾಗವಹಿಸುತ್ತಾರೆ. ಇಂಥಹ ಸೇವಾಭಕ್ತರಾಗಿರುವ 89 ನಾಮನಿರ್ದೇಶಿದ ಜನರಿಗೆ ತಲಾ 2ಲಕ್ಷ ರೂಗಳ ವಿಮೆ ಒದಗಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗಾಗಿ 25ಲಕ್ಷ ರೂಗಳ ವಿಮೆ ಒದಗಿಸಲಾಗಿದೆ. ರಥವು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಮುಂಜಾಗ್ರತ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ.
ಒಟ್ಟಾರೆ ಮೂರು ಪಾಲಿಸಿಗಳಿಂದ ಒಟ್ಟಾರೆ 51;232, ಗಳ ಚೆಕ್ ನ್ನು ದೇವಾಲಯದ ಇಒ ಹೆಚ್. ಗಂಗಾಧರಪ್ಪ ವಿಮಾ ಕಂಪನಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಉಸ್ತುವಾರಿ ಹೊಂದಿರುವ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಕೀಲ ಬಿ.ಎಂ.ಅರುಣ್ ಕುಮಾರ್ ಇದ್ದರು.
0 Comments