ಹಿರಿಯೂರು :
ಕನ್ನಡ ರಾಜ್ಯೋತ್ಸವದ ಆಚರಣೆ ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ಕನ್ನಡಿಗರರಾದ ನಾವು ಕನ್ನಡನಾಡಿನಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ನಾಡು-ನುಡಿ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂಬುದಾಗಿ ಬಬ್ಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಪ್ಪ ಹೇಳಿದರು.
ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಜೈ ಮಾತಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಬ್ಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಪ್ಪ, ವೇಣುಕಲ್ಲುಗುಡ್ಡದ ಯುವನಾಯಕ ಹಾಗೂ ಸಮಾಜ ಸೇವಕರಾದ ಕೆ.ಅಭಿನಂದನ್, ಮುಖಂಡರಾದ ಸಿ.ಮುರುಳಿಧರ, ಬಿಜೆಪಿ ಯುವ ಮುಖಂಡರಾದ ವೇದಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಬಸವರಾಜ್, ಗೋಕುಲ್ ಸ್ಟುಡಿಯೋ ಗೋವಿಂದ್ ರಾಜು, ರಂಗಸ್ವಾಮಿ ಮತ್ತು ಕಾಂಗ್ರೆಸ್ ಯುವನಾಯಕ ತಿಮ್ಮಯ್ಯ, ವಕೀಲರಾದ ನಾಗರಾಜ್, ಚಿತ್ತಪ್ಪ, ಕಾಡುಗೊಲ್ಲರ ನಾಯಕ ರಂಗಸ್ವಾಮಿ, ಸಿ.ಕೆ.ಕುಮಾರ್, ದಯಾನಂದ, ಕೀರ್ತನ ಗೋಲ್ಡ್ ಅಂಗಡಿಯ ಮಾಲೀಕರಾದ ರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments