ಬೆಂಗಳೂರು :
ಬೆಂಗಳೂರು ರಾಜಭವನದಲ್ಲಿ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆದ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಹಿರಿಯೂರು ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವಾಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಪ್ರಥಮ ತಾಲ್ಲೂಕು ಎಂಬ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ನ ರಾಜ್ಯ ಶಾಖೆಯ ಚೇರ್ಮನ್ ರವರಾದ ವಿಜಯಕುಮಾರ್ ಪಾಟೀಲ್, ಉಪಚೇರ್ಮನ್ ರವರಾದ ಆನಂದ್ ಜಿಗಜನ್ನಿ, ಉಪಾಧ್ಯಕ್ಷರಾದ ಆನಂದ್. ಬಿ. ಹೊಸೂರ್ ರವರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳಾದ ದಿವ್ಯ.ಜಿ. ಆರ್ .ಜಿ.ಪ್ರಭು, ಹಿರಿಯೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ರವರಾದ ಎಚ್.ಎಸ್.ಸುಂದರ್ ರಾಜ್, ಖಜಾಂಚಿ ಸಣ್ಣಭೀಮಣ್ಣ, ಸದಸ್ಯರಾದ ಎಸ್.ಜೋಗಪ್ಪ, ಬಿ.ಕೆ.ನಾಗಣ್ಣ. ದೇವರಾಜಮೂರ್ತಿ, ಹಾಜರಿದ್ದು, ಪ್ರಶಸ್ತಿ ಸ್ವೀಕರಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments