ಹಿರಿಯೂರು:
ತಾಲ್ಲೂಕಿನಲ್ಲಿ ಉಂಟಾದ ತೀವ್ರ ಬರಗಾಲದಿಂದ ಜೆಜೆ ಹಳ್ಳಿ ಹೋಬಳಿಯ ಎಲ್ಲಾ ಕೆರೆಗಳು ಬತ್ತಿ ಹೋಗಿ ಅಂತರ್ಜಲ ಸಂಪೂರ್ಣ ಕುಸಿತವಾಗಿ ಸಾವಿರ ಅಡಿ ಬೋರ್ವೆಲ್ ಕೊರೆದರೂ ನೀರು ಸಿಗದೆ ರೈತರು ಟ್ಯಾಂಕರ್ ಮೂಲಕ ನೀರು ಅರಿಸಿ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಅರೆ ಸಾಹಸ ಪಡುವಂತಾಗಿದೆ ಎಂಬುದಾಗಿ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಜೆಜೆ ಹಳ್ಳಿ ಹೋಬಳಿಯ ರೈತ ಮುಖಂಡರ ಸಭೆ ನಡೆಸಿ ಗಾಯತ್ರಿ ಜಲಾಶಯ ಸೇರಿದಂತೆ ಕಲ್ವಳ್ಳಿ ಭಾಗದ ಎಲ್ಲಾ ಗ್ರಾಮಗಳ ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು.
ಈ ಭಾಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ನೀರು ಬರಲು ಇನ್ನು 10 ರಿಂದ12 ವರ್ಷಗಳೇ ಬರಬೇಕಾಗುತ್ತದೆ. ವೈಜಂಕ್ಷನ್ ನಿಂದ ತುಮಕೂರು ಕಾಲುವೆ ಬಹಳಷ್ಟು ಕಡೆ ಕಾಮಗಾರಿ ಆಗದೆ ರೈತರು ಅಡ್ಡಿಪಡಿಸಿರುತ್ತಾರೆ. ಇನ್ನು ತುಂಗಾದಿಂದ ಭದ್ರಾ ಕಾಮಗಾರಿ ಬಹಳಷ್ಟು ಬಾಕಿ ಇದೆ.
ಈ ಸಂದರ್ಭದಲ್ಲಿ ಈ ಭಾಗದ ರೈತರಿಗೆ ತೋಟ ಉಳಿಸಿಕೊಳ್ಳಲು ಒಂದೇ ಮಾರ್ಗ ಅದು ವಾಣಿವಿಲಾಸ ಜಲಾಶಯದಿಂದ ಈ ಭಾಗದ ಎಲ್ಲಾ ಕೆರೆಗಳು ತುಂಬಿಸಲು ರೈತರು ಪ್ರತಿ ಗ್ರಾಮದಲ್ಲೂ ಸಂಘಟಿತರಾಗಿ ದೊಡ್ಡ ಮಟ್ಟದ ಹೋರಾಟ ಚಳುವಳಿಯನ್ನು ಹಮ್ಮಿಕೊಳ್ಳಬೇಕಾಗಿದೆ ಎಂಬುದಾಗಿ ತಿಳಿಸಿದರು.
ಸಂಘದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ ಮಾತನಾಡಿ, ಈ ಹಿಂದೆ ರೈತ ಸಂಘದ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ 543 ದಿನಗಳ ಕಾಲ ಚಳುವಳಿ ನಡೆಸಿದ ಪರಿಣಾಮವಾಗಿ ಇಂದು ವಾಣಿವಿಲಾಸ ಜಲಾಶಯಕ್ಕೆ ಭದ್ರಾ ನೀರು ಹರಿದು ಬಂದಿದೆ ಎಂದರಲ್ಲದೆ,
ಈಗ ವಾಣಿವಿಲಾಸ ಜಲಾಶಯದಿಂದ ನದಿ ಮೂಲಕ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಆಂಧ್ರದ ಬಿಟಿ ಡ್ಯಾಮ್ ಅವರಿಗೂ ನೀರು ಹರಿಸಲಾಗಿದೆ. ಸರ್ಕಾರದ ಆದೇಶ ಕೇವಲ 0.25 ಟಿಎಂಸಿ ಇದ್ದರೆ ಇವರು ಯಾವುದೇ ಗೇಜ್ ಅಳವಡಿಸದೆ, ಅಧಿಕಾರಿಗಳು ಸುಮಾರು ಒಂದು ಟಿಎಂಸಿ ನೀರನ್ನು ಹರಿಸುತ್ತಾರೆ.
ಆದರೆ ವಾಣಿವಿಲಾಸ ಜಲಾಶಯ ನಿರ್ಮಿಸಿದ ಸಂದರ್ಭದಲ್ಲಿ ಹಿರಿಯೂರು ತಾಲೂಕಿನ ರೈತರಿಗೆ ಎಂದು ಮೀಸಲಿದ್ದು ಈ ಭಾಗದ ನೀರನ್ನು ಗಾಯತ್ರಿ ಜಲಾಶಯಕ್ಕೆ ಯಾಕೆ ಹರಿಸಬಾರದು ಎಂಬುದಾಗಿ ಅವರು ಅರಿವು ಮೂಡಿಸಿದರು.
ಸಭೆಯಲ್ಲಿ ಅನೇಕ ವಿಚಾರಗಳು ಚರ್ಚಿಸಿದ ನಂತರ ಜೂನ್ 10 ರಂದು ಜೆಜೆ ಹಳ್ಳಿ ಬಂದ್ ಗೆ ಕರೆ ನೀಡಲಾಯಿತು ಕರಪತ್ರಗಳನ್ನು ಮಾಡಿಸಿ ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಿಸಿ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನ ಈ ಹೋರಾಟಕ್ಕೆ ಬರಬೇಕೆಂದು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಮಹಾಂತೇಶ್, ಈರಪ್ಪ, ಕೆ.ಆರ್. ಹಳ್ಳಿ ರಾಜಪ್ಪ, ಎಂ.ಆರ್. ವೀರಪ್ಪ ,ತಿಮ್ಮಣ್ಣ, ರಾಮಕೃಷ್ಣ, ಮಂಜುನಾಥ್, ಬಾಲಕೃಷ್ಣ, ಶಶಿಧರ್, ದೇವೇಂದ್ರಪ್ಪ, ಮೋಹನ್, ರಂಗಸ್ವಾಮಿ, ಕನ್ಯಪ್ಪ , ಪೂಜಾರಪ್ಪ, ಗೋವಿಂದ್ ರಾಜ್, ಮೈಲಾರಪ್ಪ, ಲವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments