ಚಳ್ಳಕೆರೆ ಜನಧ್ಬನಿ ವಾರ್ತೆ ನ.,12.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2023-24 ನೇ
ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಸಹ ಪಠ್ಯ ಚಟುವಟಿಕೆ
ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟದಲ್ಲಿ ದಿನಾಂಕ:21-11-2023 ರಂದು ವಿಶ್ವಭಾರತಿ ಪ್ರೌಢಶಾಲೆ
ಚಳ್ಳಕೆರೆ ಇಲ್ಲಿ ಆಯೋಜಿಸಿದ್ದು, ಆಸಕ್ತ ಪ್ರತಿಭಾವಂತ ಶಿಕ್ಷಕರು ಈ ಸ್ಪರ್ಧೆಗಳಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದೆ.ಒಬ್ಬ ಶಿಕ್ಷಕರು ಒಂದು ಸ್ಪರ್ಧೆಯಲ್ಲಿ ಮಾತ್ರ
ಭಾಗವಹಿಸಲು ಅವಕಾಶವಿದ್ದು, ಪ್ರಥಮ ಸ್ಥಾನ ಪಡೆದ ಶಿಕ್ಷಕರು ಮುಂದಿನ ಹಂತಕ್ಕೆ
ಅರ್ಹರಾಗಿರುತ್ತಾರೆ.ಮತ್ತು ವಿಜೇತ ಶಿಕ್ಷಕರಿಗೆ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಯ ವಿಷಯಗಳು ಈ ಕೆಳಗಿನಂತಿವೆ.
ಸ್ಪರ್ಧೆಯ ವಿವರ:- 1.ಜನಪದಗೀತೆ ಸ್ಪರ್ಧೆ
2.ಆಶುಭಾಷಣ ಸ್ಪರ್ಧೆ,
3.ಪ್ರಬಂಧ ಸ್ಪರ್ಧೆ,
4.ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ,
5.ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ ಸ್ಪರ್ಧೆ
6. ರಸಪ್ರಶ್ನೆ(ಸಾಮಾನ್ಯ ಜ್ಞಾನ) ಸ್ಪರ್ಧೆ
7. ರಸಪ್ರಶ್ನೆ(ವಿಜ್ಞಾನ) ಸ್ಪರ್ಧೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments