ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ತಾಲೂಕು ಪಂಚಾಯಿತಿ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳೆಕಿಗೆ ಬಂದಿದೆ.
ತಾಲೂಕು ಪಂಚಾಯತ್ ಕಚೇರಿಯ ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಸಂಯೋಜಕ ಬಾಲರಾಜು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಕಚೇರಿ ಮುಂದೆ ನಿಲ್ಲಿಸಿ ಕರ್ತವ್ಯ ಮಾಡಿ ಹೊರ ಬಂದಾಗ ಬೈಕ್ ಕಳವಾಗಿರುವ ಬಗ್ಗೆ ಆತಂಕಕ್ಕೆ ಸಿಲುಕುವಂತೆ ಮಾಡಿತ್ತು.
ಬೈಕ್ ಹಾಗೂ ಕಳ್ಳ ಸಮೇತ ಬಳ್ಳಾರಿಯಲ್ಲಿ ಸಿಕ್ಕಿದ್ದು ತಳಕು ಪೊಲೀಸ್ ಠಾಣೆಯಿಂದ ಬಾಲರಾಜ್ ಕರೆ ಮಾಡಿ ನಿಮ್ಮಬೈಕ್ ನಂಬರ್ ಹೇಳಿ , ಎಲ್ಲಿ ನಿಲ್ಲಿಸಿದ್ದಿರು ಎಂಬ ಮಾಹಿತಿಯನ್ನು ಪಡೆದು ತನಿಖೆ ಮುಗಿದ ನಂತರ ನಿಮಗೆ ಕರೆ ಮಾಡುತ್ತಾರೆ ಬಳ್ಳಾರಿಗೆ ಹೋಗಿ ನಿಮ್ಮ ಬೈಕ್ ಪಡೆದು ಕೊಂಡು ಬನ್ನಿ ಎಂದು ಮಾಹಿತಿ ನೀಡಿದಾಗ ನಿಟ್ಟುಸಿರು ಬಿಟ್ಟು ನನ್ನ ಬೈಕ್ ಸದಸ್ಯ ಪತ್ತೆಯಾಯಿತು ಎಂದು ನಗೆ ಬೀರಿದ್ದಾರೆ.
ಒಟ್ಟಾರೆ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ ಕಳೆದ ವಾರದಲ್ಲಿ ಪರಶುರಾಂಪುರ ಠಾಣೆವ್ಯಾಪ್ತಿಯಲ್ಲಿ ನಗರ ಸೇರಿದಂತೆ ವಿವಿಧೆ ಕಳುವಾಗಿದ್ದ ಸುಮಾರು 30 ಕ್ಕೂ ಹೆಚ್ಚು ಬೈಕ್ ಹಾಗೂ ಕಳ್ಳರನ್ನು ಬಂದಿಸಿರುವುದು ವರದಿಯಾಗಿದೆ.
0 Comments