ಚಳ್ಳಕೆರೆ ಮೇ 16 ಹಲವಾರು ವರ್ಷಗಳಿಂದ ಸ್ವತಂ ಸೂರು ಇಲ್ಲದೆ ಸರಕಾರಿ ಜಮೀನಿನಲ್ಲಿ ವಾಸ ಮಾಡುವ ಜನವಸತಿ ಪ್ರದೇಶಗಳನ್ನು ಕಂದಾಯಗ್ರಾಮಗಳನ್ನಾಗಿ ಘೋಷಣೆ ಮಾಡಿದೆ.
ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ಉಪವಿಭಾಗಧಿಕಾರಿ ಎಂ. ಕಾರ್ತಿಕ್ ಅಧ್ಯಕ್ಷತೆಯಲ್ಲಿ ಚಳ್ಳಕೆರೆ ತಾಲೂಕಿನ ಐದು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪರೀಶಿಲನೆ ನಡೆಸಿದ್ದಾರೆ.
ಈಗಾಗಲೇ ಇರುವ ಗ್ರಾಮಗಳಲ್ಲಿ ದಾಖಲಾತಿಗಳು ಇಲ್ಲದೆ ಸರಕಾರಿ ಜಮೀನುಗಳಲ್ಲಿ ವಾಸದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ
.
![](https://janadhwani.in/wp-content/uploads/2024/05/WhatsApp-Image-2024-05-16-at-7.21.54-PM.jpeg)
ಇನ್ನೂ ಹೊಸ ಕಂದಾಯ ಗ್ರಾಮವಾದ ನಂತರ ಮೂಲ ಭೂತ ಸೌಲಭ್ಯದ ಜೊತೆಗೆ ಸ್ವತಃ ವಾಸದ ಮನೆಯ ಹಕ್ಕು ಪತ್ರ ಸಿಗುತ್ತದೆ ಈಗೇ ಸರಕಾರದ ಯೋಜನೆಗಳಿಗೆ ಇಲ್ಲಿನ ಜನರು ಅರ್ಹರಾಗುತ್ತಾರೆ ಎನ್ನಲಾಗಿದೆ.
ಸಭೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗರು ಹಾಗೂ ಫಲಾನುಭವಿಗಳು ಸಾರ್ವಜನಿಕರು ಹಾಜರಿದ್ದರು.
0 Comments