ತಾಮ್ರದದ ತಂತಿ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ರಹಳ್ಳಿ ಠಾಣೆಯ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

by | 14/02/24 | ಕ್ರೈಂ

ಚಿತ್ರಹಳ್ಳಿ ಫೆ.14. ತಾಮ್ರತಂತಿ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ರಹಳ್ಳಿ ಠಾಣೆಯ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ನಗರ ಜೋಗಿಮಟ್ಟಿ ರೋಡ್‌ನ ವಾಸಿಯಾದ ನವೀನ್ ಕುಮಾರ್ ವಿಂಡ್ ವರ್ಲ್ಡ್
ಲಿಮಿಟೆಡ್ ಕಂಪೆನಿಯ ಆಡಳಿತ ವ್ಯವಸ್ಥಾಪಕರು ನೀಡಿದ ದೂರಿನಲ್ಲಿ ದಿನಾಂಕ8.10.2023 ರಂದು ರಾತ್ರಿ
ವೇಳೆಯಲ್ಲಿ ಹೊಳಲ್ಕೆರೆ ತಾಲ್ಲೂಕ್ ತೇಕಲವಟ್ಟಿ ಗ್ರಾಮದ ಬಳಿ ಇರುವ ತಮ್ಮ ಕಂಪೆನಿಯ ಜಿಮ್ ಒನ್
ರೋಡ್-02 ಸೈಟ್‌ನಲ್ಲಿ 08 ಪವನ ವಿದ್ಯುತ್ ಕೇಂದ್ರಗಳಿಗೆ ಅಳವಡಿಸಿರುವ 300 Sq.mm, ನ ಸುಮಾರು
700 ಮೀಟರ್ ತಾಮ್ರದ ವಿದ್ಯುತ್ ವಾಹಕ ಕೇಬಲ್‌ಗಳನ್ನು ಯಾರೋ ಕಳ್ಳರು ಕಟ್ ಮಾಡಿಕೊಂಡು
ತೆಗೆದುಕೊಂಡು ಹೋಗಿದ್ದು, ಇದರ ಸುಮಾರು7 ಲಕ್ಷ ರೂ ಗಳಾಗಬಹುದು. ಕಳ್ಳತನವಾಗಿರುವ
ಮಾಲನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ದೂರು ಸ್ವೀಕರಿಸಿ ತಂಡ ರಚನೆ ಮಾಡಿ ದಿನಾಂಕ:13.10.2023 ರಂದು
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 149/2023 ಕಲಂ: 379 ಐ.ಪಿ.ಸಿ ರೀತ್ಯಾ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಸದರಿ ಪ್ರಕರಣದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಾನ್ಯ ಪೊಲೀಸ್
ಅಧೀಕ್ಷಕರವರ ಮಾರ್ಗದರ್ಶನದ ಮೇರೆಗೆ ಹೊಳಲ್ಕೆರೆ ವೃತ್ತದ ಎಂ.ಬಿ ಚಿಕ್ಕಣ್ಣನವರ್, ಸಿಪಿಐ,
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಪಿ.ಎಸ್.ಐ ಕಾಂತರಾಜು ಹಾಗೂ ಸಿಬ್ಬಂದಿಯವರನ್ನು
ಒಳಗೊಂಡ ತಂಡವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಬಾತ್ಮೀದಾರರ ಮಾಹಿತಿಯ
ಆಧಾರದ ಮೇಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೆ
ಒಳಪಡಿಸಲಾಗಿರುತ್ತದೆ.
ಎ-1 ಗುರುಮೂರ್ತಿ ಕೆ ತಂದೆ ಕೆಂಚಪ್ಪ, 24 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ಜಿಲ್ಲೆ.
ಎ-2 ಸಂತೋಷ್ ಕೆ ತಂದೆ ಕೆಂಚಪ್ಪ, 24 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ
ಜಿಲ್ಲೆ.
ಎ-3 ಸಣ್ಣಕೆಂಚಪ್ಪ ತಂದೆ ಶಿವಲಿಂಗಪ್ಪ, 23 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ಜಿಲ್ಲೆ ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಸದರಿ ಆರೋಪಿತರ ಮಾಹಿತಿಯ ಮೇರೆಗೆಎ-4, ಕೆ.ಎಸ್ ರಾಘವೇಂದ್ರ ಯಾನೆ ಸ್ವಾಮಿ ತಂದೆ ಸಿದ್ದಪ್ಪ, 30 ವರ್ಷ, ಡ್ರೈವರ್ ಕೆಲಸ, ಕೊಳಾಳ್
ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ಎ-7 ವೆಂಕಟೇಶ್ ಜೆ ತಂದೆ ಲೇಟ್ ಜಯ್ಯಪ್ಪ, 42 ವರ್ಷ, ವ್ಯಾಪಾರ ವೃತ್ತಿ, ಹೆಚ್.ಡಿ ಪುರ ಗ್ರಾಮ,
ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ಎ-8 ಡಿ ರಾಜು ತಂದೆ ದೇವರಾಜ, 26 ವರ್ಷ, ಚಾಲಕ ವೃತ್ತಿ, ಹೆಚ್.ಡಿ ಪುರ ಗ್ರಾಮ, ಹೊಳಲ್ಕೆರೆ
ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ವಿಚಾರಣೆಯಲ್ಲಿ ಮೇಲ್ಕಂಡ ಎ-1 ರಿಂದ ಎ-4 ಆರೋಪಿತರು, ಎ-5 ಕೃಷ್ಣ ತಂದೆ ಪಾತಪ್ಪ, 27
ವರ್ಷ, ಡ್ರೈವರ್ ಕೆಲಸ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ ಹಾಗೂ ಎ-6
ಚಂದ್ರು ತಂದೆ ತಿಪ್ಪೇಸ್ವಾಮಿ, 25 ವರ್ಷ, ಡ್ರೈವರ್ ಕೆಲಸ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ರವರೊಂದಿಗೆ ಸೇರಿಕೊಂಡು ತೇಕಲವಟ್ಟಿ ಗ್ರಾಮದ ಗುಡ್ಡದ ಮೇಲಿರುವ ವಿಂಡ್ ಫ್ಯಾನ್‌ಗಳಲ್ಲಿ
ಅಳವಡಿಸಿರುವ ಕಾಪರ್ ವೈರ್‌ನ ವಿದ್ಯುತ್ ಕೇಬಲ್‌ಗಳನ್ನು ಕಳ್ಳತನದಿಂದ ಕಟ್ ಮಾಡಿಕೊಂಡು
ಮೋಟಾರ್ ಬೈಕ್‌ಗಳ ಸಹಾಯದಿಂದ ಗುಡ್ಡದಿಂದ ಕೆಳಗೆ ತಂದು ಎ-7 ಆರೋಪಿಗೆ ಕಳ್ಳತನ ಮಾಡಿರುವ
ಸ್ಪಲ್ಪ ಮಾಲನ್ನು ಮಾರಾಟ ಮಾಡಿದ್ದು, ಅದನ್ನು ಎ-7 ಆರೋಪಿಯು ಎ-8 ಆರೋಪಿಯ ಬಾಬು ಟಾಟಾ
ಎಸಿಇ ಲಗೇಜ್ ವಾಹನದಲ್ಲಿ ಜಗಳೂರಿನ ಒಂದು ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ಹಾಗೂ
ಎ-1 ರಿಂದ ಎ-6 ಆರೋಪಿತರು ಕಳ್ಳತನ ಮಾಡಿದ ಉಳಿದ ಮಾಲನ್ನು ಹಿರಿಯೂರಿನ ಒಂದು ಗುಜರಿ
ಅಂಗಡಿಯ ಮಾಲೀಕರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ದಿನಾಂಕ:07.02.2024 ರಂದು ಎ-1 ರಿಂದ ಎ-4 ಆರೋಪಿತರಿಂದ ಹಿರಿಯೂರು ನಗರದ ಗುಜುರಿ
ತೂಕದ
ಮಾಲೀಕನಿಗೆ ಮಾರಿದ್ದ 85.600
ಕಾಪರ್ ವೈರನ್ನು
ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಇದರ ಅಂದಾಜು ಬೆಲೆ 77,040/- ರೂ ಇರುತ್ತದೆ. ಎ-1 ಮತ್ತು
ಎ-8 ಆರೋಪಿತರಿಂದ ಜಗಳೂರಿನ ಗುಜರಿ ಅಂಗಡಿ ಮಾಲೀಕನಿಗೆ ಮಾರಿದ್ದ 350.15 ಕೆ.ಜಿ ತೂಕದ
ಕಾಪರ್ ವೈರನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಇದರ ಅ೦ದಾಜು ಬೆಲೆ 3,15,135/- ರೂ.
ಇರುತ್ತದೆ. ಆರೋಪಿತರು ಕಳ್ಳತನ ಮಾಡಿದ್ದ ಕಾಪರ್ ವೈರ್‌ಗಳನ್ನು ಸಾಗಾಣಿಗೆ ಮಾಡಲು ಬಳಸಿದ
ವಾಹನಗಳಾದ 1] ಕೆಎ-68-2684 ಟಾಟಾ ಎಸಿಇ ಲಗೇಜ್ ವಾಹನ ಅ೦ದಾಜು ಬೆಲೆ 6,00,000/- 2]
ಅಂಗಡಿಯ
ಕೆಎ-16-ಇ-3814 ನೇ ನಂಬರಿನ ಬೈಕ್‌ನ ಅಂದಾಜು ಬೆಲೆ 1 ಲಕ್ಷ ರೂ3] ಕೆಎ-16-ಇಆರ್-2551
ನೇ ಬೈಕ್ ಅಂದಾಜು ಬೆಲೆ 1ಲಕ್ಷ ರೂ/- ಅನ್ನು ಅಮಾನತ್ತುಪಡಿಸಿಕೊಂಡಿದ್ದು, ಮೇಲ್ಕಂಡ ಮಾಲು
ಮತ್ತು ವಾಹನಗಳ ಒಟ್ಟು ಮೌಲ್ಯ 11,92,175/- ರೂಪಾಯಿಗಳು ಆಗಿರುತ್ತದೆ. ಸದರಿ ಪ್ರಕರಣದಲ್ಲಿನ
ಎ-5 ಮತ್ತು ಎ-6 ಆರೋಪಿತರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಹಾಗೂ ತನಿಖೆ
ಮುಂದುವರೆದಿರುತ್ತದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಎಂ.ಬಿ ಚಿಕ್ಕಣ್ಣನವರ್, ಸಿಪಿಐ, ಹೊಳಲ್ಕೆರೆ ವೃತ್ತ,
ಕಾಂತರಾಜು, ಪಿ.ಎಸ್.ಐ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಯವರಾದ
ಆರ್.ಡಿ.ರಮೇಶ್‌ಕುಮಾರ, ರುದ್ರೇಶ್ (ಚಿಕ್ಕಜಾಜೂರು ಠಾಣೆ), ತಿಮ್ಮಣ್ಣ, ಸನಾವುಲ್ಲಾ. ರವಿಕುಮಾರ,
ಕುಬೇರಪ್ಪ, ನೂರ್ ಅಹಮದ್ ನದಾಪ್, ಸಿದ್ದನಗೌಡ ರವರುಗಳ ಕಾರ್ಯವನ್ನು ಮಾನ್ಯ ಪೊಲೀಸ್
ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page