ತಾಪಂ ನೂತನ ಇಒ ಶಶಿಧರ್ ಅಧಿಕಾರ ಸ್ವೀಕಾರ-. ಅಧಿಕಾರ ಹಸ್ಥಾಂತರಿಸಿದ ವರ್ಗಾವಣೆ ಗೊಂಡ ಇಒ ಜಿ.ಕೆ.ಹೊನ್ನಯ್ಯ ಇಬ್ಬರಿಗೂ ಸನ್ಮಾನಿಸಿ ಗೌರವಿಸಿದ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ.

by | 27/10/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ.27. ಸರ್ಕಾರಿ ಸೇವೆ ಮಾಡುವ ಅಧಿಕಾರಿಗಳು ನಿಂತ ನೀರಾಗಬಾರದು. ತಾನು ಎಷ್ಟು ವರ್ಷ ಅಧಿಕಾರದಲ್ಲಿದ್ದೇನೆ ಎಂಬುದು ಮುಖ್ಯವಲ್ಲ ಅಧಿಕಾರದಲ್ಲಿದ್ದಾಗ ಜನರಿಗೆ ಸೇವೆ ಮಾಡಿದ್ದೇವೆ ಎಂಬುದು ಮುಖ್ಯ ಎಂಬು ಮುಖ್ಯ ಎಂದು ವರ್ಗಾವಣೆಗೊಂಡ ತಾಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿದರು.

ನಗರದ ತಾಲೂಕು ಪಂಚಾಯತ್ ತಾಪಂ ಇಒ ಕಚೇರಿಯಲ್ಲಿ ನೂತನವಾಗಿ ವರ್ಗಾವಣೆಯಾಗಿ ಬಂದ ತಾಒಂ ಇಒ ಶಶಿಧರ್ ಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು.ನೈರ್ಮಲ್ಯ. ಬೀದಿ ದೀಪ. ಇ ಸ್ವತ್ ಸೇರಿದಂತೆ ಸರಕಾರದಿಂದ ಬಂದ ಸೌಲಭ್ಯಗಳನ್ನು‌ ಅರ್ಹ ಫಲಾನುಭವಿಗಳಿಗೆ ತಲುಪಿಸಿದರೆ ಹಾಗೂ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮಯಕ್ಕೆ ಸ್ಪಂಧಿಸಿ ಕೆಲಸ ಮಾಡಿದರೆ ನಿಮ್ಮ ಬಗ್ಗೆ ಯಾವುದೇ ದೂರುಗಳು ಬರುವುದಿಲ್ಲ. ಸಾರ್ವಜನಿಕರ ಜತೆ ಪ್ರೀತಿಯಿಂದ ಇದ್ದರೆ, ಅವರ ಬೇಕು-ಬೇಡಿಕೆಗಳಿಗೆ ಸಕಾಲಕ್ಕೆ ಸ್ಪಂದಿಸಿ ಅಗತ್ಯ ಸಹಾಯ ಹಸ್ತ ಚಾಚಿದರೆ ಪ್ರೀತಿ, ಗೌರವ ಸಿಗುತ್ತದೆ ಆದ್ದರಿಂದ ಗ್ರಾಮೀಣ ಜನರ ನಾಡಿ ಮಿಡಿತ ಅರಿತು ಕರ್ತವ್ಯ ನಿರ್ವಹಿಸುವಂತೆ ಪಿಡಿಒ ಗಳಿಗೆ ಕಿವಿ ಮಾತು ಹೇಳಿದರು.

ನೂತನ ತಾಪಂ ಇಒ ಶಶಿಧರ್ ಸನ್ಮಾನ ಸ್ವೀಕರಿಸಿ ಅಧಿಕಾರವಹಿಸಿಕೊಂಡುಮಾತನಾಡಿ ಚಳ್ಳಕೆರೆ ತಾಲೂಕು ದೊಡ್ಡ ಕೇಂದ್ರ 40 ಗ್ರಾಮಪಂಚಾಯತ್ ಕೇಂದ್ರಗಳನ್ನು ಹೊಂದಿದ್ದು ಬರಪೀಡಿತ ಪ್ರದೇಶವಾಗಿದ್ದು ಸರಕಾರದಿಂದ ಬಂದ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸುವ ಜನತೆ ಸರಕಾರಗಳಿಂದ ಬಂದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಲ್ಲರೂ ಒಂದಾಗಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು ಸಭೆಯಲ್ಲಿ ಸಮಾಜಾ ಕಲ್ಯಾಣಾಧಿಕಾರಿ ಮಂಇಪ್ಪ ಸಹಾಯಕ ನಿರ್ಧೇಶಕ ಸಂತೋಷ್. ಪಿಆರ್ ಡಿ ಸಹಾಯಕ ನಿರ್ಧೇಶಕ ಸಂಪಂತ್. ಯೋಜನಾಧಿಕಾರಿ ಕೆಂಚಪ್ಪ.ಅಕ್ಷದಾಸೋಹ ಸಹಾಯಕ ನಿರ್ಧೇಶಕ ತಿಪ್ಪೇಸ್ವಾಮಿ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ. ಪಿಡಿಒ ಗುಂಡಪ್ಪ.ಇನಾಯತ್ ಪಾಷ. ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *